12 ವರ್ಷಗಳಿಂದ ಟಿಕೆಟ್ ಖರೀದಿಸಿದ ವ್ಯಕ್ತಿ ಮನೆಗೆ ಕೊನೆಗೂ ಬಂದ್ಳು ಅದೃಷ್ಟಲಕ್ಷ್ಮೀ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ

12 ವರ್ಷಗಳಿಂದ ಟಿಕೆಟ್ ಖರೀದಿಸಿದ ವ್ಯಕ್ತಿ ಮನೆಗೆ ಕೊನೆಗೂ ಬಂದ್ಳು ಅದೃಷ್ಟಲಕ್ಷ್ಮೀ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ

ನ್ಯೂಸ್ ಆ್ಯರೋ: ಸತತ 12ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ವ್ಯಕ್ತಿಗೆ 5ಕೋಟಿ ಲಾಟರಿ ಸಿಗುವ ಮೂಲಕ ಕೊನೆಗೂ ಅದೃಷ್ಟ ಲಕ್ಷ್ಮೀ ಮನೆಬಾಗಿಲಿಗೆ ಬಂದಿದ್ದಾಳೆ.

ಪಂಜಾಬ್ ಡಿಯರ್ ಲೋಹ್ರಿ ಬಂಪರ್ ಲಾಟರಿಯಲ್ಲಿ ಐದು ಕೋಟಿ ಬಹುಮಾನವನ್ನು ಗೆದ್ದಾವರನ್ನು ಮುಬಾರಕ್‌ಪುರ ತ್ರಿವೇದಿ ಶಿಬಿರದ ದ್ವಾರಕಾದಾಸ್ ಎಂದು ಗುರುತಿಸಲಾಗಿದೆ.

ಇವರಿಗೆ ಕಳೆದ 12ವರ್ಷಗಳಿಂದ ಲಾಟರಿಯಿಂದ ಸಣ್ಣ ಪುಟ್ಟ ಬಹುಮಾನ ಮಾತ್ರ ಸಿಗುತ್ತಿತ್ತು. ಭರವಸೆಯನ್ನು ಕಳೆದುಕೊಳ್ಳದ ಇವರಿಗೆ ಕೊನೆಗೂ ಜಾಕ್‌ಪಾಟ್‌ ಹೊಡೆದಿದೆ.

ಇದೀಗ ದ್ವಾರಕಾದಾಸ್ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ನೆರೆಹೊರೆಯರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ದ್ವಾರಕಾ ದಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಕಿರಿಯ ಮಗ ಮುಖೇಶ್ ಖಾಸಗಿ ಉದ್ಯೋಗ ಮಾಡುತ್ತಿದ್ದಾನೆ.

ಈ ಸಂಬಂಧ ಕಿರಿ ಮಗ ಮುಖೇಶ್ ಪ್ರತಿಕ್ರಿಯಿಸಿ, ಈ ಹಿಂದೆ ನಾವು ಸಣ್ಣ ಬಹುಮಾನಗಳನ್ನು ಗೆಲ್ಲುತ್ತಿದ್ದೆವು. ಈ ಹಿಂದೆಯೂ ಅವರು 1000-2000 ವರೆಗೆ ಬಹುಮಾನ ಪಡೆಯುತ್ತಿದ್ದರು. ಈ ಬಾರಿ ಐದು ಕೋಟಿ ಹಣವನ್ನು ಗೆದಿದ್ದು, ತುಂಬಾ ಸಂತೋಷವಾಗುತ್ತಿದೆ. ಈ ಲಾಟರಿ ಟಿಕೆಟ್ ಅನ್ನು ಜಿರಾಕ್‌ಪುರದಲ್ಲಿರುವ ಲಕ್ಕಿ ಲಾಟರಿ ಸ್ಟಾಲ್‌ನಿಂದ ಖರೀದಿಸಲಾಗಿದೆ ಎಂದರು.

ಈ ವೇಳೆ ದ್ವಾರಕಾ ದಾಸ್ ತಮ್ಮ ಮೊಮ್ಮಗ ನಿಖಿಲ್ ಅವರನ್ನು ಟಿಕೆಟ್ ಖರೀದಿಸಲು ಕರೆದುಕೊಂಡು ಹೋಗಿದ್ದರು. ಈ ಹಣವನ್ನು ಹೇಗೆ ಬಳಸುತ್ತೀರಿ ಎಂದು ಕೇಳಿದಾಗ, ಸ್ವಲ್ಪ ಹಣವನ್ನು ಡೇರಾದ ನವೀಕರಣಕ್ಕೆ ಬಳಸುವುದಾಗಿ ಹೇಳಿದರು. ಉಳಿದ ಹಣವನ್ನು ಕುಟುಂಬದ ಜತೆ ಚರ್ಚಿಸಿ ನಿರ್ಧಾರಿಸುತ್ತೇನೆ ಎಂದರು.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *