ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ನ್ಯೂಸ್‌ ಆ್ಯರೋ : ಪಾರ್ಟಿ, ಗೆಟ್‌ ಟುಗೆದರ್‌ ಎಲ್ಲಾ ಜೋರಾಗಿರುವ ಬಾಲಿವುಡ್‌ನಲ್ಲಿ ಮದ್ಯ ಎಲ್ಲ ಮಾಮೂಲು. ಪಾರ್ಟಿಗೆ ಸೇರುವುದೇ ಕುಡಿದು ಕುಣಿದಾಡ್ಲಿಕ್ಕೆ ಅಂತಾ ಹೇಳಿದರೆ ತಪ್ಪಾಗಲ್ಲ. ಹಲವು ಸಿನಿಮಾ ನಟ-ನಟಿಯರು ಮದ್ಯ ಸೇವಿಸುತ್ತಾರೆಂಬುದು ಗುಟ್ಟಾಗಿಲ್ಲ.

ಈಚೆಗೆ ರಣಬೀರ್‌ ಕಪೂರ್‌ ತಾನೊಬ್ಬ ಆಲ್ಕೋಹಾಲಿಕ್ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ರಣಬೀರ್‌ಗೆ ಕಡಿಮೆ ಬೆಲೆಯ ರಮ್‌ ಕುಡಿಸಿರುವ ಬಗ್ಗೆ ಸಹನಟರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟ ಸೌರಭ್ ಶುಕ್ಲ ಹಿಂದಿ ಚಿತ್ರರಂಗದ ಹೆಸರಾಂತ ಮುಖ. ಅಂದಹಾಗೆ ಸೌರಭ್ ಶುಕ್ಲ, ಕನ್ನಡದ ಕೇರ್ ಆಫ್ ಫುಟ್​ಪಾತ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಲವು ವರ್ಷಗಳಿಂದಲೂ ಪೋಷಕ ಪಾತ್ರಗಳು, ಹಾಸ್ಯ, ವಿಲನ್ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಸೌರಭ್ ಶುಕ್ಲ, ಈಚೆಗಿನ ಸಂದರ್ಶನವೊಂದರಲ್ಲಿ ತಾವು, ರಣಬೀರ್ ಕಪೂರ್ ಅತಿ ಕಡಿಮೆ ಬೆಲೆಯ ಸಸ್ತಾ ಡ್ರಿಂಕ್ಸ್ ಕುಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್ ಶುಕ್ಲಾಗೆ ಸಂದರ್ಶಕ ನೀವು ಡ್ರಿಂಕ್ಸ್ ಮಾಡ್ತೀರ, ಯಾವ ಬ್ರ್ಯಾಂಡ್ ಕುಡಿಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೌರಭ್, ಕಡಿಮೆ ಬೆಲೆಯಲ್ಲಿ ಸಿಗುವ ಓಲ್ಡ್ ಮಾಂಕ್ ಹಾಗೂ ಕೋಕ್ ಕುಡಿಯುತ್ತೀನಿ. ದುಬಾರಿ ಹಾಗೂ ಕಡಿಮೆ ಬೆಲೆಯ ಎರಡೂ ಮದ್ಯವನ್ನು ಸೇವಿಸುತ್ತೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ನಟ ರಣಬೀರ್‌ ಕಪೂರು ದುಬಾರಿ ಬೆಲೆಯ ರಮ್ ಕುಡಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಒಮ್ಮೆ ನಾವು ಲೇಹ್​ನಲ್ಲಿದ್ದೆವು. ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೆ. ಆಗ ಬಂದ ರಣಬೀರ್ ಏನು ಕುಡಿಯುತ್ತಿದ್ದೀರಿ ಎಂದು ಕೇಳಿದ ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೀನಿ ಎಂದೆ. ಆಗ ರಣಬೀರ್, ಇರಿ ನಾನು ಒಳ್ಳೆಯ ರಮ್ ಕುಡಿಸುತ್ತೇನೆ ಎಂದು ತರಿಸಿ ಕೊಟ್ಟಿದ್ದರು.

ರಣಬೀರ್ ಕಪೂರ್, 30 ಸಾವಿರ ಬೆಲೆಯ ರಮ್ ಬಾಟಲಿ ತರಿಸಿದ ಬಳಿಕ ನಾವಿಬ್ಬರು ಚೆನ್ನಾಗಿ ಕುಡಿದೆವು. ಮೊದಲೇ ಆ ಬಾಟಲಿಯಲ್ಲಿ ಸ್ವಲ್ಪ ಖಾಲಿಯಾಗಿತ್ತು. ಹಾಗಾಗಿ ಇಬ್ಬರಿಗೂ ಇನ್ನು ಸ್ವಲ್ಪ ರಮ್ ಬೇಕು ಎನಿಸಿತು. ಆಗ ನಾನು ರಣಬೀರ್ ಕಪೂರ್​ಗೆ ಓಲ್ಡ್ ಮಾಂಕ್ ಕುಡಿಸಿದೆ. ಅದು ಅವನಿಗೆ ಇಷ್ಟವಾಯಿತು ಎಂದಿದ್ದಾರೆ ಸೌರಭ್ ಶುಕ್ಲ.

ಅದಲ್ಲದೆ ರಣಬೀರ್‌ ಕಪೂರ್‌ಗೆ ಆ ₹30 ಸಾವಿರ ರೂಪಾಯಿಯ ರಮ್‌ ಮೊದಲು ಕುಡಿಸಿದ್ದು ತೆಲುಗು ಸ್ಟಾರ್ ನಟ ನಾಗಾರ್ಜುನ ಅಂತೆ ಎಂದು ಸಿಕ್ರೇಟ್‌ ಬಿಚ್ಚಿಟ್ಟಿದ್ದಾರೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *