ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ಬಾಲಿವುಡ್‌ ಸ್ಟಾರ್ ನಟನ ₹30 ಸಾವಿರ ರಮ್ ಖಾಲಿ – ಕಿಕ್‌ಗೆ ಸಹನಟನ ₹150 ಓಲ್ಡ್‌ ಮಾಂಕ್‌ ಸೇವಿಸಿದ ಆ ನಟ ಯಾರು?

ನ್ಯೂಸ್‌ ಆ್ಯರೋ : ಪಾರ್ಟಿ, ಗೆಟ್‌ ಟುಗೆದರ್‌ ಎಲ್ಲಾ ಜೋರಾಗಿರುವ ಬಾಲಿವುಡ್‌ನಲ್ಲಿ ಮದ್ಯ ಎಲ್ಲ ಮಾಮೂಲು. ಪಾರ್ಟಿಗೆ ಸೇರುವುದೇ ಕುಡಿದು ಕುಣಿದಾಡ್ಲಿಕ್ಕೆ ಅಂತಾ ಹೇಳಿದರೆ ತಪ್ಪಾಗಲ್ಲ. ಹಲವು ಸಿನಿಮಾ ನಟ-ನಟಿಯರು ಮದ್ಯ ಸೇವಿಸುತ್ತಾರೆಂಬುದು ಗುಟ್ಟಾಗಿಲ್ಲ.

ಈಚೆಗೆ ರಣಬೀರ್‌ ಕಪೂರ್‌ ತಾನೊಬ್ಬ ಆಲ್ಕೋಹಾಲಿಕ್ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ರಣಬೀರ್‌ಗೆ ಕಡಿಮೆ ಬೆಲೆಯ ರಮ್‌ ಕುಡಿಸಿರುವ ಬಗ್ಗೆ ಸಹನಟರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟ ಸೌರಭ್ ಶುಕ್ಲ ಹಿಂದಿ ಚಿತ್ರರಂಗದ ಹೆಸರಾಂತ ಮುಖ. ಅಂದಹಾಗೆ ಸೌರಭ್ ಶುಕ್ಲ, ಕನ್ನಡದ ಕೇರ್ ಆಫ್ ಫುಟ್​ಪಾತ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಲವು ವರ್ಷಗಳಿಂದಲೂ ಪೋಷಕ ಪಾತ್ರಗಳು, ಹಾಸ್ಯ, ವಿಲನ್ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಸೌರಭ್ ಶುಕ್ಲ, ಈಚೆಗಿನ ಸಂದರ್ಶನವೊಂದರಲ್ಲಿ ತಾವು, ರಣಬೀರ್ ಕಪೂರ್ ಅತಿ ಕಡಿಮೆ ಬೆಲೆಯ ಸಸ್ತಾ ಡ್ರಿಂಕ್ಸ್ ಕುಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್ ಶುಕ್ಲಾಗೆ ಸಂದರ್ಶಕ ನೀವು ಡ್ರಿಂಕ್ಸ್ ಮಾಡ್ತೀರ, ಯಾವ ಬ್ರ್ಯಾಂಡ್ ಕುಡಿಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೌರಭ್, ಕಡಿಮೆ ಬೆಲೆಯಲ್ಲಿ ಸಿಗುವ ಓಲ್ಡ್ ಮಾಂಕ್ ಹಾಗೂ ಕೋಕ್ ಕುಡಿಯುತ್ತೀನಿ. ದುಬಾರಿ ಹಾಗೂ ಕಡಿಮೆ ಬೆಲೆಯ ಎರಡೂ ಮದ್ಯವನ್ನು ಸೇವಿಸುತ್ತೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ನಟ ರಣಬೀರ್‌ ಕಪೂರು ದುಬಾರಿ ಬೆಲೆಯ ರಮ್ ಕುಡಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಒಮ್ಮೆ ನಾವು ಲೇಹ್​ನಲ್ಲಿದ್ದೆವು. ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೆ. ಆಗ ಬಂದ ರಣಬೀರ್ ಏನು ಕುಡಿಯುತ್ತಿದ್ದೀರಿ ಎಂದು ಕೇಳಿದ ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೀನಿ ಎಂದೆ. ಆಗ ರಣಬೀರ್, ಇರಿ ನಾನು ಒಳ್ಳೆಯ ರಮ್ ಕುಡಿಸುತ್ತೇನೆ ಎಂದು ತರಿಸಿ ಕೊಟ್ಟಿದ್ದರು.

ರಣಬೀರ್ ಕಪೂರ್, 30 ಸಾವಿರ ಬೆಲೆಯ ರಮ್ ಬಾಟಲಿ ತರಿಸಿದ ಬಳಿಕ ನಾವಿಬ್ಬರು ಚೆನ್ನಾಗಿ ಕುಡಿದೆವು. ಮೊದಲೇ ಆ ಬಾಟಲಿಯಲ್ಲಿ ಸ್ವಲ್ಪ ಖಾಲಿಯಾಗಿತ್ತು. ಹಾಗಾಗಿ ಇಬ್ಬರಿಗೂ ಇನ್ನು ಸ್ವಲ್ಪ ರಮ್ ಬೇಕು ಎನಿಸಿತು. ಆಗ ನಾನು ರಣಬೀರ್ ಕಪೂರ್​ಗೆ ಓಲ್ಡ್ ಮಾಂಕ್ ಕುಡಿಸಿದೆ. ಅದು ಅವನಿಗೆ ಇಷ್ಟವಾಯಿತು ಎಂದಿದ್ದಾರೆ ಸೌರಭ್ ಶುಕ್ಲ.

ಅದಲ್ಲದೆ ರಣಬೀರ್‌ ಕಪೂರ್‌ಗೆ ಆ ₹30 ಸಾವಿರ ರೂಪಾಯಿಯ ರಮ್‌ ಮೊದಲು ಕುಡಿಸಿದ್ದು ತೆಲುಗು ಸ್ಟಾರ್ ನಟ ನಾಗಾರ್ಜುನ ಅಂತೆ ಎಂದು ಸಿಕ್ರೇಟ್‌ ಬಿಚ್ಚಿಟ್ಟಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *