ವಿಮಾನದಲ್ಲಿ ಪಯಣಿಸುವ ಎಲ್ಲಾ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ..! – ಇದ್ಯಾಕೆ ಇಂಥಾ ರೂಲ್ಸ್ ಗೊತ್ತಾ?

ವಿಮಾನದಲ್ಲಿ ಪಯಣಿಸುವ ಎಲ್ಲಾ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ..! – ಇದ್ಯಾಕೆ ಇಂಥಾ ರೂಲ್ಸ್ ಗೊತ್ತಾ?

ನ್ಯೂಸ್ ಆ್ಯರೋ‌ : ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ವಿಮಾನ ಯಾನ ಕಂಪೆನಿಗಳು ಶ್ರಮಿಸುತ್ತವೆ. ಟಿಕೆಟ್ ದರ ತುಸು ದುಬಾರಿಯಾದರೂ ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ಯಾರಚೂಟ್ ಯಾಕಿಲ್ಲ?

ವಿಮಾನ ಯಾನ ಸಂದರ್ಭದಲ್ಲಿ ಆಕಾಶ ಮಾರ್ಗದಲ್ಲಿ ಏನಾದರೂ ಅಪಾಯ ಸಂಭವಿಸಿದರೆ ಪಾರಾಗಲು ಇರುವ ಏಕೈಕ ಮಾರ್ಗ ಪ್ಯಾರಚೂಟ್ ಎಂಬುದು ಬಹುತೇಕರ ನಂಬಿಕೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇದನ್ನು ಬೆನ್ನಿಗೆ ಕಟ್ಟಿಕೊಂಡು ಜಿಗಿದು ಪಾರಾಗಬಹುದು. ಆದರೆ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ. ಯಾಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಪ್ಯಾರಚೂಟ್ ಅನ್ನು ಸುಲಭವಾಗಿ ಬಳಸಲು ಆಗುವುದಿಲ್ಲ. ಅದರ ಬಳಕೆಗೆ ತರಬೇತಿ ಅಗತ್ಯ. ಎಲ್ಲಾ ಪ್ರಯಾಣಿಕರಿಗೆ ಈ ಕೌಶಲ್ಯ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ಸ್ಕೈ ಡೈವಿಂಗ್ ಮಾಡುವವರಿಗೆ 4ರಿಂದ 5 ಗಂಟೆಗಳ ತರಬೇತಿ ಅಗತ್ಯವಿದೆ. ಇದು 15,000ರಿಂದ 16,000 ಅಡಿ ಎತ್ತರದಿಂದ ಜಿಗಿಯುವ ಮಾತಾಯ್ತು. ಇನ್ನು ವಾಣಿಜ್ಯ ವಿಮಾನಗಳು 35,000 ಅಡಿಗಿಂತ ಎತ್ತರದಲ್ಲಿ ಹಾರಾಡುತ್ತವೆ.

ಸುಮಾರು 18,000 ಅಡಿ ಎತ್ತರದಲ್ಲಿ ಪ್ಯಾರಚೂಟ್ ಬಳಕೆ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ವಾಣಿಜ್ಯ ವಿಮಾನಗಳು ವೇಗದಲ್ಲಿ ಸಾಗುವುದರಿಂದ ಪ್ಯಾರಚೂಟ್ ಮೂಲಕ ಜಿಗಿಯಲು ಸಾಧ್ಯವಿಲ್ಲ. ಬಹುತೇಕ ಎಲ್ಲಾ ವಿಮಾನಗಳು ಪ್ರತಿ ಗಂಟೆಗೆ 500 ಮೈಲಿ ವೇಗದಲ್ಲಿ ಸಂಚರಿಸುತ್ತವೆ.

ಮಾತ್ರವಲ್ಲ ಪ್ಯಾರಚೂಟ್ ಕಿಟ್ ಗಳು ದುಬಾರಿ ಮತ್ತು ಭಾರದಿಂದ ಕೂಡಿವೆ. ಒಂದು ವೇಳೆ ಪ್ರತಿ ಪ್ರಯಾಣಿಕನಿಗೂ ಪ್ಯಾರಚೂಟ್ ಕಿಟ್ ಕೊಟ್ಟರೆ ವಿಮಾನದ ತೂಕ 3 ಸಾವಿರ ಕೆ.ಜಿ.ಗೆ ಏರುತ್ತದೆ. ಇದಕ್ಕಾಗಿ ದೊಡ್ಡ ವಿಮಾನ ಬಳಸಬೇಕಾಗಬಹುದು ಮತ್ತು ಟಿಕೆಟ್ ದರ ಇನ್ನಷ್ಟು ದುಬಾರಿಯಾಗಬಹುದು..!

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *