ಅಪ್ಪಿತಪ್ಪಿಯೂ ಬೆಳಿಗ್ಗೆ ಎದ್ದಾಕ್ಷಣ ಈ ವಸ್ತುಗಳನ್ನು ನೋಡಬೇಡಿ – ಆ ವಸ್ತುಗಳು ಯಾವುವು..? ಇಲ್ಲಿದೆ ಮಾಹಿತಿ..

ಅಪ್ಪಿತಪ್ಪಿಯೂ ಬೆಳಿಗ್ಗೆ ಎದ್ದಾಕ್ಷಣ ಈ ವಸ್ತುಗಳನ್ನು ನೋಡಬೇಡಿ – ಆ ವಸ್ತುಗಳು ಯಾವುವು..? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ರಾತ್ರಿ ಸೊಗಸಾದ ನಿದ್ದೆ ಮಾಡಿ, ಬೆಳಗ್ಗೆ ಎದ್ದ ಕೂಡಲೇ ಆಹ್ಲಾದಕರವಾದ ಮನಸ್ಥಿತಿಯಿಂದ ಕೆಲಸದಲ್ಲಿ ತೊಡಗಿಕೊಂಡರೆ ಎಷ್ಟೆಲ್ಲ ಸಮಾಧಾನ? ಇಂಗ್ಲಿಷ್ನಲ್ಲಿ ಒಂದು ಮಾತಿದೆ, ಆರಂಭ ಅದ್ಭುತವಾಗಿದ್ದಲ್ಲಿ ನಾವಂದುಕೊಂಡ ಕೆಲಸ ಅದರಲ್ಲೇ ಅರ್ಧ ಮುಗಿದುಹೋಗುತ್ತದೆ ಅಂತ..!

ನಿಮ್ಮ ಪೈಕಿ ಅದೆಷ್ಟು ಮಂದಿ ವಾಸ್ತು, ಶಕುನ, ಬೆಳಗ್ಗೆ ಎದ್ದ ತಕ್ಷಣದ ಶುಭ ಸೂಚನೆ ನಂಬುತ್ತೀರೋ ಗೊತ್ತಿಲ್ಲ. ಆದರೆ ನಂಬಿದರೆ ಖಂಡಿತಾ ನಷ್ಟವಂತೂ ಆಗಲ್ಲ. ವಾಸ್ತುಶಾಸ್ತ್ರದ ಪ್ರಕಾರವಾಗಿ ಬೆಳಗ್ಗೆ ಎದ್ದ ಕೂಡಲೇ ಕೆಲವು ವಸ್ತುಗಳನ್ನು ನೋಡಬಾರದು ಎನ್ನಲಾಗುತ್ತದೆ. ಒಂದು ವೇಳೆ ಹಾಗೆ ನೋಡಿದರೆ ಇಡೀ ದಿನದ ಕೆಲಸ ಹಾಳು ಅಂತಾರೆ. ಏನು ಆ ರೀತಿಯ ಅಶುಭ ವಸ್ತುಗಳು? ಯಾವುದನ್ನು ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಾಣುವಂತೆ ಅಥವಾ ನೋಡುವಂತೆ ಪರಿಸ್ಥಿತಿ ಇಟ್ಟುಕೊಳ್ಳಬಾರದು? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.

  • ಬೆಳಗ್ಗೆ ಎದ್ದ ತಕ್ಷಣ ಮುರಿದಿರುವ ಅಥವಾ ಒಡೆದು ಹೋಗಿರುವ ಪಾತ್ರೆ- ಪಗಡಗಳನ್ನು ನೋಡಬಾರದು.
  • ಅದೇ ರೀತಿಯಲ್ಲಿ ಬಟ್ಟೆ ಅಥವಾ ಮತ್ಯಾವುದರಿಂದಾದರೂ ಮುಚ್ಚಿರುವ ಗಂಟೆಯನ್ನು ನೋಡುವುದು ಸಹ ಶುಭ ಶಕುನ ಅಲ್ಲ. ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಇಡೀ ದಿನ ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಲೇ ಇರುತ್ತದೆ. ಜತೆಗೆ ನೆಮ್ಮದಿ ಇರುವುದಿಲ್ಲ.
  • ಇನ್ನೂ ಕೆಲವರಿಗೆ ಎದ್ದ ತಕ್ಷಣವೇ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ತವಕ. ಇದು ಕೂಡ ಒಳ್ಳೆಯದಲ್ಲ. ಹೀಗೆ ಮಾಡಿದರೆ ಇಡೀ ದಿನ ಅಹಿತಕರವಾದ ಘಟನೆಗಳೇ ನಡೆಯುತ್ತವೆ. ಆದ್ದರಿಂದ ನಮ್ಮ ಹಿರಿಯರು ಹೇಳಿಕೊಟ್ಟಿರುವಂತೆ, ಎರಡೂ ಕೈ ಜೋಡಿಸಿ, ಆಯಾ ಧರ್ಮದ ನಂಬಿಕೆ ಅನುಸಾರ (ಒಂದು ವೇಳೆ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇದ್ದಲ್ಲಿ ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೆ ಸರಸ್ವತಿ ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ) ಎಂದು ಎರಡೂ ಅಂಗೈ ಅನ್ನು ನೋಡಿಕೊಳ್ಳಬೇಕು.
  • ಈ ವಸ್ತುಗಳನ್ನು ನೋಡಬೇಡಿ

ಬೆಳಗ್ಗೆ ಎದ್ದ ತಕ್ಷಣ ಸೂಜಿ, ದಾರ, ಎಣ್ಣೆ ಮತ್ತು ಪಾತ್ರೆಗಳು ನೋಡಬಾರದು. ಇವುಗಳು ಶುಭಸೂಚಕ ವಸ್ತುಗಳಲ್ಲ.

  • ಬೆಳಗ್ಗೆ ನಿಮ್ಮ ನೆರಳನ್ನು ನೋಡುವುದು ಸಹಿತ ಒಳ್ಳೆಯದಲ್ಲ. ಒಂದು ವೇಳೆ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ.
  • ಅದೇ ರೀತಿ ಗಲೀಜಾದ ಅಥವಾ ಮುಸುರೆ ಪಾತ್ರೆಗಳನ್ನು ಬೆಳಗ್ಗೆ ನೋಡಬಾರದು. ಆದ್ದರಿಂದ ರಾತ್ರಿಯೇ ಪಾತ್ರೆಗಳನ್ನು ತೊಳೆಯುವುದು ಉತ್ತಮ. ಒಂದು ವೇಳೆ ಇಂಥ ಪಾತ್ರೆಗಳನ್ನು ಬೆಳಗ್ಗೆ ನೋಡಿದಲ್ಲಿ ಅಂಥ ಮನೆಯಲ್ಲಿ ಅಥವಾ ಅಂಥ ವ್ಯಕ್ತಿಗಳಿಗೆ ಹಣಕಾಸಿನ ಕೊರತೆ ಉಂಟಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *