ಅಭಿಮಾನಿಯ ಐಷಾರಾಮಿ ಕಾರಿಗೆ ಆಟೋಗ್ರಾಫ್ ಹಾಕಿದ ಡಿಂಪಲ್ ಕ್ವೀನ್‌ – ಏನಿದು ಘಟನೆ? ರಚಿತಾ ರಾಮ್ ಮನೆ ಮುಂದೆ ಏನಾಯ್ತು?

ಅಭಿಮಾನಿಯ ಐಷಾರಾಮಿ ಕಾರಿಗೆ ಆಟೋಗ್ರಾಫ್ ಹಾಕಿದ ಡಿಂಪಲ್ ಕ್ವೀನ್‌ – ಏನಿದು ಘಟನೆ? ರಚಿತಾ ರಾಮ್ ಮನೆ ಮುಂದೆ ಏನಾಯ್ತು?

ನ್ಯೂಸ್‌ ಆ್ಯರೋ : ಸ್ಟಾರ್ ನಟರ ಹಾಗೇ ಇದೀಗ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ಗೆ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟಾರ್ ನಟರ ಮನೆ ಮುಂದೆ ನಿಲ್ಲುವ ಹಾಗೇ ರಚಿತಾ ರಾಮ್ ಮನೆಮುಂದೆ ವೀಕೆಂಡ್ ದಿವಸ ನೂರಾರು ಮಂದಿ ಅವರ ದರ್ಶನಕ್ಕೆ ಕಾಯುತ್ತಿರುತ್ತಾರೆ. ಅದಲ್ಲದೆ ತಮ್ಮ ಹೊಸ ವಾಹನಗಳಿಗೆ ನಟಿಯ ಆಟೋಗ್ರಾಫ್‌ ಸಿಗಬೇಕೆಂದು ಬೆಳ್ಳಂಬೆಳಗ್ಗೆನೇ ಕಾಯುವವರ ಸಂಖ್ಯೆ ಹೆಚ್ಚಳವಾಗಿದೆ.

ಈ ವಾರವೂ ಅಭಿಮಾನಿಯೊಬ್ಬ ತಮ್ಮ ಬಿಳಿ ಬಣ್ಣದ ಐಷಾರಾಮಿ ಕಾರನ್ನು ತಂದು ರಚ್ಚು ಮನೆ ಮುಂದೆ ನಿಲ್ಲಿಸಿ ಗಂಟೆಗಟ್ಟಲೆ ಕಾದಿದ್ದಾನೆ. ಅಭಿಮಾನಿ ಪ್ರೀತಿಗೆ ರಚಿತಾ ರಾಮ್ ಅವರು ಕಾರಿನ ಬಾನೆಟ್‌ ಮೇಲೆ ಹಾಗೂ ಕಾರಿನ ಡ್ಯಾಷ್‌ಬೋರ್ಡ್‌ ಮೇಲೆ ತಮ್ಮ ಆಟೋಗ್ರಾಫ್ ಹಾಕಿದ್ದಾರೆ. ವಾರ ವಾರವೂ ಅವರ ರಾಜರಾಜೇಶ್ವರಿ ಮನೆ ಮುಂದೆ ಬರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗೆ ಅಭಿಮಾನಿಗಳು ತಮ್ಮ ಹೊಸ ಕಾರು, ಬೈಕ್ ಅಥವಾ ಆಟೋ ಮೇಲೆ ರಚ್ಚು ಫೋಟೋ ಹಾಕಿಸಿ ತಪ್ಪದೆ ಆಟೋಗ್ರಾಫ್ ಪಡೆಯುತ್ತಾರೆ.

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ ರಚಿತಾ ರಾಮ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಹಾಗೂ ನೈಜ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸದ್ಯ ಕೈ ತುಂಬಾ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್‌ನಲ್ಲೂ ಜಡ್ಜ್‌ ಆಗಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ಗಳ ಮನೆ ಮುಂದೆ ಹೀಗೆ ಜನರು ಸಾಲು ಸಾಲಾಗಿ ನಿಲ್ಲುತ್ತಾರೆ. ಇದೇ ಮೊದಲು ನಾಯಕಿ ಮನೆ ಮುಂದೆ ಜನರು ಬರುತ್ತಿರುವುದು. ಹೀಗಾಗಿ ರಚಿತಾ ರಾಮ್‌ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ.

Related post

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ…
ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…

Leave a Reply

Your email address will not be published. Required fields are marked *