ವೈಷ್ಣವಿ ಮದುವೆ ಬಗ್ಗೆ ತುಂಬಾ ಕನಸು ಕಂಡಿದ್ದಳು, ಎಲ್ಲವೂ ಉಲ್ಟಾಪಲ್ಟಾ ಆಯ್ತು – ರೂಂ ನಿಂದಲೇ ಹೊರಬರುತ್ತಿಲ್ಲ ಅಗ್ನಿ ಸಾಕ್ಷಿ ನಟಿ ; ವೈಷ್ಣವಿ ತಂದೆ ನೋವಲ್ಲಿ ನುಡಿದದ್ದೇನು?

ನ್ಯೂಸ್ ಆ್ಯರೋ : ಅಗ್ನಿಸಾಕ್ಷಿ ಧಾರಾವಾಹಿ ನಟಿ, ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿಚಾರವಾಗಿ ಸುದ್ದಿಯಾಗಿದ್ದರು. ಉದ್ಯಮಿ, ನಟ ವಿದ್ಯಾಭರಣ್ ಜೊತೆ ವೈಷ್ಣವಿ ಎಂಗೇಜ್ ಆಗಿದ್ದಾರೆ ಎನ್ನಲಾದ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು. ಅದು ನಿಶ್ಚಿತಾರ್ಥವಲ್ಲ, ಹೆಣ್ಣು ನೋಡುವ ಶಾಸ್ತ್ರವಷ್ಟೇ ಅಂತ ವೈಷ್ಣವಿ ಹೇಳಿಕೊಂಡಿದ್ದರು. ಈ ಮಧ್ಯೆ ವಿದ್ಯಾಭರಣ್ ವಿರುದ್ಧ ಆರೋಪಗಳು ಕೇಳಿ ಬಂದು, ಮದುವೆ ಮಾತುಕತೆ ಮುರಿದು ಬಿದ್ದಿದೆ. ಈ ಬಗ್ಗೆ ವೈಷ್ಣವಿ ಗೌಡ ತಂದೆ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಟಿ ವೈಷ್ಣವಿ ಗೌಡ ಮನೆಯಲ್ಲಿ ಶುಭ ಸಮಾರಂಭ ನಡೆದಿತ್ತು. ಉದ್ಯಮಿ, ನಟ ವಿದ್ಯಾಭರಣ್ ಕುಟುಂಬಸ್ಥರು ಹಾಗೂ ವೈಷ್ಣವಿ ಗೌಡ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾತುಕತೆ ನಡೆದಿತ್ತು. ತಾಂಬೂಲ ಬದಲಿಸಿಕೊಂಡಿದ್ದರು. ವೈಷ್ಣವಿ ಹಾಗೂ ವಿದ್ಯಾಭರಣ್ ಪರಸ್ಪರ ಹಾರ ಬದಲಿಸಿಕೊಂಡು, ಸಿಹಿ ತಿನಿಸಿರುವ ವಿಡಿಯೋ, ಫೋಟೋ ವೈರಲ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮುಂದಿನ ವರ್ಷ ನಿಶ್ಚಿತಾರ್ಥ, ಮದುವೆ ನಡೆಯುವುದರಲ್ಲಿತ್ತು. ಆದ್ರೆ ವಿದ್ಯಾಭರಣ್ ವಿರುದ್ಧ ಯುವತಿಯರಿಗೆ ಮೋಸ ಮಾಡಿದ ಆರೋಪ ಕೇಳಿಬಂದ ಬೆನ್ನಲ್ಲೇ ಎಲ್ಲವೂ ಉಲ್ಟಾಪಲ್ಟಾ ಆಗಿದೆ.

ಈ ಘಟನೆ ಬಗ್ಗೆ ನಟಿ ವೈಷ್ಣವಿ ತಂದೆ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಈ ಮದುವೆ ಕ್ಯಾನ್ಸಲ್‌ ಆಗಿದೆ. ವಿದ್ಯಾಭರಣ್ ಬಗ್ಗೆ ಕೇಳಿ ಶಾಕ್ ಆಯಿತು. ಮೊದಲು ನಮಗೆ ಈ ಬಗ್ಗೆ ಗೊತ್ತಿರಲಿಲ್ಲ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ಮಾಧ್ಯಮಗಳಲ್ಲಿ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು. ಜನವರಿಯಲ್ಲಿ ನಿಶ್ಚಿತಾರ್ಥ ಮಾಡಲು ತೀರ್ಮಾನ ಮಾಡಿದ್ದೆವು. ತಾಂಬೂಲ ಬದಲಿಸಿಕೊಂಡು, ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೆವು. ಆದ್ರೆ ಈಗ ವಿದ್ಯಾಭರಣ್ ಬಗ್ಗೆ ಕೇಳಿ ವೈಷ್ಣವಿ ತುಂಬಾ ಅಪ್’ಸೆಟ್ ಆಗಿದ್ದಾಳೆ. ರೂಂನಿಂದ ಹೊರ ಬಂದಿಲ್ಲ. ಅವಳಿಗೂ ಬೇಜಾರಾಗಿದೆ. ವಿದ್ಯಾಭರಣ್’ಗೆ ಆಗದೇ ಇರೋರು ಯಾರೋ ಈ ರೀತಿ ಮಾಡಿರಲೂಬಹುದು. ಆದ್ರೆ ಇದು ನಮ್ಮ ಮಗಳ ಜೀವನ. ಅವಳ ನಿರ್ಧಾರವೇ ಫೈನಲ್ ಎಂದು ವೈಷ್ಣವಿ ತಂದೆ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇನ್ನು ವೈಷ್ಣವಿ ಈಗಾಗಲೇ ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ವಿದ್ಯಾಭರಣ್ ಜೊತೆ ನನ್ನ ಎಂಗೇಜ್ಮೆಂಟ್ ಆಗಿಲ್ಲ. ಮದುವೆ ಮಾತುಕತೆ ನಡೆದಿತ್ತು ಅಷ್ಟೇ. ಆದ್ರೆ ಮದುವೆಗೆ ಮುಂಚೆಯೇ ವಿದ್ಯಾಭರಣ್ ಬಗ್ಗೆ ಗೊತ್ತಾಗಿದ್ದು ಒಳ್ಳೆಯದಾಯಿತು. ಈ ಸಂಬಂಧ ಮುಂದುವರಿಸುವುದಿಲ್ಲ. ನಾನು, ನನ್ನ ಕುಟುಂಬಸ್ಥರು ಇದನ್ನು ಇಲ್ಲಿಗೆ ಬಿಟ್ಟುಬಿಡುತ್ತೇವೆ, ನೀವು ಈ ವಿಚಾರವನ್ನು ಡ್ರಾಗ್ ಮಾಡಬೇಡಿ ಎಂದಿದ್ದಾರೆ.

Related post

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…
11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…

Leave a Reply

Your email address will not be published. Required fields are marked *