Anna Bhagya Scheme : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಎಂದು ತಿಳಿಯೋದು ಹೇಗೆ? – ಸಂಪೂರ್ಣ ಮಾಹಿತಿ ಇಲ್ಲಿದೆ..
- ಸರ್ಕಾರಿ ಸೇವೆಗಳು
- July 14, 2023
- No Comment
- 310
ನ್ಯೂಸ್ ಆ್ಯರೋ : ಕಾಂಗ್ರೆಸ್ ತನ್ನ ಚುನಾವಣಾ ಭರವಸೆಯಲ್ಲಿ ಘೋಷಿಸಿರುವ ಅನ್ನಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ (Anna Bhagya scheme) ಜಾರಿಗೆ ತಂದಿದೆ. ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದ ಕಾರಣ 5 ಕೆಜಿ ಅಕ್ಕಿ ನೀಡಿ ಇನ್ನುಳಿದ 5 ಕೆಜಿಯ ಹಣವನ್ನು ಫಲಾನುಭವಿಯ ಖಾತೆಗೆ ಜಮೆ ಮಾಡುತ್ತಿದೆ.
ಪರ್ಯಾಯ ಕ್ರಮ
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಬರಬೇಕಿದ್ದ ಅಕ್ಕಿ ಮತ್ತು ಗೋಧಿ ಸ್ಥಗಿತವಾಗಿದ್ದರಿಂದ ರಾಜ್ಯ ಸರಕಾರ ಪರ್ಯಾಯ ಮಾರ್ಗ ಅನುಸರಿಸಿದ್ದು, ಫಲಾನುಭವಿಗಳಿಗೆ ಹಣ ವರ್ಗಾವಣೆ ಆರಂಭಿಸಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂ. ಅನ್ನು ಸರಕಾರ ಪಾವತಿಸಲಿದೆ.
ಅನ್ನಭಾಗ್ಯ ದುಡ್ಡು ಖಾತೆಗೆ ಬಂದಿದ್ಯಾ ಎನ್ನುವುದನ್ನು ಚೆಕ್ ಮಾಡುವ ವಿಧಾನ
ಮೊದಲು ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ ಆಗಿ. ಬಳಿಕ ಇ-ಸರ್ವಿಸ್ ಪೋರ್ಟಲ್ ನಲ್ಲಿ ಡಿಬಿಟಿ ಎನ್ನುವ ಲಿಂಕ್ ಕಂಡು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿನ ಸ್ಟೇಟಸ್ ಆಫ್ ಡಿಬಿಟಿ ಎನ್ನುವ ಆಯ್ಕೆ ಗೋಚರಿಸುತ್ತದೆ. ಅದನ್ನು ಆಯ್ಕೆ ಮಾಡಿ. ಬಳಿಕ ನಿಗದಿತ ಕಾಲಂನಲ್ಲಿ ರೇಷನ್ ಕಾರ್ಡ್ ನಂಬರ್ ಅಂದರೆ ಆರ್.ಸಿ. ನಂಬರ್ ಭರ್ತಿ ಮಾಡಬೇಕು.
ನಂತರ ನಿಮ್ಮ ರೇಷನ್ ಕಾರ್ಡ್ ಮೇಲ್ಭಾಗದಲ್ಲಿ ಕಾಣುವ ಆರ್.ಸಿ. ನಂಬರ್ ನಮೂದಿಸಿ ಮುಂದುವರಿಯಿರಿ ಎಂಬ ಆಯ್ಕೆ ಸೆಲೆಕ್ಟ್ ಮಾಡಿ. ಮುಂದಿನ ಪುಟದಲ್ಲಿ ನಿಮ್ಮ ಖಾತೆಗೆ ದುಡ್ಡು ಜಮೆ ಆಗಿದ್ಯಾ, ಆಗದಿದ್ದರೆ ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎನ್ನುವ ಮಾಹಿತಿ ಲಭಿಸಲಿದೆ.
ಪಡಿತರ ಚೀಟಿಗಳಲ್ಲಿ ಶೇ. 99ರಷ್ಟು ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದೆ ಮತ್ತು ಶೆ. 82ರಷ್ಟು ಕಾರ್ಡ್ ಗಳು ಸಕ್ರಿಯ ಬ್ಯಾಂಕ್ ಖಾತೆಗಳಿಗೆ ಸಂಪರ್ಕ ಹೊಂದಿವೆ. ಈಗಾಗಲೇ ಮೈಸೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿ ಹಲವೆಡೆಯ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗಿದೆ.