ಅಮರನಾಥ ಗುಹೆ ಬಳಿ ವಾಹನಗಳ ಅಟ್ಟಹಾಸ – ಕರಗುತ್ತಿದೆ ಪವಿತ್ರ ಶಿವಲಿಂಗ : ಕಾರಣವೇನು?

ಅಮರನಾಥ ಗುಹೆ ಬಳಿ ವಾಹನಗಳ ಅಟ್ಟಹಾಸ – ಕರಗುತ್ತಿದೆ ಪವಿತ್ರ ಶಿವಲಿಂಗ : ಕಾರಣವೇನು?

ನ್ಯೂಸ್ ಆ್ಯರೋ : ಪವಿತ್ರ ಧಾರ್ಮಿಕ ಕ್ಷೇತ್ರ ಎನಿಸಿಕೊಂಡಿರುವ ಅಮರನಾಥ ಗುಹೆಯ ಪಕ್ಕದಲ್ಲಿ ವಾಹನಗಳ ಅಟ್ಟಹಾಸ ಹೆಚ್ಚಾಗಿದ್ದು, ಶಿವಲಿಂಗ ಜರಗುತ್ತಿದೆ ಎಂಬ ಕೂಗು ಹೆಚ್ಚಾಗಿದೆ. ಈ ನಡುವೆ ಗಡಿ ರಸ್ತೆಗಳ ಸಂಸ್ಥೆಯು ಅಮರನಾಥ ಗುಹೆಗೆ ತೆರಳುವ ರಸ್ತೆ ಸಂಪರ್ಕವನ್ನು ವಿಸ್ತರಿಸಿದ್ದರಿಂದ ಮೊದಲ ಬಾರಿಗೆ ವಾಹನಗಳು ಅಮರನಾಥ ಗುಹೆಯನ್ನು ತಲುಪಿವೆ ಇದರೊಂದಿಗೆ ಪಾದಾಚಾರಿ ಮಾರ್ಗದ ಸುಧಾರಣೆಯನ್ನು ನಡೆಸಲಾಗಿದೆ ಎಂದು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ತಿಳಿಸಿದೆ.

ವಾಹನಗಳಿಂದ ಕಾಲ್ನಡಿಗೆಗೆ ಮುಕ್ತಿ!

ಕೇಂದ್ರ ಕಾಶ್ಮೀರದ ಗಂದ‌ಬಾಲ್ ಜಿಲ್ಲೆಯ ಬಲ್ಟಾಲ್ ಬೇಸ್ ಕ್ಯಾಂಪ್ ಮೂಲಕ ದುಮೈಲ್‌ನಿಂದ ಅಮರನಾಥ ಗುಹೆಯವರೆಗಿನ ರಸ್ತೆಯ ಅಗಲೀಕರಣ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಗುಹಾ ದೇಗುಲಕ್ಕೆ ಹೋಗುವ ಅವಳಿ ರಸ್ತೆಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಆರ್‌ಒಗೆ ವಹಿಸಲಾಗಿತ್ತು. ಸಾಂಪ್ರದಾಯಿಕವಾಗಿ ಕಾಲ್ನಡಿಗೆಯಲ್ಲಿ ಗುಹಾ ದೇಗುಲಕ್ಕೆ ತೆರಳಬೇಕಿದ್ದ ಯಾತ್ರಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಬಿ.ಆರ್.ಓ ರಸ್ತೆ ವಿಸ್ತರಣೆಯ ಜವಾಬ್ದಾರಿ ಕೈಗೆತ್ತಿಕೊಂಡಿದೆ. ಇದರಿಂದಾಗಿ ಕಾಲ್ನಡಿಗೆಯ ಯಾತ್ರೆಗೆ ಮುಕ್ತಿ ದೊರೆಯಲಿದೆ.

ಐತಿಹಾಸಿಕ ಹೆಜ್ಜೆಯಿಟ್ಟ ಬಿಆರ್‌ಒ

ಈ ಬಗ್ಗೆ ಮಾತನಾಡಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಧಿಕಾರಿಯೊಬ್ಬರು, ‘ಕೇಂದ್ರದ ಯೋಜನೆ ಹಾಗೂ ಸಂಸ್ಥೆ ಮಾಡಿರುವ ಕಾಮಗಾರಿ ಬೇರೆ ಬೇರೆ. ಕೇಂದ್ರದ ಯೋಜನೆ ಇನ್ನಷ್ಟೇ ಜಾರಿಗೆ ಬರಬೇಕಿದೆ. ಪ್ರಾಜೆಕ್ಟ್ ಬೀಕನ್, ಅಮರನಾಥ ಯಾತ್ರಾ ರಸ್ತೆಗಳ ಮರುಸ್ಥಾಪನೆ ಹಾಗೂ ಸುಧಾರಣೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಸಿಬ್ಬಂದಿಗಳು ಮಹತ್ತರವಾದ ಸಾಧನೆಯನ್ನು ಪೂರ್ಣಗೊಳಿಸಿ, ಪವಿತ್ರ ಗುಹೆಯತ್ತ ವಾಹನಗಳನ್ನು ತಲುಪಿಸಿ ಐತಿಹಾಸಿಕ‌ ಹೆಜ್ಜೆಯಿಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ಕರಗುತ್ತಿದೆ ಶಿವಲಿಂಗ..!

ಆದರೆ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೆಲವು ಪರಿಸರವಾದಿಗಳು ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಅಮರನಾಥ ಗುಹೆಯತ್ತ ಹೆಚ್ಚಿನ ವಾಹನಗಳು ಆಗಮಿಸುತ್ತದೆ‌. ಜೊತೆಗೆ ಈ ರೀತಿ ವಾಹನಗಳ ಸಂಖ್ಯೆ ಹೆಚ್ಚಾದ ಅವುಗಳು ಹೊರ ಸೂಸುವ ಹೊಗೆಯಿಂದಾಗಿ ಸುತ್ತಮುತ್ತಲಿನ ವಾತಾವರಣ ಬಿಸಿಸಯಾಗುತ್ತದೆ ಮತ್ತು ಅಮರನಾಥ ಗುಹೆಯಲ್ಲಿರುವ ಶಿವಲಿಂಗ ಕರಗುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಈ ಯೋಜನೆಯನ್ನು ‘ಇದು ಹಿಂದೂಗಳ ನಂಬಿಕೆಗೆ ಮಾಡಿದ ದೊಡ್ಡ ಅವಮಾನ’ ಎಂದು ಟೀಕಿಸಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *