12 ವರ್ಷಗಳಿಂದ ಟಿಕೆಟ್ ಖರೀದಿಸಿದ ವ್ಯಕ್ತಿ ಮನೆಗೆ ಕೊನೆಗೂ ಬಂದ್ಳು ಅದೃಷ್ಟಲಕ್ಷ್ಮೀ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ

12 ವರ್ಷಗಳಿಂದ ಟಿಕೆಟ್ ಖರೀದಿಸಿದ ವ್ಯಕ್ತಿ ಮನೆಗೆ ಕೊನೆಗೂ ಬಂದ್ಳು ಅದೃಷ್ಟಲಕ್ಷ್ಮೀ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ

ನ್ಯೂಸ್ ಆ್ಯರೋ: ಸತತ 12ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ವ್ಯಕ್ತಿಗೆ 5ಕೋಟಿ ಲಾಟರಿ ಸಿಗುವ ಮೂಲಕ ಕೊನೆಗೂ ಅದೃಷ್ಟ ಲಕ್ಷ್ಮೀ ಮನೆಬಾಗಿಲಿಗೆ ಬಂದಿದ್ದಾಳೆ.

ಪಂಜಾಬ್ ಡಿಯರ್ ಲೋಹ್ರಿ ಬಂಪರ್ ಲಾಟರಿಯಲ್ಲಿ ಐದು ಕೋಟಿ ಬಹುಮಾನವನ್ನು ಗೆದ್ದಾವರನ್ನು ಮುಬಾರಕ್‌ಪುರ ತ್ರಿವೇದಿ ಶಿಬಿರದ ದ್ವಾರಕಾದಾಸ್ ಎಂದು ಗುರುತಿಸಲಾಗಿದೆ.

ಇವರಿಗೆ ಕಳೆದ 12ವರ್ಷಗಳಿಂದ ಲಾಟರಿಯಿಂದ ಸಣ್ಣ ಪುಟ್ಟ ಬಹುಮಾನ ಮಾತ್ರ ಸಿಗುತ್ತಿತ್ತು. ಭರವಸೆಯನ್ನು ಕಳೆದುಕೊಳ್ಳದ ಇವರಿಗೆ ಕೊನೆಗೂ ಜಾಕ್‌ಪಾಟ್‌ ಹೊಡೆದಿದೆ.

ಇದೀಗ ದ್ವಾರಕಾದಾಸ್ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ನೆರೆಹೊರೆಯರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ದ್ವಾರಕಾ ದಾಸ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಕಿರಿಯ ಮಗ ಮುಖೇಶ್ ಖಾಸಗಿ ಉದ್ಯೋಗ ಮಾಡುತ್ತಿದ್ದಾನೆ.

ಈ ಸಂಬಂಧ ಕಿರಿ ಮಗ ಮುಖೇಶ್ ಪ್ರತಿಕ್ರಿಯಿಸಿ, ಈ ಹಿಂದೆ ನಾವು ಸಣ್ಣ ಬಹುಮಾನಗಳನ್ನು ಗೆಲ್ಲುತ್ತಿದ್ದೆವು. ಈ ಹಿಂದೆಯೂ ಅವರು 1000-2000 ವರೆಗೆ ಬಹುಮಾನ ಪಡೆಯುತ್ತಿದ್ದರು. ಈ ಬಾರಿ ಐದು ಕೋಟಿ ಹಣವನ್ನು ಗೆದಿದ್ದು, ತುಂಬಾ ಸಂತೋಷವಾಗುತ್ತಿದೆ. ಈ ಲಾಟರಿ ಟಿಕೆಟ್ ಅನ್ನು ಜಿರಾಕ್‌ಪುರದಲ್ಲಿರುವ ಲಕ್ಕಿ ಲಾಟರಿ ಸ್ಟಾಲ್‌ನಿಂದ ಖರೀದಿಸಲಾಗಿದೆ ಎಂದರು.

ಈ ವೇಳೆ ದ್ವಾರಕಾ ದಾಸ್ ತಮ್ಮ ಮೊಮ್ಮಗ ನಿಖಿಲ್ ಅವರನ್ನು ಟಿಕೆಟ್ ಖರೀದಿಸಲು ಕರೆದುಕೊಂಡು ಹೋಗಿದ್ದರು. ಈ ಹಣವನ್ನು ಹೇಗೆ ಬಳಸುತ್ತೀರಿ ಎಂದು ಕೇಳಿದಾಗ, ಸ್ವಲ್ಪ ಹಣವನ್ನು ಡೇರಾದ ನವೀಕರಣಕ್ಕೆ ಬಳಸುವುದಾಗಿ ಹೇಳಿದರು. ಉಳಿದ ಹಣವನ್ನು ಕುಟುಂಬದ ಜತೆ ಚರ್ಚಿಸಿ ನಿರ್ಧಾರಿಸುತ್ತೇನೆ ಎಂದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *