ರಕ್ಷಾ ಬಂಧನ್ ವಿಶೇಷ: ಇದು ಡಿಜಿಟಲ್ ಮೆಹೆಂದಿ – ಕೈ ಸ್ಕ್ಯಾನ್ ಮಾಡಿ ಹಣ ಪಾವತಿಸಿ..

ರಕ್ಷಾ ಬಂಧನ್ ವಿಶೇಷ: ಇದು ಡಿಜಿಟಲ್ ಮೆಹೆಂದಿ – ಕೈ ಸ್ಕ್ಯಾನ್ ಮಾಡಿ ಹಣ ಪಾವತಿಸಿ..

ನ್ಯೂಸ್ ಆ್ಯರೋ‌ : ದೇಶದ ಎಲ್ಲಾ ಭಾಗಗಳಲ್ಲಿ ರಕ್ಷಾ ಬಂಧನ ಆಚರಣೆ ಕಳೆಗಟ್ಟಿದೆ. ಸಹೋದರಿ ತನ್ನ ಸಹೋದರಿಗೆ ರಾಖಿ ಕಟ್ಟಿ ಇನ್ನು ತನ್ನ ರಕ್ಷಣೆಯ ಜವಾಬ್ದಾರಿ ನಿನ್ನದು ಎಂದು ಸೂಚ್ಯವಾಗಿ ಹೇಳುವ ಹಬ್ಬವಿದು. ಸಾಮಾನ್ಯವಾಗಿ ರಾಖಿ ಕಟ್ಟಿದ ತಂಗಿಗೆ ಅಣ್ಣ ಉಡುಗೊರೆ ಕೊಡುವುದು ವಾಡಿಕೆ. ಇದೀಗ ಅಣ್ಣಂದಿರಿಗೆ ಸುಲಭವಾಗುವಂತೆ ತಂಗಿಯ ಕೈಯಲ್ಲಿನ ಕ್ಯೂಆರ್ ಕೋಡ್ ಇರುವ ಮದರಂಗಿ ಜನಪ್ರಿಯವಾಗುತ್ತಿದೆ.

ಏನಿದು ಕ್ಯೂಆರ್ ಕೋಡ್ ಮದರಂಗಿ?

ಡಿಜಿಟಲ್ ಭಾರತದ ಈ ಹೊಸ ಮಾದರಿ ಮದರಂಗಿ ವೀಡಿಯೋ ವೈರಲ್ ಆಗುತ್ತಿದೆ. ಯುವತಿಯರ ಕೈಗೆ ಕ್ಯೂಆರ್ ಕೋಡ್ ಇರುವ ಮದರಂಗಿ ಬಿಡಿಸಲಾಗುತ್ತದೆ. ರಾಖಿ ಕಟ್ಟಿದ ತಂಗಿಯ ಕೈಯನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಯುಪಿಐ ಪೋರ್ಟಲ್ ನಲ್ಲಿ ಉಡುಗೊರೆಯನ್ನು ಹಣದ ರೂಪದಲ್ಲಿ ವರ್ಗಾಯಿಸಬಹುದು!

ಯಶ್ ಮೆಹೆಂದಿ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಕಂಡು ಬಂದ ಈ ವೀಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಡಿಜಿಟಲ್ ಮೆಹೆಂದಿ ಎಂದು ಕರೆಯಲಾಗಿದೆ.

ಕೇವಲ ಮೋಜಿಗಾಗಿ

ಆದರೆ ಕ್ಯೂಆರ್ ಕೋಡ್ ಅನ್ನು ಹಣ ವರ್ಗಾಯಿಸಲು ಬಳಸುವುದಿಲ್ಲ. ಈ ವೀಡಿಯೋವನ್ನು ಕೇವಲ ಮೋಜಿಗಾಗಿ ಚಿತ್ರೀಕರಿಸಲಾಗಿದೆ ಎಂದು ಕ್ಯಾಪ್ಶನ್ ನಲ್ಲಿ ಸ್ಪಷ್ಟನೆ ನೀಡಲಾಗಿದೆ.

ಈ ವೀಡಿಯೋವನ್ನು 9 ಲಕ್ಷಕ್ಕಿಂತ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ. ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಉತ್ತಮ ಐಡಿಯಾ ಎಂದು ಹಲವರು ಹೇಳಿದ್ದಾರೆ. ಸೃಜನಶೀಲತೆಗೆ ಕೊನೆಯಿಲ್ಲ ಎಂದು ಇನ್ನೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *