ನಟಿ ಅಮಲಾ ಪೌಲ್ ಗೆ ಧಮ್ಕಿ ಹಾಕಿದ್ದ ರಜನಿಕಾಂತ್ – ಮಗಳಿಗಾಗಿ ಖಡಕ್ ಆದ್ರಾ ಸೂಪರ್ ಸ್ಟಾರ್? ಪತ್ರಕರ್ತ ಬಾಯ್ಬಿಟ್ಟ ಸತ್ಯವೇನು?

ನಟಿ ಅಮಲಾ ಪೌಲ್ ಗೆ ಧಮ್ಕಿ ಹಾಕಿದ್ದ ರಜನಿಕಾಂತ್ – ಮಗಳಿಗಾಗಿ ಖಡಕ್ ಆದ್ರಾ ಸೂಪರ್ ಸ್ಟಾರ್? ಪತ್ರಕರ್ತ ಬಾಯ್ಬಿಟ್ಟ ಸತ್ಯವೇನು?

ನ್ಯೂಸ್‌ ಆ್ಯರೋ : ಸೂಪರ್‌ ಸ್ಟಾರ್ ರಜನಿಕಾಂತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಐಶ್ವರ್ಯ ಹಾಗೂ ಸೌಂದರ್ಯ ಎಂಬ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕಾಗಿದ್ದು, ಸೌಂದರ್ಯ ಅವರು ಈಗಾಗಲೇ ಗಂಡನಿಂದ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇನ್ನೂ ನಟ ಧನುಷ್‌ ಅವರನ್ನು ಮದುವೆಯಾಗಿರುವ ಐಶ್ವರ್ಯ ಕೂಡ ಗಂಡನಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇನ್ನೂ ಇವರಿಬ್ಬರ ದಾಂಪತ್ಯವನ್ನು ಸರಿಮಾಡಲು ರಜನಿಕಾಂತ್ ಅವರು ತುಂಬಾನೇ ಪ್ರಯತ್ನ ಪಟಿದ್ದಾರಂತೆ. ಇದೀಗ ಈ ಸಂಬಂಧ ಪತ್ರಕರ್ತರೊಬ್ಬರು ಮಾತನಾಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಜನಿಕಾಂತ್ ಯಾರಿಗಾದ್ರೂ ಧಮ್ಕಿ ಹಾಕಲು ಸಾಧ್ಯವೇ? ಯಾರನ್ನೇ ನೋಡಿದ್ರೂ ಕೈಮುಗಿದು ಗೌರವ ಕೊಡುವ ರಜನಿಕಾಂತ್ ಅವರು ತಮ್ಮ ಮಗಳ ದಾಂಪತ್ಯ ಸಂಬಂಧ ಮಲೆಯಾಳಂ ನಟಿಗೆ ಧಮ್ಕಿ ಹಾಕಿದ್ದಾರೆ ಎಂಬ ವಿಷಯವನ್ನು ಪತ್ರಕರ್ತ ಹೇಳಿಕೊಂಡಿದ್ದಾರೆ. ಆ ನಟಿ ಬೇರಾರೂ ಅಲ್ಲ. ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟ ಸುದೀಪ್‌ಗೆ ನಾಯಕಿಯಾಗಿ ನಟಿಸಿದ ಅಮಲಾ ಪೌಲ್‌ ಅನ್ನೋ ಸುದ್ದಿ ಹೆಚ್ಚು ಕುತೂಹಲ ಮೂಡಿಸಿದೆ.

ಈ ಹಿಂದೆ ನಟಿ ಅಮಲಾ ಪೌಲ್ ಮತ್ತು ಧನುಷ್ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಆಗಲೇ ಇವರಿಗೆ ಆತ್ಮೀಯತೆ ಬೆಳೆದಿದೆ. ಅದು ಇನ್ನೂ ಒಂದು ಲೆವಲ್‌ಗೆ ಹೋಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ಇದರಿಂದ ಐಶ್ವರ್ಯ ಹಾಗೂ ಧನುಷ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತಿದೆ. ಈ ವೇಳೆ ರಜನಿಕಾಂತ್ ಅವರು ತಮ್ಮ ಮಗಳ ಬದುಕು ಸರಿಮಾಡುವ ಸಲುವಾಗಿ ನಟಿ ಅಮಲಾ ಪೌಲ್‌ ಮನೆಗೆ ಹೋಗಿ ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿಕೊಂಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *