ನದಿ ನೀರಿನಲ್ಲೂ ಛಲ ಬಿಡದ ಜಿಂಕೆ – ದೈತ್ಯ ಮೊಸಳೆಯ ಬಾಯಿಯಿಂದ ಜಿಂಕೆ ತಪ್ಪಿಸಿಕೊಂಡ ರಣರೋಚಕ ವಿಡಿಯೋ ನೋಡಿ..!

ನದಿ ನೀರಿನಲ್ಲೂ ಛಲ ಬಿಡದ ಜಿಂಕೆ – ದೈತ್ಯ ಮೊಸಳೆಯ ಬಾಯಿಯಿಂದ ಜಿಂಕೆ ತಪ್ಪಿಸಿಕೊಂಡ ರಣರೋಚಕ ವಿಡಿಯೋ ನೋಡಿ..!

ನ್ಯೂಸ್ ಆ್ಯರೋ : ಗರಗಸದಂತೆ ಹಲ್ಲಿರುವ ಮೊಸಳೆಯನ್ನು ದೂರದಿಂದ ನೋಡಿದರೆ ಒಂದು ಕ್ಷಣ ಜೀವ ಬಾಯಿಗೆ ಬರುತ್ತದೆ. ಅಂಹದ್ದರಲ್ಲಿ ಅದರ ಬಾಯಿಗೆ ಸಿಕ್ಕಿದರೆ ಬದುಕುವುದುಂಟೇ? ಸಾಧ್ಯವೇ ಇಲ್ಲ.. ಮೊಸಳೆಯ ಹಿಡಿತದಿಂದ, ಅದೂ ಕೂಡ ನೀರಿನಲ್ಲಿ ಮೊಸಳೆಯಿಂದ ತಪ್ಪಿಸಿಕೊಳ್ಳುವುದಂತು ಸಾಧ್ಯವೇ ಇಲ್ಲ. ಆದರೆ ಈ ಮಾತೇ ಸುಳ್ಳು ಎಂಬಂತೆ ಇಲ್ಲೊಂದು ಜಿಂಕೆ, ದೈತ್ಯ ಮೊಸಳೆಯ ಸಾವಿನ‌ ಬಾಯಿಯಿಂದ ಛಲದಿಂದ ಹೋರಾಡಿ ತಪ್ಪಿಸಿಕೊಂಡಿದೆ.

ನೀರಿನ ನಡುವಲ್ಲೇ ಮೊಸಳೆಯೊಂದಿಗೆ ಯುದ್ಧಕ್ಕಿಳಿದ ಜಿಂಕೆ ಛಲದಿಂದ ಹೋರಾಡಿ ಕೊನೆಗೂ ತನ್ನ ಜೀವ ಉಳಿಸಿಕೊಂಡು ದಡ ಸೇರಿದೆ. ಈ ರಣರೋಚಕ ಘಟನೆಯ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೊಳೆ ದಾಟುವೆ ವೇಳೆ ಮೊಸಳೆ ದಾಳಿ!

ಸದ್ಯ, ವೈರಲ್ ಆಗಿರುವ ವಿಡಿಯೋದಲ್ಲಿ ಜಿಂಕೆಯೊಂದು ಹೊಳೆ ದಾಟುವುದಕ್ಕಾಗಿ ನೀರಿಗೆ ಇಳಿದಿದೆ. ಈ ವೇಳೆ ನೀರಿನ ವೇಗ ತುಸು ಜೋರಾಗಿದ್ದ ಕಾರಣ ಜಿಂಕೆ ಕೊಂಚ ಪರದಾಡುತ್ತಿತ್ತು. ಇದೇ ವೇಳೆ ದೈತ್ಯ ಮೊಸಳೆಯೊಂದು ಜಿಂಕೆ ಮೇಲೆ ಅಟ್ಯಾಕ್ ಮಾಡಿದೆ.

ಇದನ್ನು ಕಂಡು ಜಿಂಕೆ ನೀರಿನಲ್ಲಿ ವೇಗವಾಗಿ ತೆರಳಲು ಪ್ರಯತ್ನಿಸುತ್ತದೆ. ಆದರೆ ಮೊಸಳೆ ನೀರಲ್ಲೇ ಬದುಕುವ ಕಾರಣ ಇನ್ನಷ್ಟು ವೇಗವಾಗಿ ಬಂದು ಇನ್ನೇನು ಜಿಂಕೆಯನ್ನು ಕೊಂದೆ ಬಿಡುತ್ತದೆ ಎನ್ನುವಾಗ ಜಿಂಕೆ ತನ್ನೆಲ್ಲ ಶಕ್ತಿಯನ್ನು ಬಳಸಿ ಮೊಸಳೆಯ ಮೇಲೆ ಯುದ್ಧ ಸಾರಿದೆ.

ಆದರೂ ಕೂಡ ಹರಿಯುವ ನದಿಯಲ್ಲಿ ಜಿಂಕೆಗೆ ಆ ಬದುಕಿನ ಯುದ್ಧ ಅಷ್ಟು ಸುಲಭವಾಗಿರಲಿಲ್ಲ. ದೈತ್ಯ ಮೊಸಳೆ ಜಿಂಕೆಯನ್ನು ತಿಂದೇ ಬಿಡಬೇಕು ಎಂಬ ಆಸೆಯಿಂದ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇತ್ತು. ಆದರೆ ಜಿಂಕೆ ಮಾತ್ರ ತನ್ನ ಛಲ ಬಿಡಲೇ ಇಲ್ಲ.

ಕೈ ಕಾಲು ಬಡಿಯುತ್ತ, ಒದ್ದಾಡುತ್ತ ಜಿಂಕೆ ನದಿ ದಾಟಲು ಹರಸಾಹಸ ಪಟ್ಟಿತು. ಕೊನೆಗೂ ಜಿಂಕೆ ಸಾವಿನ ಬಾಯಿಂದ ತಪ್ಪಿಸಿಕೊಂಡು ದಡ ಸೇರಿತು. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದ್ದು, ಜಿಂಕೆಯ ಸಾಹಸಕ್ಕೆ ನೆಟ್ಟಿಗರು ಶಹಬ್ಬಾಸ್ ಎನ್ನುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *