ಪಿಎಂ ಕಿಸಾನ್ ಯೋಜನೆಯಿಂದ ಲಕ್ಷಾಂತರ ರೈತರು ವಂಚಿತರಾಗೋ ಸಾಧ್ಯತೆ – ಕಾರಣವೇನು ಗೊತ್ತಾ?
- ಸರ್ಕಾರಿ ಸೇವೆಗಳು
- June 7, 2023
- No Comment
- 478
ನ್ಯೂಸ್ ಆ್ಯರೋ : ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ರೈತರ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 6000 ರೂ ಜಮಾ ಮಾಡುತ್ತದೆ. ಆದರೆ 14 ಕಂತಿಗಾಗಿ ಕಾಯುತ್ತಿರುವ ರೈತರಿಗೆ ಈ ಬಾರಿ ನಿರಾಸೆಯಾಗಿದೆ. ಜೊತೆಗೆ ಯಾವಾಗ ಹಣ ಜಮೆಯಾಗುತ್ತದೆ ಎಂಬ ಪ್ರಶ್ನೆಗೂ ಕೂಡ ಅಧಿಕೃತ ಉತ್ತರ ಲಭಿಸಿಲ್ಲ. ಈ ಯೋಜನೆಯಡಿ ಈಗಾಗಲೇ 13 ನೇ ಕಂತು ಬಿಡುಗಡೆ ಮಾಡಲಾಗಿದೆ. ಅದಾಗ್ಯೂ ಇನ್ನೂ ಕೂಡ ಕೆಲ ರೈತರು ಹದಿಮೂರನೇ ಕಂತು ಸ್ವೀಕರಿಸಿಲ್ಲ. ಜೊತೆಗೆ ಲಕ್ಷಾಂತರ ರೈತರು ಮುಂದಿನ ಕಂತಿನಿಂದ ವಂಚಿತರಾಗುವ ಸಾಧ್ಯತೆಗಳಿವೆ.
ಇ-KYC ನವೀಕರಿಸಿ!
ಇಕೆವೈಸಿ ಮಾಡಿಸುವಂತೆ ಸರ್ಕಾರ ರೈತರಿಗೆ ಆದೇಶ ನೀಡಿದೆ. ಆದರೂ ಎಷ್ಟೋ ರೈತರೂ ಇನ್ನೂ ಕೂಡ ಇಕೆವೈಸಿ ನವೀಕರಿಸಿಲ್ಲ. ಇದರಿಂದಾಗಿ ರೈತರ ಮುಂದಿನ ಕಂತು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ರೈತರು ಇಕೆವೈಸಿ ಪೂರ್ಣಗೊಳಿಸದ ಹೊರತಾಗಿ ಪಿಎಂ ಕಿಸಾನ್ ಯೋಜನೆಯಡಿ ಮುಂದಿನ ಕಂತು ದೊರೆಯುವುದು ಅನುಮಾನ ಎನ್ನಲಾಗಿದೆ.
ಇ-KYC ಮಾಡಿಸುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯ ಪಡೆಯಲು ಇಕೆವೈಸಿ ಕಡ್ಡಾಯವಾಗಿದೆ. ಹಾಗಿದ್ದರೆ ಇದನ್ನು ಮಾಡಿಸುವುದು ಹೇಗೆ ಎಂದು ನೋಡೋಣ.
1.ಮೊದಲು ನೀವು www.pmkisan.gov.in ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ತೆರಳಬೇಕು.
2.ನಂತರ ಮುಖಪುಟದಲ್ಲಿ ಕಾಣುವ ಇಕೆವೈಸಿ ಮೇಲೆ ಟ್ಯಾಪ್ ಮಾಡಿ.
3.ಈಗ ನಿಮ್ಮ ಆಧಾರ್ ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ನಮೂದಿಸಿ.
4.ಮುಂದೆ ರೈತರು ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
14ನೇ ಕಂತನ್ನು ಪಡೆಯಲು ರೈತರು ಭೂಮಿಯನ್ನು ಸಹ ಪರಿಶೀಲಿಸಬೇಕಾಗುತ್ತದೆ. ಕೃಷಿ ಇಲಾಖೆಯ ಕಚೇರಿಗೆ ಹೋಗುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರ ಇಂತಿದೆ.
- 1.ರೈತರ ಆದಾಯ ಪ್ರಮಾಣ ಪತ್ರ.
- 2.ಆಧಾರ್ ಕಾರ್ಡ್.
- 3.ಪಡಿತರ ಚೀಟಿ.
- 4.ಬ್ಯಾಂಕ್ ಪಾಸ್ ಬುಕ್.
- 5.ಭೂ ದಾಖಲೆಗಳು.
- 6.ಪಾಸ್ ಪೋರ್ಟ್ ಅಳತೆಯ ಫೋಟೋ.