ಸ್ವಂತ ತಂದೆಯಲ್ಲದಿದ್ರೂ ತಂದೆಯಂತೆಯೇ ಪ್ರೀತಿ ಕೊಟ್ಟಿದ್ದಾರಂತೆ ರಾಜಮೌಳಿ – ಹಲವರಿಗೆ ಗೊತ್ತಿಲ್ಲದ ರಾಜಮೌಳಿ ಅವರ ಬದುಕಿನ ಅಸಲಿ ಸತ್ಯ ನಿಮಗ್ಗೊತ್ತಾ..!?

ಸ್ವಂತ ತಂದೆಯಲ್ಲದಿದ್ರೂ ತಂದೆಯಂತೆಯೇ ಪ್ರೀತಿ ಕೊಟ್ಟಿದ್ದಾರಂತೆ ರಾಜಮೌಳಿ – ಹಲವರಿಗೆ ಗೊತ್ತಿಲ್ಲದ ರಾಜಮೌಳಿ ಅವರ ಬದುಕಿನ ಅಸಲಿ ಸತ್ಯ ನಿಮಗ್ಗೊತ್ತಾ..!?

ನ್ಯೂಸ್‌ ಆ್ಯರೋ : ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ರಮಾ ರಾಜಮೌಳಿ ಅವರ ಪುತ್ರ ಎಸ್.ಎಸ್. ಕಾರ್ತಿಕೇಯ ಅವರು ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ತಂದೆ– ತಾಯಿಯ ವೈಯಕ್ತಿಕ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕಾರ್ತಿಕೇಯ ಅವರು ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದು, ಆರ್ ಆರ್ ಆರ್ ಸಿನಿಮಾ ಯಶಸ್ಸಿಗೆ ಇವರು ಕಾರಣರಾಗಿದ್ದಾರೆ. ಇನ್ನೂ ಕಾರ್ತಿಕೇಯ ಅವರು ರಾಜಮೌಳಿ ಅವರ ಸ್ವಂತ ಮಗ ಅಲ್ಲ. ರಮಾ ಅವರ ಮೊದಲ ಗಂಡನ ಮಗನಾಗಿದ್ದು, ಕಾರ್ತಿಕೇಯ ಅವರಿಗೆ 8 ವರ್ಷವಿರುವಾಗ ರಮಾ ಅವರನ್ನು ರಾಜಮೌಳಿ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಮೊದಲಿಗೆ ಮದುವೆಗೆ ನಿರಾಕರಿಸಿದ್ದ ರಮಾ ಅವರು ಕಾರ್ತಿಕೇಯ ಮೇಲೆ ರಾಜಮೌಳಿ ತೋರುತ್ತಿದ್ದ ಪ್ರೀತಿ ಕಂಡು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಮದುವೆಗೂ ಮೊದಲು ರಾಜಮೌಳಿ ಹಾಗೂ ರಮಾ ಅವರು ಸಂಬಂಧಿಕರಾಗಿದ್ದು, ಮದುವೆ ನಂತರ ರಾಜಮೌಳಿ- ಕಾರ್ತೀಕೇಯ ತಂದೆ ಮಗನಂತೆಯೇ ಇದ್ದಾರೆ. ಯಾವತ್ತೂ ಇವರಿಬ್ಬರು ಸ್ವಂತ ತಂದೆ ಮಗ ಅಲ್ಲ ಎನ್ನುವ ಅನುಮಾನ ಬಂದಿರಲಿಲ್ಲ.

ಸಂದರ್ಶನವೊಂದರಲ್ಲಿ ಮಾತನಾಡಿದ ಎಸ್‌. ಎಸ್ ಕಾರ್ತಿಕೇಯ ಅವರು, ಆರ್ ಆರ್ ಆರ್ ಸಿನಿಮಾಕ್ಕೆ ಆಸ್ಕರ್ ಲಭಿಸಲು 80 ಕೋಟಿ ಖರ್ಚು ಮಾಡಲಾಗಿದೆ ಎಂಬುದರ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಸ್ಕರ್‌ಗಾಗಿ 80 ಕೋಟಿ ರೂ. ಖರ್ಚಾಯ್ತು ಅನ್ನುವುದು ಸುಳ್ಳು. ಅಂದಾಜು 8 ರಿಂದ 9 ಕೋಟಿ ರೂ. ವ್ಯಯಿಸಿದೆವು. 80 ಕೋಟಿ ರೂ. ಅನ್ನುವ ವದಂತಿ ಹೇಗೆ ಹಬ್ಬಿತು ಅನ್ನುವುದು ಗೊತ್ತಿಲ್ಲ. 80 ಕೋಟಿ ರೂ. ಅಂದರೆ ಎಷ್ಟು ದೊಡ್ಡ ಮೊತ್ತ. ಅಷ್ಟೊಂದೆಲ್ಲ ನಾವು ಯಾಕೆ ಖರ್ಚು ಮಾಡಬೇಕು. ನಮಗೂ ಈ ಸುದ್ದಿ ನೋಡಿದಾಗ ವಿಚಿತ್ರ ಅನ್ನಿಸಿತು. ಆದರೆ ನಾವು ಈ ಬಗ್ಗೆ ಎಲ್ಲೂ ಮಾತನಾಡಲು ಹೋಗಲಿಲ್ಲ. ಈಗ ಸಂದರ್ಶನದಲ್ಲಿ ಕೇಳಿದ್ದಕ್ಕೆ ಹೇಳುತ್ತಿದ್ದೇನೆ ಅಷ್ಟೆ. 8ರಿಂದ 9 ಕೋಟಿ ರೂ. ಖರ್ಚಾಗಿದೆ ಎಂದರು.

ತಂದೆ ತಾಯಿಯ ಮದುವೆ ಬಗ್ಗೆ ಮಾತನಾಡಿದ ಅವರು, ಮದುವೆಗೂ ಮುನ್ನವೇ ರಾಜಮೌಳಿ ಅವರು ನಮ್ಮ ಮನೆಗೆ ಬರುತ್ತಿದ್ದರು. ನನ್ನನ್ನು ಅಮ್ಮನನ್ನು ಡಿನ್ನರ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಶೂಟಿಂಗ್ ಬ್ಯುಸಿಯಲ್ಲಿ ಬರದೇ ಇದ್ದರೆ ನಾನೇ ಫೋನ್ ಮಾಡಿ ಯಾಕೆ ಬಂದಿಲ್ಲ ಎಂದು ಕೇಳುತ್ತಿದ್ದೆ. ನನಗೆ ತಂದೆ ಎಂಬ ಭಾವನೆಯನ್ನು ಅವರು ಕೊಟ್ಟಿದ್ದರು. 8 ವರ್ಷವನಿದ್ದಾಗ ಅವರ ಮದುವೆಯಾಗಿದೆ. ಒಬ್ಬ ತಂದೆ ಯಾವ ರೀತಿ ಇರುತ್ತಾರೆ, ಹಾಗೆಯೇ ನನ್ನ ಜತೆ ವರ್ತಿಸುತ್ತಿದ್ದರು. ಅವರನ್ನು ಎಂದೂ ಬಿಡಬೇಕು ಎಂದು ಅನ್ನಿಸಲಿಲ್ಲ” ಎಂದು ಮನದ ಮಾತನ್ನು ಹಂಚಿಕೊಂಡಿದ್ದಾರೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *