ಭಾರತದಲ್ಲಿ ಬಿಡುಗಡೆಯಾಗಲಿದೆ 100 ರೂಪಾಯಿ ನಾಣ್ಯ – ಇದರ ಬಿಡುಗಡೆ ಯಾವಾಗ? ಇದರ ವಿಶೇಷತೆಯೇನು?

ಭಾರತದಲ್ಲಿ ಬಿಡುಗಡೆಯಾಗಲಿದೆ 100 ರೂಪಾಯಿ ನಾಣ್ಯ – ಇದರ ಬಿಡುಗಡೆ ಯಾವಾಗ? ಇದರ ವಿಶೇಷತೆಯೇನು?

ನ್ಯೂಸ್ ಆ್ಯರೋ : ಭಾರತದಲ್ಲಿ ಸದ್ಯ 1,2,5,10 ಹಾಗೂ 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಇದೀಗ 100 ರೂಪಾಯಿ ನಾಣ್ಯ ಬಿಡುಗಡೆಯಾಗಿದೆ. ಕೆಲ ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಲು ಭಾರತ ಸರ್ಕಾರ ಹಲವು ಬಾರಿ ಅಂಚೆ ಚೀಟಿ ಬಿಡುಗಡೆ ಸೇರಿದಂತೆ ಹಲವು ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ವಿಶೇಷ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಿದೆ.

ಈ ನಾಣ್ಯ ಬಿಡುಗಡೆ ಮಾಡಲು ಮುಖ್ಯಕಾರಣ, ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮ. ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ 100ನೇ ಕಂತು ಈ ತಿಂಗಳ ಅಂತ್ಯದಲ್ಲಿ ಪ್ರಸಾರವಾಗಲಿದೆ. 100ನೇ ಕಂತಿನ ಪ್ರಯುಕ್ತ ಕೇಂದ್ರ ಸರ್ಕಾರ 100 ರೂಪಾಯಿ ನಾಣ್ಯ ಮಾರುಕಟ್ಟೆಗೆ ಬಿಡುಡೆ ಮಾಡುತ್ತಿದೆ.

ಎಪ್ರಿಲ್ 30 ರಂದು ಮನ್ ಕಿ ಬಾತ್ 100ನೇ ಕಂತು ಪ್ರಸಾರವಾಗಲಿದೆ. ಇದೇ ದಿನ ಕೇಂದ್ರ ಸರ್ಕಾರ 100 ರೂಪಾಯಿ ನಾಣ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಏಪ್ರಿಲ್ 30 ರಿಂದ ಮಾರುಕಟ್ಟೆಯಲ್ಲಿ 100 ರೂಪಾಯಿ ನಾಣ್ಯ ಜನರಿಗೆ ಲಭ್ಯವಾಗಲಿದೆ. ಆದರೆ 100 ರೂಪಾಯಿ ನಾಣ್ಯ ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನಾಣ್ಯಗಳಂತೆ ಹೆಚ್ಚಾಗಿ ಈ 100 ರೂಪಾಯಿ ನಾಣ್ಯ ಲಭ್ಯವಿರುವುದಿಲ್ಲ.

ನೂರು ರೂಪಾಯಿ ನಾಣ್ಯದಲ್ಲಿ ಹಲವು ವಿಶೇಷತೆಗಳಿವೆ. ನಾಣ್ಯದ ಗಾತ್ರ ಕೊಡ ಬದಲಾಗಲಿದೆ. 44 mm ಡಯಾಮೀಟರ್ ಹಾಗೂ 200 ಸೆರೇಶನ್ ಗಾತ್ರಹೊಂದಿರಲಿದೆ.35 ಗ್ರಾಮ್ ಲೋಹದ ನಾಣ್ಯದಲ್ಲಿ ಶೇಕಡಾ 50 ರಷ್ಟು ಬೆಳ್ಳಿ, ತಾಮ್ರ ಶೇಕಡಾ 50, ಜಿಂಕ್ ಶೇಕಡಾ ಶೇಕಡಾ 5 ಹಾಗೂ ನಿಕೆಲ್ ಶೇಕಡಾ 5 ರಷ್ಟು ಮಿಶ್ರಣವಾಗಿರಲಿದೆ.

100 ರೂಪಾಯಿ ನಾಣ್ಯದಲ್ಲಿ ಅಶೋಕ ಸ್ಥಂಭದ ಮುದ್ರೆ ಇರಲಿದೆ. ಇನ್ನು ಕೆಳಭಾಗದಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದು ಮನ್ ಕಿ ಬಾತ್ 100ನೇ ಕಂತಿನ ವಿಶೇಷ ನಾಣ್ಯವಾಗಿರುವ ಕಾರಣ ನಾಣ್ಯದಲ್ಲಿ ಮನ್ ಕಿ ಬಾತ್ 100 ಹಾಗೂ ಮನ್ ಕಿ ಬಾತ್ ಮೈಕ್ರೋಫೋನ್ ಚಿಹ್ನೆ ಇರಲಿದೆ. 100 ರೂಪಾಯಿ ನಾಣ್ಯ ಈಗಾಗಲೇ ಹಲವರ ಕುತೂಹಲ ಹೆಚ್ಚಿಸಿದೆ. ಎಪ್ರಿಲ್ 30 ರಂದು ಮಾರುಕಟ್ಟೆ ಪ್ರವೇಶಿಸಲಿರುವ ಈ ನಾಣ್ಯಕ್ಕಾಗಿ ಕಾತರವೂ ಹೆಚ್ಚಾಗಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *