ಹಿಂದೂ ಯುವತಿ ಜೊತೆ ಎರಡು ವರ್ಷ ಗುಟ್ಟಾಗಿ ಸಂಸಾರ ಮಾಡಿದ್ದ ಅಮೀರ್ ಖಾನ್ – ಸಿನಿಮಾ ರಂಗಕ್ಕೆ ಬರೋಕು ಮುಂಚಿನ ನಟನ ಲವ್ವಿ ಡವ್ವಿ ಬಯಲು..!!
- ಮನರಂಜನೆ
- April 17, 2023
- No Comment
- 242
ನ್ಯೂಸ್ ಆ್ಯರೋ : ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಚಿತ್ರರಂಗಕ್ಕೆ ಬರುವ ಮೊದಲೇ ಹಿಂದೂ ಯುವತಿಯ ಜೊತೆ ಮದುವೆಯಾಗಿ ಎರಡು ವರ್ಷ ಕದ್ದುಮುಚ್ಚಿ ಸಂಸಾರ ಮಾಡಿದ್ದರು ಎಂಬ ವಿಚಾರ ಬಯಲಾಗಿದ್ದು, ಮದುವೆಯಾದ 2 ವರ್ಷಗಳ ನಂತರ ಅವರು ಇದನ್ನು ಅಮೀರ್ ಖಾನ್ ಬಹಿರಂಗಪಡಿಸಿದ್ದರು ಎಂಬ ಮಾಹಿತಿ ಲಭಿಸಿದೆ.
ನಟ ಅಮೀರ್ ಖಾನ್ 21 ವರ್ಷದವನಿರುವಾಗಲೇ ಗೆಳತಿ ರೀನಾ ದತ್ತಾ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು. ಆಮೀರ್ ಈ ವಿಷಯವನ್ನು ಪ್ರಪಂಚದಿಂದ ಮುಚ್ಚಿಟ್ಟಿದ್ದಲ್ಲದೆ, ತನ್ನ ಕುಟುಂಬ ಸದಸ್ಯರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ. ಆಮೀರ್ ರೀನಾ ಅವರನ್ನು ಮದುವೆಯಾದಾಗ ಆಕೆಗೆ 19 ವರ್ಷ ವಯಸ್ಸು. ಇದು ಬಯಲಾದದ್ದು ಎರಡು ವರ್ಷಗಳ ಬಳಿಕ. ಅದೂ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದಾಗಲೇ…!!
ತಮ್ಮ ಮದುವೆಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳನ್ನು ನಾನು ಬಯಸುವುದಿಲ್ಲ. ಆದ್ದರಿಂದ ಮದುವೆಯ ಕುರಿತು ಸ್ಪಷ್ಟನೆ ನೀಡುತ್ತಿರುವುದಾಗಿ ಆಮೀರ್ ಹೇಳಿದ್ದರು. ಅಮೀರ್ ಖಾನ್ ‘ಖಯಾಮತ್ ಸೆ ಖಯಾಮತ್ ತಕ್’ ಚಿತ್ರೀಕರಣದಲ್ಲಿದ್ದಾಗ, ಅವರು ರೀನಾ ಅವರನ್ನು ಮದುವೆಯಾಗಿದ್ದರು. ಅದು ಕೂಡ ಅವರ ಕುಟುಂಬದ ಯಾರಿಗೂ ತಿಳಿಸದೆ. ಹೀಗಿರುವಾಗ ಆಮೀರ್ ತಂದೆ ತಾಹಿರ್ ಹುಸೇನ್ ಮತ್ತು ಚಿಕ್ಕಪ್ಪ ನಾಸಿರ್ ಹುಸೇನ್ ಅವರಿಗೆ ಈ ವಿಷಯ ತಿಳಿದಾಗ ಮೊದಲಿಗೆ ಆಶ್ಚರ್ಯಪಟ್ಟರು, ನಂತರ ಇಬ್ಬರ ಮದುವೆಯನ್ನು ಸ್ವಲ್ಪ ಸಮಯದವರೆಗೆ ಮರೆಮಾಡಲು ನಿರ್ಧರಿಸಿದ್ದರು.
ಏಕೆಂದರೆ, ಆಗ ಆಮೀರ್ ಚಿತ್ರ ಬಿಡುಗಡೆಯಾಗಿರಲಿಲ್ಲ. ಈ ಮೊದಲೇ ಮದುವೆಯ ಗುಟ್ಟು ರಟ್ಟಾದರೆ ವಿಷಯ ಒಂದಕ್ಕೆ ಎರಡಾಗಿ, ಏನೇನೋ ಸುದ್ದಿಗಳು ಹರಡಿ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿದ್ದರು.
ಮದುವೆ ಮುಚ್ಚಿಡಲು ಕಾರಣವೇನು?
ಅಮೀರ್ ಹಾಗೂ ರೀನಾ ದತ್ತಾ ಅವರ ಎರಡು ಕುಟುಂಬಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಈ ಮದುವೆ ಅಸಾಧ್ಯವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ನಟ ರಹಸ್ಯವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಮತ್ತೊಂದೆಡೆ, ರೀನಾ ಅವರ ಸಹೋದರಿಗೆ ಆಮೀರ್ ಮೇಲೆ ಅನುಮಾನ ಬಂದಿತ್ತು. ಈ ಬಗ್ಗೆ ಮನೆಯವರಿಗೆ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಸಹೋದರಿಯ ಬೆದರಿಕೆಯ ನಂತರ, ರೀನಾ ಆಮೀರ್ ಮನೆಗೆ ತಲುಪಿ ತನ್ನ ಮದುವೆಯ ಬಗ್ಗೆ ನಟನ ತಂದೆಗೆ ತಿಳಿಸಿದಳು. ಆಮೀರ್ ತಂದೆ ಕೂಡ ರೀನಾ ಅವರನ್ನು ತನ್ನ ಸೊಸೆಯಾಗಿ ಸ್ವೀಕರಿಸಿ ಸ್ವಾಗತಿಸಿದರು.
ಆದರೆ, ರೀನಾಳ ತಂದೆಗೆ ಈ ಮದುವೆಯ ವಿಷಯ ತಿಳಿಯಿತು, ಅವರು ತುಂಬಾ ಆಘಾತಕ್ಕೊಳಗಾದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀ ದತ್ತಾ ಅವರನ್ನು ಆಮೀರ್ ಸಾಕಷ್ಟು ಉಪಚರಿಸಿದ ಬಳಿಕ ಆಮೀರ್ ಮೇಲೆ ಅವರಿಗೆ ಪ್ರೀತಿ ಉಕ್ಕಿ, ಆಶೀರ್ವಾದ ಕೊಟ್ಟರು. ಅಂದಹಾಗೆ ರೀನಾ ಅವರ ತಂದೆ ಏರ್ ಇಂಡಿಯಾದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅನ್ಯ ಧರ್ಮಿಯ ಯುವಕನ ಜೊತೆ ಮಗಳು ಮದುವೆಯಾಗಿದ್ದು ಅವರಿಗೆ ಸಹಿಸಲು ಆಗದೇ ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.