ಮತ್ತೊಬ್ಬ ಖಲೀಸ್ತಾನಿ‌ ಉಗ್ರ ಕೆನಡಾದಲ್ಲಿ ಕಗ್ಗೊಲೆ – ಭಾರತದ ಕೈವಾಡ ಎಂದ ಕೆನಡಾ, ಭಾರತದಿಂದ ನಕಾರ

ಮತ್ತೊಬ್ಬ ಖಲೀಸ್ತಾನಿ‌ ಉಗ್ರ ಕೆನಡಾದಲ್ಲಿ ಕಗ್ಗೊಲೆ – ಭಾರತದ ಕೈವಾಡ ಎಂದ ಕೆನಡಾ, ಭಾರತದಿಂದ ನಕಾರ

ನ್ಯೂಸ್ ಆ್ಯರೋ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಅವರ ಸಹಾಯಕನಾದ ಖಲಿಸ್ತಾನಿ ಭಯೋತ್ಪಾದಕ ಸುಖ್‌ದೂಲ್‌ ಸಿಂಗ್‌ ಕೆನಡಾದಲ್ಲಿ ಗ್ಯಾಂಗ್ ನಡುವಿನ ಪೈಪೋಟಿಯಲ್ಲಿ ಸಾವನ್ನಪ್ಪಿದ್ದಾನೆಂದು ಮೂಲಗಳು ತಿಳಿಸಿವೆ.

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನನ್ನು ಹತ್ಯೆಯಾಗಿದೆ.

ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಸುಖ್‌ದೂಲ್‌ ಸಿಂಗ್‌ನನ್ನು (ಸುಖಾ ದುನೆಕೆ ಎಂದೇ ಖ್ಯಾತಿ) ಬುಧವಾರ (ಸೆಪ್ಟೆಂಬರ್‌ 20) ರಾತ್ರಿ ಹತ್ಯೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುಖಾ ದುನೆಕೆಯನ್ನು ಮೋಗಾ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ.

2017ರಲ್ಲಿ, ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನುಕೆ ತನ್ನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರೂ ಕೆನಡಾಕ್ಕೆ ಪಲಾಯನ ಮಾಡಲು ನಕಲಿ ದಾಖಲೆಗಳ ಮೇಲೆ ಪಾಸ್‌ಪೋರ್ಟ್ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದಿದ್ದನು. ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ ಜತೆ ಗುರುತಿಸಿಕೊಂಡಿರುವ ಈತ ಖಲಿಸ್ತಾನಿಗಳ ಉಗ್ರರ ಒಡನಾಟವನ್ನೂ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ದವಿಂದರ್‌ ಬಾಂಬಿಹಾ ಗ್ಯಾಂಗ್‌ನ ವಿರೋಧಿ ಬಣದ ಜತೆ ಆಗಾಗ ಕಾಳಗಗಳು ನಡೆಯುತ್ತಿವೆ. ಇಂತಹ ಸಂಘರ್ಷದಲ್ಲಿ ಸುಖಾ ದುನೆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜೂನ್‌ 19ರಂದು ಆಂತರಿಕ ಗ್ಯಾಂಗ್‌ವಾರ್‌ನಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಸರ‍್ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರ ಹತ್ಯೆಯ ಮಾದರಿಯೂ ಒಂದೇ ಆಗಿದೆ ಎಂದು ಮೂಲಗಳು ತಿಳಿಸಿವೆ. ನಿಜ್ಜರ್‌ಗೆ 15 ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಸುಖಾ ದುನೆಕೆಯು ಹಲವು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

ಇದೀಗ ನಿಜ್ಜರ್ ಸಾವಿನ ಆರೋಪಗಳ ಬೆನ್ನಲ್ಲೇ ದುನೆಕೆ ಹತ್ಯೆ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕತೆಗೆ ಮತ್ತಷ್ಟು ಹೊಡೆತ ನೀಡಲಿದೆ. ಕೆನಡಾ ಪ್ರಧಾನಿ ಆರೋಪವನ್ನು ಅಲ್ಲಗೆಳೆದಿರುವ ಭಾರತ, ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ಛೀಮಾರಿ ಹಾಕಿದೆ. ಇಷ್ಟೇ ಅಲ್ಲ 5 ದಿನದೊಳಗೆ ಭಾರತ ಬಿಟ್ಟು ತೊಲಗುವಂತೆ ಸೂಚನೆ ನೀಡಿದೆ. ಇತ್ತ ಕೆನಾಡದಲ್ಲಿರುವ ಹಿಂದೂಗಳಿಗೆ ಖಲಿಸ್ತಾನಿ ಬೆಂಬಲಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಬೆದರಿಕೆ ಹಾಕಿದೆ. ತಕ್ಷಣವೇ ಕೆನಡಾ ತೊರೆಯುವಂತೆ ಸೂಚನೆ ನೀಡಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *