ಸೋನು ಗೌಡ ದತ್ತು ಪಡೆದಿದ್ದ ಬಾಲಕಿಯ ಮನೆಯ ಸ್ಥಳ ಮಹಜರು – ಸೋನು ಗೌಡಳನ್ನು ಮರಕ್ಕೆ ಕಟ್ಟಿ ಹಾಕಲು ಮುಂದಾದ ಆಕ್ರೋಶಿತ ಗ್ರಾಮಸ್ಥರು…!!

ಸೋನು ಗೌಡ ದತ್ತು ಪಡೆದಿದ್ದ ಬಾಲಕಿಯ ಮನೆಯ ಸ್ಥಳ ಮಹಜರು – ಸೋನು ಗೌಡಳನ್ನು ಮರಕ್ಕೆ ಕಟ್ಟಿ ಹಾಕಲು ಮುಂದಾದ ಆಕ್ರೋಶಿತ ಗ್ರಾಮಸ್ಥರು…!!

ನ್ಯೂಸ್ ಆ್ಯರೋ : ಮಗು ದತ್ತು ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ರೀಲ್ಸ್‌ ಸ್ಟಾರ್‌, ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಸೋನು ಗೌಡ ಅವರನ್ನು ಸ್ಥಳ ಮಹಜರು ಮಾಡಲು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮದಕ್ಕೆ ಕರೆದೊಯ್ಯಲಾಗಿದ್ದು, ಈ ವೇಳೆ ಸೋನು ಗೌಡಳನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಥಳಿಸುವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹೆಣ್ಣು ಮಗುವನ್ನು ದತ್ತು ಪಡೆದ ವಿಚಾರವಾಗಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಮಹಜರು ಮಾಡಲಾಗುತ್ತಿದೆ. ಬಾಲಕಿ ಚಿಕ್ಕಪ್ಪ ಅಮರೇಗೌಡ ಅವರ ಮನೆಯಿಂದ ಮಗು ಕರೆದೊಯ್ದಿದ್ದ ಈ ಹಿನ್ನೆಲೆಯಲ್ಲಿ ಆ ಮನೆಯಲ್ಲಿ ಸ್ಥಳ ಮಹಜರು‌ ಮಾಡಲಾಗುತ್ತಿದೆ.

ಆರೋಪಿ ಸೋನುಗೌಡ ಇದೇ ಮನೆಯಲ್ಲಿ ರೀಲ್ಸ್ ಕೂಡ ಮಾಡಿದ್ದಳು. ದತ್ತು ಪ್ರಕರಣ ವಿಚಾರ ತಿಳಿಯುತ್ತಲೇ ಕೋಪಗೊಂಡ ಗ್ರಾಮಸ್ಥರು ಸೋನುಗೌಡಳನ್ನ ಹಿಡಿದು ಕಟ್ಟಿ ಹಾಕಲು ಮುಂದಾದರು. ಜನ ರೊಚ್ಚಿಗೇಳುತ್ತಿದ್ದಂತೆಯೇ ಬ್ಯಾಡರಹಳ್ಳಿ ಪೊಲೀಸರು ಅಲ್ಲಿಂದ ಕರೆದೊಯ್ದರು.

ಅಪ್ರಾಪ್ತ ಬಾಲಕಿಯ ಹೆತ್ತವರಿಗೆ ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಾಲಕಿ ತಂದೆ-ತಾಯಿ ತೆರಳಿದ್ದರು. ರಾತ್ರೋ ರಾತ್ರಿ ಬಾಲಕಿಯನ್ನು ಆರೋಪಿತೆ ಸೋನುಗೌಡ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *