ದಿವಾಳಿಯಾದ ಅಮೆರಿಕಾದ ದೈತ್ಯ ಕಂಪೆನಿ ವಿವರ್ಕ್ – ಆರ್ಥಿಕ ಅಧಃಪತನಕ್ಕೆ ಕಾರಣವೇನು ಗೊತ್ತಾ?

ದಿವಾಳಿಯಾದ ಅಮೆರಿಕಾದ ದೈತ್ಯ ಕಂಪೆನಿ ವಿವರ್ಕ್ – ಆರ್ಥಿಕ ಅಧಃಪತನಕ್ಕೆ ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ : ಕೊರೊನಾ ಸಾಂಕ್ರಾಮಿಕ ಹೊಡೆತ ಸೇರಿದಂತೆ ಹಲವು ಕಾರಣಗಳಿಂದ ಯುಎಸ್ ನ ದೈತ್ಯ ಕಂಪೆನಿಯೊಂದು ದಿವಾಳಿಯಾಗಿದೆ. ಹಲವಾರು ವರ್ಷಗಳಿಂದ ನಷ್ಟದಲ್ಲಿರುವ ಕಂಪೆನಿಯನ್ನು ಮೇಲಕ್ಕೆತ್ತುವ ಎಲ್ಲ ಪ್ರಯತ್ನ ನಡೆಸಿ ಸೋತಿರುವ ಕಂಪೆನಿ ಈಗ ರಕ್ಷಣೆಗಾಗಿ ದಿವಾಳಿತನ ಘೋಷಿಸಲು ನ್ಯಾಯಾಲಯ ಮೆಟ್ಟಿಲೇರಿದೆ.

ಕೋ ವರ್ಕ್ ಸ್ಪೇಸ್ ಸೇವೆಗೆ ಹೆಸರುವಾಸಿಯಾಗಿರುವ ಯುಎಸ್ ಮೂಲದ ವಿವರ್ಕ್ ಕಂಪೆನಿಯು ನಷ್ಟದ ಜಾಲಕ್ಕೆ ಸಿಲುಕಿದ್ದು, ನ್ಯೂಜೆರ್ಸಿ ಫೆಡರಲ್ ನ್ಯಾಯಾಲಯದಲ್ಲಿ ದಿವಾಳಿತನ ಘೋಷಣೆ ಮಾಡಲು ದಾವೆ ಸಲ್ಲಿಸಿದೆ.

ಆಡಮ್ ನ್ಯೂಮನ್ ನೇತೃತ್ವದಲ್ಲಿ 2010ರಲ್ಲಿ ಸ್ಥಾಪನೆಯಾದ ವಿವರ್ಕ್ ಕಂಪೆನಿಯು ವ್ಯಕ್ತಿ ಮತ್ತು ಕಂಪೆನಿಗಳಿಗೆ ಅಲ್ಪಾವಧಿಯ ಆಧಾರದ ಮೇಲೆ ಜಾಗವನ್ನು ಬಾಡಿಗೆಗೆ ಮತ್ತು ಹಂಚಿಕೊಳ್ಳಲು ಕಚೇರಿ ಸ್ಥಳಗಳನ್ನು ಗುತ್ತಿಗೆಗೆ ನೀಡುತ್ತಿತ್ತು.

ಕಚೇರಿಗಳಲ್ಲಿ ಮುಕ್ತ ವಾತಾವರಣ, ಪ್ರಕಾಶಮಾನವಾದ ಬೆಳಕು, ಶಾಂತ ಮತ್ತು ಅಲಂಕಾರಯುತವಾದ ಸ್ಥಳವನ್ನು ಕಲ್ಪಿಸುವಲ್ಲಿ ಹೆಸರುವಾಸಿಯಾಗಿರುವ ವಿವರ್ಕ್ ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಸ್ಥಳಗಳನ್ನು ಮತ್ತು ಸುಮಾರು 7,30,000 ಸದಸ್ಯರನ್ನು ಹೊಂದಿತ್ತು.

ಸಾರ್ವಜನಿಕರಿಂದ ಹಣ ಸಂಗ್ರಹ ಪ್ರಯತ್ನದ ಬಳಿಕ ವಿವರ್ಕ್‌ ಬೇಡಿಕೆ ಕಡಿಮೆಯಾಗಿದ್ದು, ಸಹ-ಸಂಸ್ಥಾಪಕ ಆಡಮ್ ನ್ಯೂಮನ್ ಅವರನ್ನು ಕಂಪೆನಿಯಿಂದ ಹೊರಹಾಕಲಾಯಿತು. ಇದರೊಂದಿಗೆ ಕೋವಿಡ್ ಸಾಂಕ್ರಾಮಿಕ ಕಂಪೆನಿಗೆ ಭಾರೀ ಹೊಡೆತವನ್ನೇ ನೀಡಿತು. ಹೀಗಾಗಿ ಅನೇಕ ಕಚೇರಿಗಳು ಮುಚ್ಚಿದ್ದು, ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕಂಪೆನಿಗೆ ಮತ್ತಷ್ಟು ಆಘಾತ ನೀಡಿತು. ಕಂಪೆನಿಯು ತನ್ನ ವ್ಯವಹಾರದ ಪಾಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದು, ಸಾಧ್ಯವಾಗದೆ ಈಗ ಸಮಯಾವಕಾಶ ಕೇಳಿದೆ.

10 ರಿಂದ 50 ಬಿಲಿಯನ್‌ವರೆಗೆ ಡಾಲರ್ ವರೆಗಿನ ಸಾಲ ಕಂಪೆನಿ ಮೇಲಿದ್ದು, ಇದನ್ನು ಪಡೆದಿರುವ ಸಾಲಗಾರರಿಂದ ಕಾನೂನು ರಕ್ಷಣೆ ಮತ್ತು ಭೂಮಾಲೀಕರೊಂದಿಗೆ ಮಾತುಕತೆಗಾಗಿ ಹೆಚ್ಚಿನ ಅವಕಾಶ ನೀಡುವಂತೆ ಕೋರಿ ಕಂಪೆನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ವಿವರ್ಕ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಟೋಲಿ, ನಮ್ಮ ಸಂಸ್ಥೆಯ ಉನ್ನತಿಯಲ್ಲಿ ಹಲವರ ಪಾಲಿದೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದು ನಮಗೆ ಬೆಂಬಲವಾಗಿರುವ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *