The Kerala Story : ಸಿನಿಮಾದ ಕಥೆ ನಿಜವಾಗಿ ನಡೆದಿತ್ತಾ? ಸಾಕ್ಷಿ ಸಿಕ್ಕೇ ಬಿಡ್ತು..!! – ಭಾರತಕ್ಕೆ ಬರಲು ಆ ನಾಲ್ವರು ಮಹಿಳೆಯರಿಗೆ ಅನುಮತಿ ನಿರಾಕರಿಸಿದ ಕೇಂದ್ರ; ಯಾರವರು?

The Kerala Story : ಸಿನಿಮಾದ ಕಥೆ ನಿಜವಾಗಿ ನಡೆದಿತ್ತಾ? ಸಾಕ್ಷಿ ಸಿಕ್ಕೇ ಬಿಡ್ತು..!! – ಭಾರತಕ್ಕೆ ಬರಲು ಆ ನಾಲ್ವರು ಮಹಿಳೆಯರಿಗೆ ಅನುಮತಿ ನಿರಾಕರಿಸಿದ ಕೇಂದ್ರ; ಯಾರವರು?

ನ್ಯೂಸ್ ಆ್ಯರೋ‌ : ಕೇರಳದ ಮಹಿಳೆಯರು ಮತಾಂತರಗೊಂಡು ಭಾರತದಿಂದ ಅಫ್ಘಾನಿಸ್ತಾನಕ್ಕೆ ತೆರಳಿ ಉಗ್ರ ಸಂಘಟನೆ ಐಸಿಸ್ ಸೇರಿದ್ದ ವಿಚಾರವನ್ನು ನಿನ್ನೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಚಿತ್ರ ಹೇಳಿದೆ. ಇದು ಸುಳ್ಳು ಎಂದು ಕೇರಳದ ಆಡಳಿತಾರೂಢ ಸಿಪಿಎಂ ಮತ್ತು ಕಾಂಗ್ರೆಸ್ ಹೇಳಿತ್ತು. ಚಿತ್ರ ಬಿಡುಗಡೆಗೆ ತಡೆ ಒಡ್ಡಲೂ ನಿರ್ಧರಿಸಿತ್ತು. ಆದರೆ ಎಲ್ಲ ಅಡೆ ತಡೆ ಮೀರಿ ಚಿತ್ರ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಧ್ಯೆ ಚಿತ್ರದಲ್ಲಿ ತೋರಿಸಿರುವುದು ನೈಜ ಘಟನೆ ಎನ್ನುವುದಕ್ಕೆ ಪೂರಕ ಅಂಶ ದೊರೆತಿದೆ. ಅದರ ಬಗೆಗಿನ ಮಾಹಿತಿ ಇಲ್ಲಿದೆ.

ತಮ್ಮ ಪತಿಯರ ಜೊತೆ ಭಾರತವನ್ನು ತೊರೆದು ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿದ್ದ ನಾಲ್ವರು ಮಹಿಳೆಯರು ಅಲ್ಲಿನ ಜೈಲಿನಲ್ಲಿದ್ದಾರೆ. ಅವರು ದೇಶಕ್ಕೆ ಮರಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. 2016-18ರ ನಡುವೆ ಇವರು ಅಫ್ಘಾನಿಸ್ತಾನದ ನಂಗರ್ ಹಾರ್ ಗೆ ತೆರಳಿದ್ದರು. ವಿವಿಧ ಕಡೆಗಳಲ್ಲಿ ನಡೆದ ದಾಳಿಗಳಲ್ಲಿ ಈ ಮಹಿಳೆಯರ ಪತಿಯಂದಿರು ಸಾವನ್ನಪ್ಪಿದ್ದರೆ ಇವರು ಅಧಿಕಾರಿಗಳ ಮುಂದೆ ಶರಣಾಗಿದ್ದರು. ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಕೇಂದ್ರ ಇವರನ್ನು ಕರೆ ತರಲು ನಿರಾಕರಿಸಿದೆ.

2020ರ ಮಾರ್ಚ್ ನಲ್ಲಿ ಅಂತಾರಾಷ್ಟ್ರೀಯ ವೆಬ್ ಸೈಟ್ ಪ್ರಕಟಿಸಿದ ವೀಡಿಯೋದಲ್ಲಿ ಈ ನಾಲ್ವರು ಭಾರತೀಯ ಮಹಿಳೆಯರಿದ್ದರು. ಸೋನಿಯಾ ಸೆಬಾಸ್ಟಿಯನ್ ಆಲಿಯಾಸ್ ಆಯಿಷಾ, ರಫೀಲಾ, ಮೆರಿನ್ ಜಾಕೋಬ್ ಆಲಿಯಾಸ್ ಮರಿಯಮ್ ಮತ್ತು ನಿಮಿಷಾ ಆಲಿಯಾಸ್ ಫಾತಿಮಾ ಇಸಾ ಎಂದು ಅವರನ್ನು ಗುರುತಿಸಲಾಗಿದೆ. 2019ರಲ್ಲಿ ಶರಣಾದ ಇವರನ್ನು ಭಾರತೀಯ ಭದ್ರತಾ ಏಜೆನ್ಸಿಗಳು ಸಂದರ್ಶನ ಮಾಡಿದ್ದವು. ಆ ವೇಳೆಯೇ ಅವರಿಗೆ ಭಾರತ ಪ್ರವೇಶ ಅನುಮತಿ ಸಿಗುವುದು ಅನುಮಾನ ಎಂಬುದರ ಕುರಿತು ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

ಕೇರಳದ ಕಾಸರಗೋಡಿನ ಸೋನಿಯಾ ಸೆಬಾಸ್ಟಿಯನ್ 2016ರ ಮೇ 31ರಂದು ದೇಶ ತೊರೆದಿದ್ದಳು. ಈಕೆ ತನ್ನ ಪತಿ ಅಬ್ದುಲ್ ರಶೀದ್ ಜೊತೆ ಐಸಿಸ್ ನ ರಹಸ್ಯ ಕ್ಲಾಸ್ ತೆಗೆದುಕೊಂಡಿದ್ದಳು. ಪಾಲಕ್ಕಾಡ್ ನ ಮರಿಯನ್ ತನ್ನ ಪತಿ ಬೆಸ್ಟಿನ್ ವಿನ್ಸೆಂಟ್ ಜೊತೆ ಅಫ್ಘಾನಿಸ್ತಾನಕ್ಕೆ ತೆರಳಿ ಅಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಳು. ಅಲ್ಲದೆ ವಿನ್ಸೆಂಟ್ ಸಹೋದರ ಬೆಕ್ಸನ್ ಮತ್ತು ಆತನ ಪತ್ನಿ ನಿಮಿಷಾ ಕೂಡಾ ಮತಾಂತರಗೊಂಡು ಅಫ್ಘಾನಿಸ್ತಾನಕ್ಕೆ ತೆರಳಿದ್ದಳು. 2020ರಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಯಲ್ಲಿ ಪಾಲ್ಗೊಂಡ ಒಬ್ಬನೆಂದು ಗುರುತಿಸಲಾದ ಇಜಾಸ್ ಕಲ್ಲುಕೆಟ್ಟಿಯನ್ನು ರೆಫೆಲಾ ವಿವಾಹವಾಗಿದ್ದಳು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *