ಪವಿತ್ರಾ ಲೋಕೇಶ್, ನರೇಶ್, ರಮ್ಯಾ ತ್ರಿಕೋನ ಕಥೆಯಲ್ಲಿ ಬಿಗ್ ಟ್ವಿಸ್ಟ್ – 10 ಕೋಟಿ ರೂಪಾಯಿ ಸೆಟ್ಲ್’ಮೆಂಟ್ ಗೆ ಮಾಜಿ ಮಂತ್ರಿ ಉಸ್ತುವಾರಿ…!?

ಪವಿತ್ರಾ ಲೋಕೇಶ್, ನರೇಶ್, ರಮ್ಯಾ ತ್ರಿಕೋನ ಕಥೆಯಲ್ಲಿ ಬಿಗ್ ಟ್ವಿಸ್ಟ್ – 10 ಕೋಟಿ ರೂಪಾಯಿ ಸೆಟ್ಲ್’ಮೆಂಟ್ ಗೆ ಮಾಜಿ ಮಂತ್ರಿ ಉಸ್ತುವಾರಿ…!?

ನ್ಯೂಸ್ ಆ್ಯರೋ : ನಟಿ ಪವಿತ್ರಾ ಲೋಕೇಶ್ ಅವರನ್ನು ಶೀಘ್ರದಲ್ಲೇ ನಾಲ್ಕನೇ ಮದುವೆಯಾಗುತ್ತಿದ್ದಾರೆಂದು ಸುದ್ದಿಯಾಗಿದ್ದ ನಟ ನರೇಶ್ ಇದೀಗ ಮತ್ತೆ ಮೂರನೇ ಪತ್ನಿ ರಮ್ಯಾ ಜತೆ ಕಿರಿಕ್ ಶುರು ಮಾಡಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿ ನರೇಶ್- ಪವಿತ್ರಾ ಲಿಪ್‌ಲಾಕ್ ವಿಡಿಯೋ ಮಾಡಿ ಇಬ್ಬರು ಶೀಘ್ರದಲ್ಲೇ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗಿತ್ತು. ಆದರೆ ನರೇಶ್ ಇದೀಗ ನನಗೆ ರಮ್ಯಾಳಿಂದ ಜೀವ ಭಯ ಇದೆ ಎಂದು ಕೋರ್ಟ್ ಮೆಟ್ಟಿಲೇರಿ ಶೀಘ್ರ ಡೈವೋರ್ಸ್‌ ನೀಡುವಂತೆ ಮನವಿಯನ್ನು ಮಾಡಿದ್ದಾರೆ.

ಇದೀಗ ನರೇಶ್ – ರಮ್ಯಾ ಮಧ್ಯೆ ಹೈಡ್ರಾಮಾ ಶುರುವಾಗಿದ್ದು, ಆರೋಪ – ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ನಟಿ ಪವಿತ್ರಾ ಲೋಕೇಶ್‌ ಅವರನ್ನು ಮದುವೆ ಆಗಲು ಮುಂದಾಗಿರುವ ಕಾರಣ ಈ ಹೈಡ್ರಾಮಾ ಮಾಡುತ್ತಿದ್ದಾರೆಂದು ರಮ್ಯಾ ಅವರು ಆರೋಪಿಸುತ್ತಿದ್ದಾರೆ.

ಕೋರ್ಟ್‌ ಮೆಟ್ಟಿಲೇರಿರುವ ನರೇಶ್, “ಮದುವೆ ಆದ ದಿನದಿಂದಲೂ ರಮ್ಯಾ ನನಗೆ ಹಿಂಸಿಸುತ್ತಿದ್ದಾಳೆ. ಸರಿಯಾಗಿ ಊಟ ಕೂಡ ಹಾಕುತ್ತಿರಲಿಲ್ಲ. ನನಗಿಂತ ಆಕೆಗೆ ನನ್ನ ಬಳಿ ಇರುವ ಹಣ, ಆಸ್ತಿಯ ಮೇಲೆ ವ್ಯಾಮೋಹ ಹೆಚ್ಚಾಗಿತ್ತು. ಪ್ರತಿ ಫಂಕ್ಷನ್‌ನಲ್ಲೂ ಕುಡಿದು ಹೇಗೇಗೋ ಆಡುತ್ತಿದ್ದಳು. ಮಗನನ್ನು ಕೂಡ ಸುಮ್ಮನೆ ಹೊಡೆಯುತ್ತಿದ್ದಳು. ನಮ್ಮ ಮನೆಯಲ್ಲಿ ಸೇರಿಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದಾಳೆ, ಆಕೆ ಮನೆಯಿಂದ ಹೊರಗೆ ಹೋಗುವಂತೆ ಆದೇಶ ನೀಡಬೇಕು. ಬೇಗ ಆಕೆಯಿಂದ ಡೈವೋರ್ಸ್ ಕೊಡಿಸಿ” ಎಂದು ಪಿಟಿಷನ್ ಹಾಕಿದ್ದಾರೆ.

ಅದಲ್ಲದೆ ಮಾಜಿ ಮಂತ್ರಿ ರಘುವೀರ್ ರೆಡ್ಡಿ ಮೇಲೂ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ರಮ್ಯಾ ತನ್ನ ಸಂಬಂಧಿ ರಘುವೀರ್ ರೆಡ್ಡಿಯವರ ಮೂಲಕ 10 ಕೋಟಿಗೆ ಸೆಟ್ಲ್‌ಮೆಂಟ್ ಮಾಡಿಕೊಳ್ಳುವಂತೆ ವ್ಯವಹಾರ ಮುಂದಾಗಿದ್ದಾರೆ. ಅದಲ್ಲದೆ ರಮ್ಯಾ ಅವರು ರಘವೀರ್ ಹೆಸರು ಹೇಳಿ ಬೆದರಿಕೆಯನ್ನು ಒಡ್ಡೊತ್ತಿದ್ದಾರೆಂದು ನರೇಶ್ ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಹಿಂದೆ ಮಾಧ್ಯಮದ ಮುಂದೆ ಬಂದ ರಮ್ಯಾ ಅವರು ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಪವಿತ್ರಾ ಲೋಕೇಶ್ ಹಣಕ್ಕಾಗಿ ನರೇಶ್ ಹಿಂದೆ ಬಿದ್ದಿದ್ದಾಳೆ. ಆಕೆ ತನ್ನ ಅತ್ತೆಯ ಒಡವೆಯನ್ನು ಉಪಯೋಗಿಸುತ್ತಿದ್ದಾಳೆ. ಅದಲ್ಲದೆ ನರೇಶ್ ವಿರುದ್ಧವೂ ಗಂಭೀರವಾದ ಆರೋಪವನ್ನು ಮಾಡಿದ್ದರು.

ಇದಾದ ಬಳಿಕ ನರೇಶ್ ಅವರು ನಟಿ ಪವಿತ್ರಾ ಲೋಕೇಶ್ ಜತೆ ಮೈಸೂರಿನ ಹೊಟೇಲ್‌ವೊಂದರಲ್ಲಿ ವಾಸವಾಗಿದ್ದರು. ಇದನ್ನು ತಿಳಿದು ಅಲ್ಲಿಗೆ ಬಂದ ರಮ್ಯಾ ರೂಂನ ಹೊರಗಡೆಯೇ ಕಾದು ಕುಳಿತಿದ್ದರು. ನರೇಶ್–ಪವಿತ್ರಾ ಹೊರಬರುತ್ತಿದ್ದಾಗ ಅವರ ವಿರುದ್ಧ ಕೂಗಾಡಿದ್ದರು. ಆದರೆ ಇದಕ್ಕೆಲ್ಲ ನರೇಶ್– ಪವಿತ್ರಾ ಕ್ಯಾರೇ ಎಂದಿರಲಿಲ್ಲ.

ಹೊಸ ವರ್ಷದ ಸಂಭ್ರಮದಲ್ಲಿ ನರೇಶ್- ಪವಿತ್ರಾ ಲಿಪ್‌ಲಾಕ್ ವಿಡಿಯೋ ಮಾಡಿ ಶೀಘ್ರದಲ್ಲೇ ಮದುವೆ ಆಗುತ್ತೇವೆ ಎನ್ನುವ ಅರ್ಥದಲ್ಲಿ ಸಂದೇಶ ರವಾನಿಸಿದ್ದರು. ಮತ್ತೊಂದೆಡೆ ನಟಿ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಲು ನರೇಶ್ ತುದಿಗಾಲಿನಲ್ಲಿ ನಿಂತಿದ್ದಾರೆ. ಕಳೆದ ಕೆಲವು ತಿಂಗಳಿಂದ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಇದೀಗ ರಮ್ಯಾ- ನರೇಶ್ ಹೈಡ್ರಾಮಾ ಎಪಿಸೋಡ್‌ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *