ಶ್ರೀ ರಾಮರಕ್ಷಾಸ್ತೋತ್ರದ 16ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 13, 2023
- No Comment
- 88
ಶ್ಲೋಕ 16
ವಜ್ರಪಂಜರನಾಮೇದಂ ಯೋ ರಾಮಕವಚಂ ಸ್ಮರೇತ್ | ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯ ಮಂಗಲಮ್ ||16||
ಶ್ಲೋಕದ ಅರ್ಥ
ನಿಷ್ಠೆಯಿಂದ ಈ ಸ್ತೋತ್ರ ಪಾರಾಯಣಗೈದಲ್ಲಿ ಈ ರಾಮ ರಕ್ಷಾ ಸ್ತೋತ್ರ ಪಠಣದಿಂದುಂಟಾಗುವ ದಿವ್ಯಸ್ಪಂದನವು ವಜ್ರಪಂಜರದಂತೆ ವ್ಯಕ್ತಿಯನ್ನು ಆವರಿಸಿ, ಎಂಥ ಕಷ್ಟನಷ್ಟಗಳ ಹೊಡೆತದಿಂದಲೂ ವ್ಯಕ್ತಿಯನ್ನು ರಕ್ಷಿಸುವುದಲ್ಲದೆ ಆತನ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನೆಲ್ಲ ಹೆಚ್ಚಿಸಿ, ಸರ್ವತ್ರ ಸರ್ವದಾ ಆತನ ಪಾಲಿಗೆ ಗೆಲವು, ನಲಿವುಗಳನ್ನು ದೊರಕಿಸಿ ಕೊಡುತ್ತದೆ. ||16||