ಜಿಯೋ ಪ್ರಿಪೇಯ್ಡ್ ನ ಒಂದೇ ರೀಚಾರ್ಜ್ ಗೆ 388 ದಿನಗಳ ವ್ಯಾಲಿಡಿಟಿ – ಹೈಸ್ಪೀಡ್ ಇಂಟರ್‌ನೆಟ್‌ ಇರೋ ಪ್ಯಾಕ್ ಬೆಲೆ ಎಷ್ಟು ಗೊತ್ತಾ..!?

ಜಿಯೋ ಪ್ರಿಪೇಯ್ಡ್ ನ ಒಂದೇ ರೀಚಾರ್ಜ್ ಗೆ 388 ದಿನಗಳ ವ್ಯಾಲಿಡಿಟಿ – ಹೈಸ್ಪೀಡ್ ಇಂಟರ್‌ನೆಟ್‌ ಇರೋ ಪ್ಯಾಕ್ ಬೆಲೆ ಎಷ್ಟು ಗೊತ್ತಾ..!?

ನ್ಯೂಸ್‌ ಆ್ಯರೋ : ಜಿಯೋ ತನ್ನ ಆರಂಭವನ್ನು ಶುರು ಮಾಡಿದ್ದೇ ಅತ್ಯುತ್ತಮ ಆಫರ್‌ನೊಂದಿಗೆ. ಇದರಿಂದ ಜಿಯೋ ಸಿಮ್‌ ಬಹಳಷ್ಟು ಜನಪ್ರಿಯವಾಗಿದ್ದು, ಇದಕ್ಕೆ ಕಾರಣ ಕೈಗೆಟುಕುವ ಬೆಲೆ ಮತ್ತು ಅತ್ಯುತ್ತಮ ಕೊಡುಗೆಗಳು ಎಂದರೆ ತಪ್ಪಾಗಲ್ಲ.

ಇದೀಗ ಜಿಯೋದ ಬೆಸ್ಟ್‌ ಪ್ರಿಪೇಯ್ಡ್ ಆಫರ್‌ ಗರಿಷ್ಠ ವ್ಯಾಲಿಡಿಟಿ ಜೊತೆಗೆ ಉತ್ತಮ ಪ್ರಯೋಜನಗಳನ್ನು ನೀಡಿದೆ. ಸಾಮಾನ್ಯವಾಗಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ದೀರ್ಘಾವಧಿಯ ವ್ಯಾಲಿಡಿಟಿ ನೀಡುವುದಿಲ್ಲ. ಆದರೆ ಈ ಯೋಜನೆಯ ವ್ಯಾಲಿಡಿಟಿ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ.

388 ದಿನಗಳ ವ್ಯಾಲಿಡಿಟಿಯಲ್ಲಿ ಹೈ ಸ್ಪೀಡ್‌ ಇಂಟರ್‌ನೆಟ್‌ ಲಭ್ಯ:
₹2,999 ರೂ. ರೀಚಾರ್ಜ್ ಪ್ಲಾನ್ ಇದಾಗಿದ್ದು, ಈ ಪ್ಲಾನ್‌ನಲ್ಲಿ ನಿಮಗೆ ದೀರ್ಘ ವ್ಯಾಲಿಡಿಟಿ ನೀಡಲಾಗುತ್ತದೆ. ಇದರಿಂದ ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡುವ ಅಗತ್ಯವಿಲ್ಲ.

ಈ ಯೋಜನೆಯಲ್ಲಿ ನಿಮಗೆ 912GB ಡೇಟಾವನ್ನು ನೀಡಲಾಗುತ್ತದೆ ಇಷ್ಟು ಮಾತ್ರವಲ್ಲದೆ ಈ ಪ್ಲಾನ್ ನಲ್ಲಿ ಗ್ರಾಹಕರು ಹೈ ಸ್ಪೀಡ್ ಇಂಟರ್ ನೆಟ್ ಕೂಡ ಲಭ್ಯವಿದೆ.

ಇದು ವಿಡಿಯೋ ಡೌನ್ ಲೋಡ್ ಮತ್ತು ವಿಡಿಯೋ ಸ್ಟ್ರೀಮಿಂಗ್‍ಗೆ ತುಂಬಾ ಉಪಯುಕ್ತವಾಗಿದೆ. ದಿನನಿತ್ಯದ ಆಧಾರದ ಮೇಲೆ ನೋಡಿದ್ರೆ ಈ ಯೋಜನೆಯಲ್ಲಿ 2.5 GB ಡೇಟಾ ನೀಡಲಾಗುತ್ತದೆ. ಗ್ರಾಹಕರು ತಮ್ಮ ಇಂಟರ್ನೆಟ್ ಅಗತ್ಯಗಳಿಗಾಗಿ ಇದನ್ನು ಬಳಸಬಹುದು. ಅಲ್ಲದೆ ಗ್ರಾಹಕರಿಗೆ ಪ್ರತಿದಿನ 100 SMS ಸಹ ನೀಡಲಾಗುತ್ತದೆ.

23 ದಿನಗಳ ಹೆಚ್ಚುವರಿ ವ್ಯಾಲಿಡಿಟಿ

ಈ ಯೋಜನೆಯ ಪ್ರಯೋಜನಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಯೋಜನೆಯಲ್ಲಿ ಮೊದಲು 365 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿತ್ತು. ಕಂಪನಿಯು 23 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸಹ ನೀಡುತ್ತಿದೆ. ಹೀಗಾಗಿ ನೀವು ಈ ರೀಚಾರ್ಜ್ ಪ್ಲಾನ್‍ನಲ್ಲಿ ಒಟ್ಟು 388 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಅಲ್ಲದೆ 87 GB ಹೆಚ್ಚುವರಿ ಡೇಟಾವನ್ನು ಕಂಪನಿ ನೀಡುತ್ತಿದೆ.

ಈ ರೀಚಾರ್ಜ್ ಪ್ಲಾನ್ ಬಳಕೆದಾರರಿಗೆ ಅತ್ಯುತ್ತಮವಾಗಿರುವ ಯೋಜನೆಯಾಗಿದ್ದು, ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ.

Related post

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ನೀವು…
ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…

Leave a Reply

Your email address will not be published. Required fields are marked *