ದಿನಗೂಲಿ ಕಾರ್ಮಿಕನ ಕೋಟಿ ರೂಪಾಯಿ ಗಳಿಸೋ ಡ್ರೀಮ್ ನಿಜವಾಗಿಸಿದ ಡ್ರೀಮ್ ಇಲೆವೆನ್ – ಕಡುಬಡವನಿಗೆ ಒಲಿದ ಅದೃಷ್ಟ ಲಕ್ಷ್ಮಿ, ಎರಡು ಕೋಟಿ ರೂಪಾಯಿ ಬಂಪರ್..!!

ದಿನಗೂಲಿ ಕಾರ್ಮಿಕನ ಕೋಟಿ ರೂಪಾಯಿ ಗಳಿಸೋ ಡ್ರೀಮ್ ನಿಜವಾಗಿಸಿದ ಡ್ರೀಮ್ ಇಲೆವೆನ್ – ಕಡುಬಡವನಿಗೆ ಒಲಿದ ಅದೃಷ್ಟ ಲಕ್ಷ್ಮಿ, ಎರಡು ಕೋಟಿ ರೂಪಾಯಿ ಬಂಪರ್..!!

ನ್ಯೂಸ್ ಆ್ಯರೋ : ಕೆಲವೊಬ್ಬರ ಜೀವನದಲ್ಲಿ ರಾತ್ರೋರಾತ್ರಿ ಅಚ್ಚರಿಗಳು ನಡೆದು ಕುಬೇರರಾಗುತ್ತಾರೆ ಎಂಬ‌ ಮಾತಿದೆ. ಆ ಮಾತಿಗೆ ಕನ್ನಡಿ ಹಿಡಿದಂತೆಯೇ ಇದೀಗ ರಾಜಸ್ಥಾನದ ರೂಪವಾಸ್ ಜಿಲ್ಲೆಯ ಮಾದಪುರದ ದಿನಗೂಲಿ ನೌಕರನಾದ ಖೇಮ್ ಸಿಂಗ್ ಆನ್ಲೈನ್ ಗೇಮ್ ಡ್ರೀಮ್11 ಮೂಲಕ 2 ಕೋಟಿ ಬಹುಮಾನ ಗೆದ್ದು ಕೋಟ್ಯಾಧೀಶ್ವರನಾಗಿದ್ದಾನೆ.

ಇದರಲ್ಲಿ ಅಚ್ಚರಿಯ ವಿಚಾರವೆಂದರೆ ಖೇಮ್ ಸಿಂಗ್ ಅವರು ಕ್ರಿಕೆಟ್ ಬಗ್ಗೆ ಒಂದಿಷ್ಟೂ ತಿಳಿದಿಲ್ಲ ಮತ್ತು ಆಸಕ್ತಿಯೂ ಇಲ್ಲವಂತೆ. ಗೆಳೆಯರೆಲ್ಲ ಡ್ರೀಮ್ 11 ಆಡುವುದನ್ನು‌ ನೋಡಿ ಇವರೂ‌ ಕೂಡ ಆಡಲು ಆರಂಭಿಸಿದರು. ಇತ್ತೀಚೆಗೆ ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ ಡ್ರೀಮ್11 ನಲ್ಲಿ 49ರೂ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಗೆದ್ದಿದ್ದಾರೆ. ಇದರಿಂದ ಖೇಮ್ ಸಿಂಗ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅತೀವ‌ ಸಂತಸ ಪಟ್ಟಿದ್ದು ಅವರನ್ನು ಪೇಟ, ಶಾಲು ಹೊದಿಸಿ ಸನ್ಮಾನಿಸಿ ಸಂಭ್ರಮಿಸಿದ್ದಾರೆ.

ಕಡುಬಡವನಿಗೆ ಒಲಿದ ಅದೃಷ್ಟ ಲಕ್ಷ್ಮಿ..!

ಸದ್ಯ ಡ್ರೀಮ್11 ಮೂಲಕ 2ಕೋಟಿ ಗೆದ್ದು ಕೋಟ್ಯಾಧೀಶ್ವರನಾಗಿರುವ ಖೇಮ್ ಸಿಂಗ್ ಅವರದ್ದು ಅತ್ಯಂತ ಕಡು ಬಡತನದ ಕುಟುಂಬ. ಹೊಟ್ಟೆ ಪಾಡಿಗಾಗಿ ಇವರ ಮನೆಯವರು ಹರಿಯಾಣದ ಗುರ್ಗಾಂವ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಊರಿನ ಗೆಳೆಯರು ಡ್ರೀಮ್11 ಆಡುವುದನ್ನು‌ ಕಂಡು ಇವರೂ ಕೂಡ ಆಡಲು ಪ್ರಾರಂಭಿಸಿದರು. ಮೊದಲ ಸಲ ಆಡಿದಾಗ ಹಣ ಬಾರದೆ ನಿರಾಸೆಗೀಡಾದ ಖೇಮ್ ಸಿಂಗ್, ಅನಂತರದ‌ ಆಟದಲ್ಲಿ CSK v/s RR ಪಂದ್ಯದ ವೇಳೆ 49 ರೂ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಗೆದ್ದಿದ್ದಾರೆ.

ಖೇಮ್‌ಸಿಂಗ್ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಖೇಮ್ ಸಿಂಗ್, ‘ನಮ್ಮದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬ. ಒಂದು‌ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಆದರೆ ಡ್ರೀಮ್11 ಮೂಲಕ 2 ಕೋಟಿ‌ ಗೆದ್ದಿರುವುದು ಸಂತಸವಾಗಿದೆ. ಈಗಾಗಲೇ ಬಹುಮಾನದಲ್ಲಿ 69 ಲಕ್ಷ ಅಕೌಂಟ್ ಗೆ ಬಂದಿದೆ, ಉಳಿದ ಹಣ ಸದ್ಯದಲ್ಲೇ ಕೈ ಸೇರಲಿದೆ. ಬಂದಿರುವ ಈ ದೊಡ್ಡ‌ ಮೊತ್ತವನ್ನು ಏನು ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ’ ಎಂದಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *