ಸ್ಪಂದನಾ ಹೆಸರಿನಲ್ಲಿ ನಕ್ಷತ್ರಾ ಹೋಮ – ಏನಿದರ ಮಹತ್ವ? ಈ ಹೋಮ ಮಾಡೋದು ಯಾಕೆ?
- ಮನರಂಜನೆ
- August 13, 2023
- No Comment
- 154
ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟು ಇಂದಿಗೆ 6 ದಿನಗಳಾದವು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು. ಬಳಿಕ ಶ್ರೀರಂಗ ಪಟ್ಟಣದಲ್ಲಿ ನಡೆದ ಅಂತಿಮ ವಿಧಿಗಳಲ್ಲಿ ನಕ್ಷತ್ರ ಹೋಮವನ್ನೂ ನೆರವೇರಿಸಲಾಯಿತು.
ಏನಿದು ನಕ್ಷತ್ರ ಹೋಮ?
ಸ್ಪಂದನಾ ಹೆಸರಿನಲ್ಲಿ ನಕ್ಷತ್ರ ಹೋಮ ಮಾಡಲಾಗಿದೆ. ಅವರು ಧನಿಷ್ಟಾ ಪಂಚಕ ನಕ್ಷತ್ರದಲ್ಲಿ ಮೃತಪಟ್ಟಿದ್ದರಿಂದ ಈ ಹೋಮ ಮಾಡಲಾಗಿದೆ. ನಕ್ಷತ್ರ ಹೋಮ ಮಾಡಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಜನ್ಮ ಕುಂಡಲಿಯಲ್ಲಿ ನಕ್ಷತ್ರದ ಕೆಟ್ಟ ಸ್ಥಾನವು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಕೆಲವು ಹೋಮ ನಡೆಸುವುದು ಅಗತ್ಯ. ದೇವರ ಆಶೀರ್ವಾದ ಪಡೆಯಲು ನಕ್ಷತ್ರ ಶಾಂತಿ ಹೋಮ ಸೂಕ್ತ ಎನ್ನುವುದು ಧಾರ್ಮಿಕ ನಂಬಿಕೆ. ಹೀಗಾಗಿ ಸ್ಪಂದನಾ ಹೆಸರಿನಲ್ಲಿ ನಕ್ಷತ್ರ ಹೋಮ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ.
ಬದುಕಿರುವವರೂ ಮಾಡುತ್ತಾರೆ
ನಕ್ಷತ್ರ ಶಾಂತಿ ಹೋಮ ಮೃತಪಟ್ಟವರು ಮಾತ್ರವಲ್ಲ ಬದುಕಿರುವವರ ಹೆಸರಿನಲ್ಲೂ ಮಾಡಲಾಗುತ್ತದೆ. ಜನ್ಮದಿನದಂದು ನಕ್ಷತ್ರ ಶಾಂತಿ ಪಠಣ ಮಾಡಲಾಗುತ್ತದೆ. ಕೆಲವು ಗ್ರಹಗಳ ಪರಿವರ್ತನೆಯು ಬೆಳವಣಿಗೆ ಮತ್ತು ಅಭಿವೃದ್ದಿಗೆ ಅಡ್ಡಿಪಡಿಸಬಹುದು.
ಗ್ರಹಗಳ ಋಣಾತ್ಮಕ ಪ್ರಭಾವಗಳಿಂದ ರಕ್ಷಣೆ ಪಡೆಯಲು, ಕೆಲವು ಅಡಚಣೆಗಳನ್ನು ನಿವಾರಿಸಲು ನಕ್ಷತ್ರ ಶಾಂತಿ ಹೋಮ ನಡೆಸಲಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.