ಅಭಿಮಾನಿಯ ಐಷಾರಾಮಿ ಕಾರಿಗೆ ಆಟೋಗ್ರಾಫ್ ಹಾಕಿದ ಡಿಂಪಲ್ ಕ್ವೀನ್‌ – ಏನಿದು ಘಟನೆ? ರಚಿತಾ ರಾಮ್ ಮನೆ ಮುಂದೆ ಏನಾಯ್ತು?

ಅಭಿಮಾನಿಯ ಐಷಾರಾಮಿ ಕಾರಿಗೆ ಆಟೋಗ್ರಾಫ್ ಹಾಕಿದ ಡಿಂಪಲ್ ಕ್ವೀನ್‌ – ಏನಿದು ಘಟನೆ? ರಚಿತಾ ರಾಮ್ ಮನೆ ಮುಂದೆ ಏನಾಯ್ತು?

ನ್ಯೂಸ್‌ ಆ್ಯರೋ : ಸ್ಟಾರ್ ನಟರ ಹಾಗೇ ಇದೀಗ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ಗೆ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟಾರ್ ನಟರ ಮನೆ ಮುಂದೆ ನಿಲ್ಲುವ ಹಾಗೇ ರಚಿತಾ ರಾಮ್ ಮನೆಮುಂದೆ ವೀಕೆಂಡ್ ದಿವಸ ನೂರಾರು ಮಂದಿ ಅವರ ದರ್ಶನಕ್ಕೆ ಕಾಯುತ್ತಿರುತ್ತಾರೆ. ಅದಲ್ಲದೆ ತಮ್ಮ ಹೊಸ ವಾಹನಗಳಿಗೆ ನಟಿಯ ಆಟೋಗ್ರಾಫ್‌ ಸಿಗಬೇಕೆಂದು ಬೆಳ್ಳಂಬೆಳಗ್ಗೆನೇ ಕಾಯುವವರ ಸಂಖ್ಯೆ ಹೆಚ್ಚಳವಾಗಿದೆ.

ಈ ವಾರವೂ ಅಭಿಮಾನಿಯೊಬ್ಬ ತಮ್ಮ ಬಿಳಿ ಬಣ್ಣದ ಐಷಾರಾಮಿ ಕಾರನ್ನು ತಂದು ರಚ್ಚು ಮನೆ ಮುಂದೆ ನಿಲ್ಲಿಸಿ ಗಂಟೆಗಟ್ಟಲೆ ಕಾದಿದ್ದಾನೆ. ಅಭಿಮಾನಿ ಪ್ರೀತಿಗೆ ರಚಿತಾ ರಾಮ್ ಅವರು ಕಾರಿನ ಬಾನೆಟ್‌ ಮೇಲೆ ಹಾಗೂ ಕಾರಿನ ಡ್ಯಾಷ್‌ಬೋರ್ಡ್‌ ಮೇಲೆ ತಮ್ಮ ಆಟೋಗ್ರಾಫ್ ಹಾಕಿದ್ದಾರೆ. ವಾರ ವಾರವೂ ಅವರ ರಾಜರಾಜೇಶ್ವರಿ ಮನೆ ಮುಂದೆ ಬರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗೆ ಅಭಿಮಾನಿಗಳು ತಮ್ಮ ಹೊಸ ಕಾರು, ಬೈಕ್ ಅಥವಾ ಆಟೋ ಮೇಲೆ ರಚ್ಚು ಫೋಟೋ ಹಾಕಿಸಿ ತಪ್ಪದೆ ಆಟೋಗ್ರಾಫ್ ಪಡೆಯುತ್ತಾರೆ.

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ ರಚಿತಾ ರಾಮ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಹಾಗೂ ನೈಜ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸದ್ಯ ಕೈ ತುಂಬಾ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್‌ನಲ್ಲೂ ಜಡ್ಜ್‌ ಆಗಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ಗಳ ಮನೆ ಮುಂದೆ ಹೀಗೆ ಜನರು ಸಾಲು ಸಾಲಾಗಿ ನಿಲ್ಲುತ್ತಾರೆ. ಇದೇ ಮೊದಲು ನಾಯಕಿ ಮನೆ ಮುಂದೆ ಜನರು ಬರುತ್ತಿರುವುದು. ಹೀಗಾಗಿ ರಚಿತಾ ರಾಮ್‌ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *