ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಗೆ ಕಾಡಿದ ದುರ್ವಿಧಿ – ಜೀವಶಾಸ್ತ್ರ ಪರೀಕ್ಷೆ ದಿನದಂದೇ ಜೀವ ಕಳೆದುಕೊಂಡ ಪಿಯು ವಿದ್ಯಾರ್ಥಿನಿ
- ಟಾಪ್ ನ್ಯೂಸ್
- December 5, 2023
- No Comment
- 116
ನ್ಯೂಸ್ ಆ್ಯರೋ : ಸಾವಿನ ಕೊಂಡಿ ಅದ್ಯಾವಾಗ ನಮ್ಮನ್ನು ಸಮೀಪಿಸುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಕಲ್ಲು ಎಡವಿ ಬಿದ್ದು ಸಾವನ್ನಪ್ಪಿರೋ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ.
ಹಾಗೆಯೇ, ತನ್ನ ಮುಂದಿನ ಜೀವನವನ್ನು ಕಟ್ಟಿಕೊಳ್ಳಲು ಸಾವಿರಾರು ಆಸೆಗಳನ್ನಿಟ್ಟುಕೊಂಡು ಪರೀಕ್ಷೆ ಬರೆಯಲೆಂದು ಬಂದ ವಿದ್ಯಾರ್ಥಿನಿ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ನಡೆದಿದೆ.
ಮೂಲತಃ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ವಿದ್ಯಾರ್ಥಿನಿ ಮೇಘನಾ (18) ಎಂಬುವವರು ಬಯಾಲಜಿ ಪರೀಕ್ಷೆ ಬರೆಯುವುದಕ್ಕಾಗಿ ಬಂದಿದ್ದು, ಈ ವೇಳೆ ಅಚಾನಕ್ಕಾಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.