ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ – ನಿಮ್ಮ ಮನೆಯಲ್ಲಿ ಬಾಲ ಗೋಪಾಲ ವಿಗ್ರಹ ಇದ್ದರೆ ತಪ್ಪದೇ ಈ ಕೆಲಸ ಮಾಡಿ..

ಇಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ – ನಿಮ್ಮ ಮನೆಯಲ್ಲಿ ಬಾಲ ಗೋಪಾಲ ವಿಗ್ರಹ ಇದ್ದರೆ ತಪ್ಪದೇ ಈ ಕೆಲಸ ಮಾಡಿ..

ನ್ಯೂಸ್ ಆ್ಯರೋ : ದೇಶದ ವಿವಿಧ ಭಾಗಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಡಗರ ಆರಂಭವಾಗಿದೆ. ಎಲ್ಲರ ಮನೆಗಳಲ್ಲಿ ಸಿದ್ದತೆ ನಡೆಯುತ್ತಿದ್ದು, ಶ್ರೀ ಕೃಷ್ಣನ ಸ್ವಾಗತಕ್ಕೆ ಹೆಂಗಳೆಯರು ಸಿದ್ಧರಾಗಿದ್ದಾರೆ.

ಅಷ್ಟಮಿ ದಿನ ಸಾಮಾನ್ಯವಾಗಿ ಎಲ್ಲರೂ ಬಾಲ ಗೋಪಾಲನ ವಿಗ್ರಹವನ್ನು ಅಥವಾ ಲಡ್ಡು ಗೋಪಾಲನ ವಿಗ್ರಹವನ್ನು ಪೂಜೆ ಮಾಡುತ್ತಾರೆ. ಆದರೆ ಬಾಲ ಗೋಪಾಲ ವಿಗ್ರಹ ಇರುವ ಮನೆಯಲ್ಲಿ ಹೆಚ್ಚು ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಕೇವಲ ಕೃಷ್ಣ ಜನ್ಮಾಷ್ಟಮಿಯ ದಿನ ಮಾತ್ರ ಅಲ್ಲ ಪ್ರತಿದಿನ ಸಹ ಈ ಬಾಲ ಗೋಪಾಲನಿಗೆ ಸರಿಯಾದ ಪೂಜೆ ಮಾಡಿದರೆ ಯಶಸ್ಸು ಲಭಿಸುತ್ತದೆ. ಅದರಲ್ಲೂ ಅಷ್ಟಮಿಯ ಈ ವಿಶೇಷ ದಿನದಂದೂ ಕೆಲ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ, ಸಂಪತ್ತು ಅಭಿವೃದ್ದಿಯಾಗುತ್ತದೆ. ಹಾಗಾದ್ರೆ ಬಾಲ ಗೋಪಾಲ ವಿಗ್ರಹ ಇದ್ದರೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ..

ತಪ್ಪದೇ ಸ್ನಾನ ಮಾಡಿಸಿ

ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ಅದಕ್ಕೆ ಪ್ರತಿದಿನ ಸ್ನಾನ ಮಾಡಿಸುವುದು ಕಡ್ಡಾಯ. ಕೆಲವೊಂದು ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರೆ ಈ ಕೃಷ್ಣ ಜನ್ಮಾಷ್ಟಮಿಯಂದು ನೀವು ಸಣ್ಣ ಶಂಖವನ್ನು ತೆಗೆದುಕೊಂಡು ಅದಕ್ಕೆ ಮಡಿ ನೀರನ್ನು ಅಂದರೆ ಶುದ್ಧವಾದ ನೀರನ್ನು ತುಂಬಿಸಿ. ನಂತರ ಒಂದು ತಟ್ಟೆಯಲ್ಲಿ ಈ ಬಾಲ ಗೋಪಾಲನ ವಿಗ್ರಹವನ್ನು ಇಟ್ಟು ಸ್ನಾನ ಮಾಡಿಸಿ. ನೀವು ಕೃಷ್ಣ ಜನ್ಮಾಷ್ಟಮಿಯಂದು ಹಾಲಿನಿಂದ ಸಹ ಬಾಲ ಗೋಪಾಲನ ಸ್ನಾನ ಮಾಡಿಸಬಹುದು.

ಹೊಸ ಬಟ್ಟೆಯನ್ನು ಹಾಕಿ

ಸ್ನಾನದ ನಂತರ ಹೇಗೆ ನಾವು ಬಟ್ಟೆಯನ್ನು ಹಾಕುತ್ತೇವೆಯೋ ಹಾಗೆಯೇ ಬಾಲ ಗೋಪಾಲನಿಗೆ ಸಹ ಹೊಸ ಬಟ್ಟೆಯನ್ನು ಹಾಕಬೇಕು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಕೃಷ್ಣನಿಗೆ ಯಾವಾಗಲೂ ಶುದ್ಧವಾದ ಬಟ್ಟೆಯನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಬಟ್ಟೆ ಒಗೆಯದೇ ಅದನ್ನು ಮತ್ತೆ ಮರೆತು ಸಹ ಹಾಕಬೇಡಿ.

ಅಲಂಕಾರವಿಲ್ಲದೇ ಕೃಷ್ಣನ ಪೂಜೆ ಅಪೂರ್ಣ

ನೀವು ಕೃಷ್ಣನನ್ನು ಗಮನಿಸಿದ್ದೀರಾ? ಯಾವಾಗಲೂ ಸುಂದರವಾಗಿ ಕಾಣುತ್ತಾನೆ. ಹಾಗೆಯೇ ಬಾಲ ಗೋಪಾಲನನ್ನು ನಾವು ಸಿಂಗರಿಸಬೇಕು. ವಿಗ್ರಹಕ್ಕೆ ಶ್ರೀಗಂಧ ಹಚ್ಚಿ, ಆಭರಣಗಳನ್ನು ಹಾಕಿ ಅಲಂಕಾರ ಮಾಡಬೇಕು. ಅಲ್ಲದೇ, ಶ್ರೀ ಕೃಷ್ಣನ ಆರಾಧನೆಯು ಮೇಕಪ್ ಇಲ್ಲದೇ ಪೂರ್ಣವಾಗುವುದಿಲ್ಲ, ಹಾಗಾಗಿ ಶ್ರೀಕೃಷ್ಣನಿಗೆ ಕುಂಕುಮ, ನವಿಲುಗರಿಯನ್ನು ಸಹ ಹಾಕಿ ಅಲಂಕಾರ ಮಾಡಿ ಪೂಜೆ ಮಾಡಬೇಕು.

ಬೆಣ್ಣೆಯ ನೈವೇದ್ಯ ಬಹಳ ಉತ್ತಮ

ಯಾವುದೇ ಹಬ್ಬ ಅಥವಾ ಪೂಜೆಯಾಗಲಿ ನೈವೇದ್ಯ ಇಲ್ಲದೇ ಆಗುವುದಿಲ್ಲ. ಅದರಲ್ಲೂ ಕೃಷ್ಣನಿಗೆ ವಿಶೇಷವಾಗಿ ನೈವೇದ್ಯ ಮಾಡಬೇಕು. ಬೆಣ್ಣೆ, ಮೊಸರು, ಪಾಯಸ, ಬರ್ಫಿ, ಲಡ್ಡು ಹೀಗೆ ವಿಶೇಷ ಸ್ವೀಟ್ಗಳನ್ನು ನೈವೇದ್ಯ ಮಾಡಬೇಕು. ಮುಖ್ಯವಾಗಿ ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಸಾಧ್ಯವಾದಷ್ಟು ಬೆಣ್ಣೆಯಿಂದ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಅವಲಕ್ಕಿಯ ಪದಾರ್ಥಗಳನ್ನು ನೀಡಬೇಕು.

ಆರತಿ ಮಾಡಿ ಅಥವಾ ದೀಪ ಬೆಳಗಿಸಿ

ಹಬ್ಬದ ದಿನ ಸಾಮಾನ್ಯವಾಗಿ ಆರತಿ ಮಾಡುತ್ತೇವೆ. ಆದರೆ ಬಾಲ ಗೋಪಾಲ ಮನೆಯಲ್ಲಿ ಇದ್ದರೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಆರತಿ ಮಾಡುವುದು ಉತ್ತಮ. ಆರತಿ ಸಾಧ್ಯವಾಗುವುದಿಲ್ಲ ಎಂದರೆ ದೀಪ ಬೆಳಗುವುದನ್ನು ತಪ್ಪಿಸಬೇಡಿ. ಅಲ್ಲದೇ, ಕೃಷ್ಣನ ವಿಗ್ರಹದ ಜೊತೆ ರಾಧೆಯ ಫೋಟೋ ಇಟ್ಟರೆ ಇನ್ನೂ ಒಳ್ಳೆಯ ಫಲಗಳು ಲಭಿಸುತ್ತದೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *