ಅಪ್ಪ-ಅಮ್ಮ ಇರುವ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ಗೆ ಬಿಯರ್ ಫೋಟೋ ಹಾಕಿದ ಯುವಕ – ಮುಂದೇನಾಯ್ತು?

ಅಪ್ಪ-ಅಮ್ಮ ಇರುವ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ಗೆ ಬಿಯರ್ ಫೋಟೋ ಹಾಕಿದ ಯುವಕ – ಮುಂದೇನಾಯ್ತು?

ನ್ಯೂಸ್ ಆ್ಯರೋ‌ : ವಾಟ್ಸಾಪ್ ಗ್ರೂಪ್ ನಲ್ಲಿ ಕೆಲವೊಮ್ಮೆ ತೀರ ವೈಯಕ್ತಿಕ ವಿಚಾರ ತಪ್ಪಾಗಿ ಹಾಕಿ ಅಥವಾ ಬೇರೆ ಯಾರಿಗೂ ಕಳುಹಿಸಬೇಕಾದದ್ದನ್ನು ಸೆಂಡ್ ಮಾಡಿ ಮುಜುಗರಕ್ಕೆ ಸಿಲುಕುತ್ತೇವೆ. ನಾವು ಗೊತ್ತಾಗಿ ಪೋಸ್ಟ್ ಡಿಲೀಟ್ ಮಾಡುವಷ್ಟರಲ್ಲಿ ಅನೇಕರು ಅದನ್ನು ನೋಡಿರುತ್ತಾರೆ. ಇಂತಹದ್ದೇ ಪೇಚಿಗೆ ಸಿಲುಕಿದ ಯುವಕನೊಬ್ಬನ ಪ್ರಸಂಗ ಇದೀಗ ವೈರಲ್ ಆಗಿದೆ.

ಯುವಕ ಅಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್​​​ಗೆ ಬಿಯರ್ ಬಾಟಲಿ ಫೋಟೋವನ್ನು ಶೇರ್ ಮಾಡಿ ಪೋಷಕರ ಕೋಪಕ್ಕೆ ಗುರಿಯಾಗಿದ್ದಾನೆ. ವಾಟ್ಸಾಪ್ ಗ್ರೂಪ್​​​ನಲ್ಲಿ ತಂದೆ ತಾಯಿ ಹಾಗೂ ಮಗನ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್​​​ ಅನ್ನು ಆ ಯುವಕನ ಸಹೋದರಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಶುಕ್ರವಾರ ಐಪಿಎಲ್​​​ನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯದ ಉತ್ಸಾಹದಲ್ಲಿ ಯುವಕ ಕುಟುಂಬದ ವಾಟ್ಸಾಪ್ ಗ್ರೂಪಿಗೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದ ಫೋಟೋವನ್ನು ಕಳುಹಿಸಿ, ‘ಮುಂಬೈ ಗೆಲುವಿಗಾಗಿ…. ಹೋಗೋಣ’ ಎಂದು ಬರೆದುಕೊಂಡಿದ್ದಾನೆ. ಆತನ ತಂದೆ ‘ಏನಿದು ?’ ಎಂದು ಪ್ರಶ್ನಿಸಿದ್ದಾರೆ. ತಾಯಿ ‘ನೀನು ಬಿಯರ್ ಕುಡಿದಿದ್ದೀಯಾ ?’ ಎಂದು ಕೇಳಿದ್ದಾರೆ.

ಮತ್ತೊಂದೆಡೆ ಸಾನಿಯಾ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಗ್ರೂಪ್​​​ಗೆ ಕಳುಹಿಸಿದ ಬಿಯರ್ ಫೋಟೋವನ್ನು ತಕ್ಷಣ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಅವರ ಪೋಷಕರು ಆ ಫೋಟೋವನ್ನು ನೋಡಿ ಬಿಟ್ಟಿದ್ದರು.

1.6 ಮಿಲಿಯನ್ ವೀಕ್ಷಣೆ

ಈ ಪೋಸ್ಟ್ ಟ್ವಿಟರ್​​​ನಲ್ಲಿ ವೈರಲ್ ಆಗಿದ್ದು, 1.6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 20.8 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಜೊತೆಗೆ ಹಲವು ಕಮೆಂಟ್ಸ್​​​ಗಳೂ ಈ ಪೋಸ್ಟ್ ಗೆ ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಆ ಯುವಕ ಇನ್ನೂ ಬದುಕಿದ್ದಾನಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಕೂಡಾ ಇದೇ ರೀತಿ ಒಮ್ಮೆ ಕಾಲೇಜು ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಸ್ನೇಹಿತ ಸಿಗರೇಟ್ ಸೇದುವ ಫೋಟೊವನ್ನು ಹಂಚಿಕೊಂಡು ಪಜೀತಿಗೆ ಸಿಲುಕಿದ್ದ’ ಎಂದು ಬರೆದುಕೊಂಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *