Anupama Gowda : ಒಂದು ಹೊತ್ತಿನ ಊಟಕ್ಕೂ ಪರದಾಟ – ಬದುಕಿನ ದರಿದ್ರ ದಿನಗಳನ್ನು‌ ನೆನಪಿಸಿಕೊಂಡ ಅನುಪಮಾ ಗೌಡ..!!

Anupama Gowda : ಒಂದು ಹೊತ್ತಿನ ಊಟಕ್ಕೂ ಪರದಾಟ – ಬದುಕಿನ ದರಿದ್ರ ದಿನಗಳನ್ನು‌ ನೆನಪಿಸಿಕೊಂಡ ಅನುಪಮಾ ಗೌಡ..!!

ನ್ಯೂಸ್ ಆ್ಯರೋ : ಒಂದು ಮನೆಯಲ್ಲಿ ತಂದೆಯೊಬ್ಬ ಕುಡಿತದ ಚಟಕ್ಕೆ ಬಿದ್ದಿದ್ದಾನೆ ಎಂದರೆ ಅಲ್ಲಿ ನೆಮ್ಮದಿ, ಸುಖದ ಬದಲು ಕಣ್ಣೀರು, ಗಲಾಟೆಗಳೇ ತಾಂಡವಾಡುತ್ತಿರುತ್ತದೆ. ಇಂತಹ ದರಿದ್ರ ದಿನಗಳನ್ನು ಸಾಕಷ್ಟು ದಿನಗಳು ಕಂಡಿರುತ್ತವೆ. ಇದರಿಂದ ಕನ್ನಡ ಚಿತ್ರರಂಗದ ನಟಿ ಅನುಪಮಾ ಗೌಡ ಕೂಡ ಹೊರತಲ್ಲ ಎಂಬ ಶಾಕಿಂಗ್ ನ್ಯೂಸ್ ಒಂದು ಇದೀಗ ಹೊರಬಿದ್ದಿದೆ.

ಬಾಲ ನಟಿಯಾಗಿ ನಟಿಸಿ ಬಳಿಕ ಧಾರವಾಹಿಗಳ ಮೂಲಕ ನಟನೆಗಿಳಿದ ಅನುಪಮಾ ಗೌಡ ಸದಾ ಕಾರ್ಯಕ್ರಮಗಳಲ್ಲಿ ನಗುತ್ತಾ, ಪಟ ಪಟ ಮಾತನಾಡುತ್ತಾ ಇರುತ್ತಾರೆ ಅಂದರೆ ಅವರ ಇಡೀ ಜೀವನ ನೆಮ್ಮದಿ, ಸಂತೋಷದಿಂದ ಕೂಡಿತ್ತು ಎಂದರೆ ಆ ನಿಮ್ಮ ಕಲ್ಪನೆ ತಪ್ಪು‌. ಬಹುಶಃ ಇವರನ್ನು ಬೆಂಕಿಯಲ್ಲಿ ಅರಳಿದ ಹೂವು ಎಂದರೂ ಅತಿಶೋಕ್ತಿಯಲ್ಲ.

ಹಿಂದೊಮ್ಮೆ ಒಂದು ಹೊತ್ತಿನ‌ ಊಟಕ್ಕೂ ಪರದಾಡಿದ್ದ ಅನುಪಮಾ ಗೌಡರ ಜೀವನ ಪ್ರತಿಯೊಬ್ಬನಿಗೂ ಸ್ಪೂರ್ತಿ. ಇವರ ತಂದೆ ಸಿನಿಮಾಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದವರು. ಆದರೆ ಆ ಕೆಲಸದಿಂದ ಸಾಕಷ್ಟು ಆದಾಯ ಬರುತ್ತಿರಲಿಲ್ಲ. ತಾಯಿ ಗಾರ್ಮೆಂಟ್ಸ್ ಗಳಲ್ಲಿ ದುಡಿಯುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊರಬೇಕಾದ ತಂದೆ ದಾರಿ ತಪ್ಪಿ ಬಿಟ್ಟರು..!!

ತಂದೆ-ತಾಯಂದಿರ ದುಡಿಮೆಯಿಂದ ಬರುತ್ತಿದ್ದ ಹಣದಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಕುಡಿತದ ಚಟಕ್ಕೆ ಬಿದ್ದ ತಂದೆ ದಿನಪೂರ್ತಿ ಮದ್ಯದ ಅಮಲಿನಲ್ಲೇ ಇರುತ್ತಿದ್ದರು. ಮನೆ, ಹೆಂಡತಿ, ಮಗಳನ್ನು ಮರೆತಿದ್ದ ತಂದೆಯಿಂದಾಗಿ ದಿನಾ ಅನುಪಮಾ ಹಾಗೂ ಅವರ ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು.

ಈ ಎಲ್ಲಾ ಕಾರಣಗಳಿಂದ ಅನುಪಮಾ ಗೌಡ 6 ನೇ ತರಗತಿಯಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟರಂತೆ. ಬದುಕಿಗಾಗಿ ಮನೆ ಮನೆಯಲ್ಲಿ ಪಾತ್ರೆ ತೊಳೆಯಲು ಕೂಡ ಅನುಪಮಾ ಗೌಡ ತೆರಳುವಂತಾಯಿತು. ಇದೇ ವೇಳೆ ಅವರ ತಂದೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಅವಕಾಶ ಅನುಪಮಾಗೆ ದೊರೆಯಿತು. ಅನಂತರ ಚಿಕ್ಕ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸುತ್ತರೆ.

ಮುಂದೆ ಅವರಿಗೆ ಅಕ್ಕಾ ಎಂಬ ಧಾರಾವಾಹಿಯಲ್ಲಿ ಅವಕಾಶ ಲಭಿಸಿ ಅದರಲ್ಲಿ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ನಂತರ ಚಿ.ಸೌ.ಸಾವಿತ್ರಿ ಧಾರಾವಾಹಿಯಲ್ಲೂ ಅವಕಾಶ ಲಭಿಸುತ್ತದೆ. ಮುಂದೆ ಬಿಗ್ ಬಾಸ್, ಸಿನಿಮಾಗಳಲ್ಲಿ ಸ್ಪರ್ಧಿ ಹಾಗೂ ನಟಿಯಾಗಿ ಕರುನಾಡಿಗೆ ಚಿರಪರಿಚಿತರಾಗುತ್ತಾರೆ.

ಪ್ರಮುಖ ವಿಚಾರವೆಂದರೆ ಮನೆ ಬಿಟ್ಟು ದೂರವಾಗಿದ್ದ ಇವರ ತಂದೆಗೆ ಇತ್ತೀಚೆಗೆ ಆರೋಗ್ಯದ ಸಮಸ್ಯೆ ಎದುರಾದಾಗ ಇವರೇ ಸಹಾಯ ಮಾಡಿದ್ದರು. ಹೆಣ್ಣಾಗಿ ಹುಟ್ಟಿ, ಸವಾಲುಗಳನ್ನು ಎದುರಿಸಿ ಇಂದು ಸಾಧಕಿಯಾಗಿರುವ ಅನುಪಮಾ ಗೌಡ ಜೀವನ ಪ್ರತಿ ಯುವತಿ ಯುವಕರಿಗೂ ಸ್ಪೂರ್ತಿದಾಯಕವಾಗಿದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *