Anchor Anushree : ವೈರಲ್ ಆಯ್ತು ಅನುಶ್ರೀ ಬಾಲ್ಯದ ಫೋಟೋ ‌- ಕಾಮೆಂಟ್ ಸೆಕ್ಷನ್ ನಲ್ಲಿ ನಿರೂಪಕಿಯ ಪರ ವಿರೋಧ ಟಾಕ್ ವಾರ್…!!

Anchor Anushree : ವೈರಲ್ ಆಯ್ತು ಅನುಶ್ರೀ ಬಾಲ್ಯದ ಫೋಟೋ ‌- ಕಾಮೆಂಟ್ ಸೆಕ್ಷನ್ ನಲ್ಲಿ ನಿರೂಪಕಿಯ ಪರ ವಿರೋಧ ಟಾಕ್ ವಾರ್…!!

ನ್ಯೂಸ್ ಆ್ಯರೋ‌ : ಕನ್ನಡ ಕಿರುತೆರೆಯಲ್ಲಿ ನಿರೂಪಕಿಯ ಸ್ಥಾನದಲ್ಲಿ ಅನುಶ್ರೀ ಬಹುದೊಡ್ಡ ಹೆಸರು. ಯಾವುದೇ ಸಿನಿಮಾ ರಿಲೀಸ್ ಆಗೋದಿರಲಿ ಅಥವಾ ಯಾವುದೇ ಸಿನಿಮಾ ಸಂಬಂಧಿ ಕಾರ್ಯಕ್ರಮ ಇರಲಿ ಅಲ್ಲಿ ಅನುಶ್ರೀ ಇರಲೇಬೇಕು. ಇಲ್ಲದಿದ್ದರೆ ಆ ಕಾರ್ಯಕ್ರಮ ಬಹು ಡಲ್ ಆಗಿ ಕಾಣೋದು‌ ಗ್ಯಾರಂಟಿ‌. ಅಂತಹ ಹವಾ ಮೆಂಟೈನ್ ಮಾಡಿರೋ ಕಡಲ ನಗರಿ ಸುಂದರಿ ಅನುಶ್ರೀ ಅವರ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಾಸಗಿ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ನ ನಿರೂಪಕ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅನುಶ್ರೀ ಅವರ ಬಾಲ್ಯದ ಫೋಟೋ ಹಂಚಿಕೊಂಡಿದ್ದು, ಅನುಶ್ರೀ‌‌ ಅಭಿಮಾನಿಗಳು ಎರ್ರಾಬಿರ್ರಿ ಕಾಮೆಂಟ್ ಹಾಕಿ ಸಂಭ್ರಮ ಸೂಚಿಸಿದ್ದರೆ, ಇನ್ನೂ ಕೆಲವರು ಅಸಂಬದ್ಧ ಕಾಮೆಂಟ್ ಕೂಡ ಮಾಡಿದ್ದಾರೆ.

ಕಾಮೆಂಟ್ ಹಾಕಿರುವವರ ಪೈಕಿ ಕೆಲವರು ಅನುಶ್ರೀ ಅವರನ್ನು ಹೊಗಳಿ‌ ಅಟ್ಟಕ್ಕೇರಿಸಿದರೆ, ಇನ್ನೂ ಕೆಲವರು ಟೀಕೆ ಕೂಡ ಮಾಡಿದ್ದಾರೆ. ಒಬ್ಬ 50 ರೂಪಾಯಿಗೆ‌ ಆ್ಯಂಕರಿಂಗ್ ಮಾಡು ಅಂದ್ರೆ 500 ರೂಪಾಯಿಗೆ ಆ್ಯಂಕರಿಂಗ್ ಮಾಡ್ತಾಳೆ, ಮೊದ ಮೊದಲು ಚೆನ್ನಾಗಿತ್ತು ಕೇಳೋದಿಕ್ಕೆ. ಬರ ಬರುತ್ತಾ ಯಾಕೋ ಅಸಹ್ಯ ಆಗ್ತಿದೆ.

ತುಂಬಾ ಮಾತು, ಐದು ಜಡ್ಜ್ ಗಳನ್ನ ಪ್ರತಿ ಎಪಿಸೋಡಿನಲ್ಲೂ ಸುಮ್ಮನೆ ಹೊಗಳುವುದು(ಅನಗತ್ಯ). ಅವರು ಏನು ಬಿಟ್ಟಿಯಾಗಿ ಸೇವೆ ಮಾಡೋಲ್ಲ, ಎಲ್ಲರೂ ದುಡ್ಡಿಗಾಗಿ ದುಡಿಯುವವರೆ. ಅಷ್ಟೊಂದು ಹೊಗಳಿಕೆ ಅನಗತ್ಯ ಎಂದು‌ಖಾರವಾಗಿ ಕಾಮೆಂಟ್ ಮಾಡಿದರೆ ಇನ್ನೊಬ್ಬ ಫೇಸ್‌ಬುಕ್‌ ಬಳಕೆದಾರ ಶುಗರ್ ಡ್ಯಾಡಿ ಫ್ರೆಂಡ್…ಹೂ ತರ ಇದ್ಳು, ಹೆಗ್ಣದ್ ತರ ಆಗಿದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಒಬ್ಬರು “ಊರಿಗೆಲ್ಲ ಬುದ್ದಿ ಹೇಳುವ, ತಂದೆ ಸತ್ರು ಹೋಗಿ‌ ಮುಖ ನೋಡದೆ ಅವರು ಯಾರೋ ನನಗೆ ಗೊತ್ತೆ ಇಲ್ಲ ಎಂದ ಯುವತಿ” ಎಂದು‌ ಅನುಶ್ರೀ ವೈಯಕ್ತಿಕ ಬದುಕಿನ ಬಗ್ಗೆಯೂ ಬರೆದುಕೊಂಡಿದ್ದಾರೆ.

ಒಬ್ಬರು “ನಶೆರಾಣಿ ಇರಬೇಕು, ಸುದ್ದಿ ಮಾಧ್ಯಮದವರು ಸತ್ಯ ಹೇಳಬೇಕು??????? ಕಲಿಯುಗದಲ್ಲಿ ಸತ್ಯ ಹೇಳೋಕೆ ಸಾಧ್ಯ ಇಲ್ಲ ಅಲ್ವಾ?” ಎಂದರೆ ‌ಇನ್ನೊಬ್ಬರು “ಶ್ರಮ ಶ್ರದ್ಧೆ ಸ್ವಾಭಿಮಾನದಿಂದ ಬೆಳೆದು ನಿಂತ ಅಪ್ಪಟ ಕನ್ನಡದ ಪ್ರತಿಭೆ ಹೆಮ್ಮೆಯ ಕನ್ನಡತಿ” ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

ಯಾರೇನೇ ಅಂದರೂ‌ ಅನುಶ್ರೀ ಒಬ್ಬ ಅದ್ಭುತ ನಿರೂಪಕಿ.‌ ಯಾವುದೇ ರಿಯಾಲಿಟಿ ಶೋ ಕೊಟ್ಟರೂ ಅತೀ ಸುಂದರವಾಗಿ ಮಾಡಿ ಮುಗಿಸುವ ಕಲೆ ಹೊಂದಿರುವ ಸಹಜ‌ ಸುಂದರಿ.

ಆ್ಯಂಕರ್ ಅನುಶ್ರೀ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುವ‌ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಅನುಶ್ರೀ ಭವಿಷ್ಯ ಉಜ್ವಲವಾಗಿರಲಿ ಎಂಬ ಆಶಯ ಎಲ್ಲರದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *