ಈ ಸ್ವೀಟ್ ಒಂದು ಕೆಜಿ ಬೆಲೆ ಬರೋಬ್ಬರಿ 21ಸಾವಿರ ರೂಪಾಯಿ..!! – “ಸ್ವರ್ಣ ಮುದ್ರಾ ಸ್ವೀಟ್” ಯಾಕಿಷ್ಟು ದುಬಾರಿ ಗೊತ್ತಾ?

ಈ ಸ್ವೀಟ್ ಒಂದು ಕೆಜಿ ಬೆಲೆ ಬರೋಬ್ಬರಿ 21ಸಾವಿರ ರೂಪಾಯಿ..!! – “ಸ್ವರ್ಣ ಮುದ್ರಾ ಸ್ವೀಟ್” ಯಾಕಿಷ್ಟು ದುಬಾರಿ ಗೊತ್ತಾ?

ನ್ಯೂಸ್ ಆ್ಯರೋ : ದೀಪಾವಳಿ ಹಬ್ಬ ಇನ್ನೇನೋ ಸಮೀಪಿಸುತ್ತಿದೆ. ಮನೆ ಮನದಲ್ಲಿ ಸಂಭ್ರಮಿಸಲು ಜೋರಾದ ಸಿದ್ಧತೆಗಳೂ ನಡೆಯುತ್ತಿದೆ. ಸಿಹಿ ಸಂತೋಷದ ಸಂಕೇತ. ಯಾವುದೇ ಹಬ್ಬ ಹರಿದಿನವಿರಲಿ ಏನಾದರೂ ಸಿಹಿ ಸವಿಯದಿದ್ದರೆ ಪರಿಪೂರ್ಣತೆ ಕಾಣಲು ಸಾಧ್ಯವೇ ಇಲ್ಲ. ಸಿಹಿತಿಂಡಿಯ ಅಂಗಡಿಗಳಂತೂ ಹಬ್ಬಕ್ಕಾಗಿ ವಿಶೇಷ ಸ್ವೀಟ್ ಬಾಕ್ಸ್ ಗಳನ್ನು ತಯಾರಿ ಮಾಡುವ ತರಾತುರಿಯಲ್ಲಿರುತ್ತದೆ.

ದೀಪಾವಳಿ ಹಬ್ಬಕ್ಕೆ ನಮ್ಮ ಪ್ರೀತಿ ಪಾತ್ರರಿಗೆ ಸಿಹಿತಿಂಡಿ ಕೊಟ್ಟು ಶುಭಾಶಯ ಕೋರುತ್ತೇವೆ. ಮಾಲ್ ಗಳಲ್ಲಿ, ಅಂಗಡಿಗಳಲ್ಲಂತೂ ಪೇಡಾ, ಸೋನ್ ಪಾಪಡಿ, ಜಹಾಂಗೀರ್, ಬರ್ಫಿಗಳದ್ದೇ ಹವಾ…ಇಲ್ಲೊಂದು ಅಂಗಡಿಯಲ್ಲಿ ಬಂದಿರುವ ವಿಶೇಷ ಸ್ವೀಟ್ ಗೆ ಭಾರಿ ಡಿಮ್ಯಾಂಡ್.‌ ಯಾಕೆ ಗೊತ್ತಾ ಈ ಸ್ವೀಟ್ ನ ಒಂದು ಕೆಜಿಯ ಬೆಲೆ ಬರೋಬ್ಬರಿ 21 ಸಾವಿರ ರೂ…!

ಏನಿದು ‘ ಸ್ವರ್ಣ ಮುದ್ರಾ’ ಸ್ವೀಟ್ಸ್…!

ಅಹಮದಾಬಾದ್ ನಲ್ಲಿ ಜನರು ಮೂಗಿಗೆ ಬೆರಳಿಟ್ಟು ಅಚ್ಚರಿ ಪಡುವ ಸಂಗತಿಯೆಂದರೆ ಈ ಸ್ವೀಟ್ ಗೆ 21ಸಾವಿರ ರೂ. ‘ ಸ್ವರ್ಣ ಮುದ್ರಾ’ ಹೆಸರಿನ ಈ ಸಿಹಿತಿಂಡಿಗೆ ಇದೀಗ ಡಿಮ್ಯಾಂಡಪ್ಪೋ ಡಿಮ್ಯಾಂಡ್.

ಈ ಸ್ವೀಟ್ ಗೆ ಯಾಕಿಷ್ಟು ದುಬಾರಿ ಬೆಲೆ…?

ಈ ಸ್ವೀಟ್ ನ ಮೇಲೆ 24 ಕ್ಯಾರೆಟ್ ಚಿನ್ನದ ಪದರವನ್ನು ಬಳಸಿ ಲೆಯರ್ ಮಾಡಲಾಗಿದೆ. ಅದರ ಮುಖ್ಯ ಆಕರ್ಷಣೆ ಇದೇ. ಈ ಸಿಹಿತಿನಿಸಿನ ಒಂದು ತುಂಡಿನ ಬೆಲೆ 1,400 ರೂ. ಆಗಿದೆ.‌ ಒಂದು ಕಿಲೋ ಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ.

ಇದು ಬಾದಾಮಿ, ಪಿಸ್ತಾ, ಬ್ಲೂಬೆರ್ರಿ, ಕ್ರ್ಯಾನ್ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್ ನ ಗ್ವಾಲಿಯಾ ಎಸ್ ಬಿ ಆರ್ ಔಟ್ ಲೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಸ್ಥ ಹೇಳುವಂತೆ ಈ ಸ್ವೀಟ್ ಖರೀದಿಸಲು ಗ್ರಾಹಕರು ಕೂಡಾ ಆಸಕ್ತಿಯಿಂದ ಮಾರುಕಟ್ಟೆಗೆ ಆಗಮಿಸುತ್ತಿದ್ದಾರಂತೆ.

ಒಟ್ಟಾರೆಯಾಗಿ ಸಮೀಪಿಸುತ್ತಿರುವ ದೀಪಾವಳಿಗಂತೂ ಎಲ್ಲಾ ರೀತಿಯ ಸ್ವೀಟ್ಸ್ ಗಳು ಮಾರುಕಟ್ಟೆಗೆ ಆಗಮಿಸಿದೆ. ಜನರು ಹಬ್ಬದ ಆಚರಣೆಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.‌ ಸಿಹಿತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *