ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್ ತೇಜಾ ದಂಪತಿ – ಚಿರಂಜೀವಿ ಕುಟುಂಬದಲ್ಲಿ ಸಂಭ್ರಮದ ವಾತಾವರಣ

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್ ತೇಜಾ ದಂಪತಿ – ಚಿರಂಜೀವಿ ಕುಟುಂಬದಲ್ಲಿ ಸಂಭ್ರಮದ ವಾತಾವರಣ

ನ್ಯೂಸ್‌ ಆ್ಯರೋ‌ : ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ರಾಮ್ ಚರಣ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಹೌದು.. ನಟ ರಾಮ್‌ ಚರಣ್ ತೇಜ ಹಾಗೂ ಉಪಾಸನಾ ಜೋಡಿ ಮದುವೆಯಾಗಿ 10 ವರ್ಷಗಳ ಕಳೆದ ಬಳಿಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಈ ವಿಷಯವನ್ನು ‘ಮಗಧೀರ’ ನಟ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತಪಡಿಸಿದ್ದಾರೆ.

“ನಾನು, ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಸುರೇಖಾ, ಚಿರಂಜೀವಿ ಹಾಗೂ ಶೋಬನಾ, ಅನಿಲ್ ಕಾಮಿನೇನಿ ಕಡೆಯಿಂದ ಕೃತಜ್ಞತೆಗಳು” ಎಂದು ರಾಮ್ ಚರಣ್ ತೇಜಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಈ ಕುರಿತು ಚಿರಂಜೀವಿ ಮತ್ತು ಅನಿಲ್ ಕಾಮಿನೇನಿ ಸುದ್ದಿಯನ್ನು ದೃಢಪಡಿಸಿದ್ದು, ‘ಶ್ರೀ ಹನುಮಾನ್ ಜೀ ಅವರ ಆಶೀರ್ವಾದದೊಂದಿಗೆ, ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ ಸುರೇಖಾ ಮತ್ತು ಚಿರಂಜೀವಿ ಕೊನಿಡೇಲಿ, ಶೋಭನಾ ಮತ್ತು ಅನಿಲ್ ಕಾಮಿನೇನಿ ಎಂದು ಬರೆದಿದ್ದಾರೆ.

ಅಲ್ಲದೇ ಈ ಹಿಂದೆ ಸಾಕಷ್ಟು ಬಾರಿ ಉಪಾಸನಾ ಮಗುವಿನ ಬಗ್ಗೆ ಮಾತನಾಡಿದ್ದು, ಮದುವೆಯಾಗಿ ಇಷ್ಟು ವರ್ಷವಾದರೂ ಕೂಡ ಈ ಜೋಡಿ ಮಗು ಮಾಡಿಕೊಂಡಿಲ್ಲ ಎಂದು ಪ್ರಶ್ನೆ ಮೂಡಿತ್ತು. ಅಲ್ಲದೇ ಉಪಾಸನಾ, “ಇದು ಮೊದಲಿಗೆ ನನ್ನ ವೈಯಕ್ತಿಕ ವಿಷಯ. ಸಮಸ್ಯೆ ಇದೆ ಅಥವಾ ಇಲ್ಲ ಎಂದು ಹೇಳಿದರೂ ಕೂಡ ಇನ್ನೇನೋ ಪ್ರಶ್ನೆ ಏಳುತ್ತದೆ. ಹಾಗಾಗಿ ನಾನು ಈ ಬಗ್ಗೆ ಏನೂ ಮಾತನಾಡಲಾರೆ” ಎಂದು ಹೇಳಿದ್ದರು.

ಹಾಗೇ ಸದ್ಗುರು ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ್ದ ಉಪಾಸನಾ ಅವರು, “ನಾನು ಮದುವೆಯಾಗಿ ಖುಷಿಯಿಂದ 10 ವರ್ಷ ಕಳೆದಿದ್ದೇನೆ. ನನಗೆ ನನ್ನ ಜೀವನ, ಕುಟುಂಬ ಅಂದರೆ ತುಂಬ ಇಷ್ಟ. ಆದರೆ ಜನರು ನನ್ನ ರಿಲೇಶನ್‌ಶಿಪ್‌, ಜೀವನದಲ್ಲಿ ನನ್ನ ಪಾತ್ರ, ಮಗುವಿನ ಬಗ್ಗೆ ಜನರು ಯಾಕೆ ಪ್ರಶ್ನೆ ಮಾಡ್ತಾರೆ ಅಂತ ಅರ್ಥ ಆಗುತ್ತಿಲ್ಲ. ಇದಕ್ಕೆ ಉತ್ತರ ಕೊಡಲು ಇಷ್ಟಪಡದಿರುವ ಎಷ್ಟೋ ಮಹಿಳೆಯರಿದ್ದಾರೆ” ಎಂದು ಹೇಳಿದ್ದರು.

ಇನ್ನೂ ರಾಮ್ ಚರಣ್ ಮತ್ತು ಉಪಾಸನಾ ಒಬ್ಬರನೊಬ್ಬರು ಪ್ರೀತಿಸಿ, ಜೂನ್ 14, 2012ರಂದು ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಇದೀಗ ಹತ್ತು ವರ್ಷಗಳು ರಾಮ್ ಚರಣ್ ಜೋಡಿ ವೈವಾಹಿಕ ಜೀವನ ಪೂರೈಸಿರುವ ಬೆನ್ನಲ್ಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಮ್ ಚರಣ್ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಚಿರಂಜೀವಿ ಸಾಮಾಜಿಕ ಜಾಲತಾಣದ ಮೂಲಕ ಸಿಹಿ ಸುದ್ದಿ ತಿಳಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *