ಮಹಾ ಕುಂಭದಲ್ಲಿ ಶುರುವಾಯ್ತು ಸಾಧ್ವಿ ಹರ್ಷ ರಿಚರಿಯಾ ವಿವಾದ; ಭುಗಿಲೆದ್ದ ಆಕ್ರೋಶ, ಶಂಕರಾಚಾರ್ಯ ಸ್ವಾಮಿ ಬೇಸರ

ನ್ಯೂಸ್ ಆ್ಯರೋ: ಪ್ರಯಾಗರಾಜ್ನಲ್ಲಿ ಶುರುವಾಗಿರೋ ಮಹಾಕುಂಭಮೇಳಕ್ಕೆ ಕೋಟ್ಯಾಂತರು ಭಕ್ತರು ಹರಿದು ಬರ್ತಿದ್ದಾರೆ. ಗಂಗಾ ತೀರದಲ್ಲಿ ಅನೇಕ ಋಷಿಗಳು, ಸಂತರು ಮತ್ತು ಮಹಾತ್ಮರು ಕಾಣಿಸಿಕೊಳ್ತಿದ್ದಾರೆ. ಇದೆಲ್ಲದರ ನಡುವೆ ಯುವ ಸಾಧ್ವಿ ಹರ್ಷ ರಿಚರಿಯಾ ವಿಡಿಯೋ ವೈರಲ್ ಆಗಿತ್ತು.
ಹೌದು. . ಹರ್ಷ ರಿಚರಿಯಾ ಯೂಟ್ಯೂಬರ್ ಇವರು, ಉತ್ತರಾಖಂಡ ನಿವಾಸಿ. ದೇವರ, ಆಧ್ಯಾತ್ಮ, ಸನಾತನ ಧರ್ಮದ ಮೇಲೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ಅಪಾರವಾದ ಭಕ್ತಿ, ತುಂಡು ಬಟ್ಟೆ ಧರಿಸಿ ರೀಲ್ಸ್ ಮಾಡಿ ಟ್ರೆಂಡ್ ಆಗುತ್ತಿದ್ದ ಬ್ಲೂ ಐಸ್ ಸುಂದರಿ, ಸದ್ಯ ಆಧ್ಯಾತ್ಮ ಜಗತ್ತಿನ ಕಡೆ ಮುಖ ಮಾಡಿದ್ದಾರೆ. ಹಲವಾರು ಕಡೆಗೆ ಪ್ರಯಾಣ ಮಾಡಿ ವಿಡಿಯೋಗಳನ್ನ ಮಾಡುತ್ತಿದ್ದ ಈಕೆ, ಮಹಾಕುಂಭಮೇಳದಲ್ಲಿ ಸಾಧುಗಳ ಜೊತೆ ಪ್ರತ್ಯಕ್ಷವಾಗಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹರ್ಷ ರಿಚರಿಯಾ ನಡೆಯನ್ನು ಜ್ಯೋತಿರ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಖಂಡಿಸಿದ್ದಾರೆ. ಹರ್ಷ ರಿಚರಿಯಾರನ್ನು ಮಹಾಮಂಡಲೇಶ್ವರನ ರಾಜ ರಥದ ಮೇಲೆ ಕೂರಿಸಿರೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾಕುಂಭದಲ್ಲಿ ಇಂತಹ ಸಂಪ್ರದಾಯ ಆರಂಭಿಸಿರುವುದು ತಪ್ಪು. ಇದು ವಿಕೃತ ಮನಸ್ಥಿತಿಯ ಪರಿಣಾಮ. ಮಹಾಕುಂಭದಲ್ಲಿ ಮುಖದ ಸೊಬಗಲ್ಲ ಹೃದಯದ ಸೊಬಗು ಕಾಣಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.
ಸನ್ಯಾಸ ದೀಕ್ಷೆ ತೆಗೆದುಕೊಳ್ಳಬೇಕೋ, ಮದುವೆಯಾಗಬೇಕೋ ಎಂದು ಇನ್ನೂ ನಿರ್ಧರಿಸದವರಿಗೆ ಸಂತ ಮಹಾತ್ಮರ ರಾಜ ರಥದಲ್ಲಿ ಸ್ಥಾನ ನೀಡುವುದು ಸೂಕ್ತವಲ್ಲ. ಭಕ್ತನಾಗಿ ಪಾಲ್ಗೊಂಡಿದ್ದರೆ ಚೆನ್ನಾಗಿತ್ತು, ಆದರೆ ಕೇಸರಿ ಬಟ್ಟೆಯಲ್ಲಿ ರಾಜ ರಥದ ಮೇಲೆ ಕುಳಿತುಕೊಳ್ಳುವುದು ಸಂಪೂರ್ಣ ತಪ್ಪು. ಸನಾತನದ ಕಡೆಗೆ ಸಮರ್ಪಣಾಭಾವ ಹೊಂದಬೇಕು. ಮಹಾಕುಂಭದಲ್ಲಿ ಮುಖದ ಸೊಬಗಲ್ಲ, ಮನದ ಸೊಬಗು ಕಾಣಬೇಕಿತ್ತು ಎಂದಿದ್ದಾರೆ.
Leave a Comment