ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಚಿರತೆಗೆ ಅರ್ಪಿಸಿತಾ ಜಿಂಕೆ? – ವೈರಲ್ ಫೋಟೋದ ಅಸಲಿಯತ್ತು ಛಾಯಾಗ್ರಾಹಕರೇ ಬಿಚ್ಚಿಟ್ಟಿದ್ದು ಹೀಗೆ…

ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಚಿರತೆಗೆ ಅರ್ಪಿಸಿತಾ ಜಿಂಕೆ? – ವೈರಲ್ ಫೋಟೋದ ಅಸಲಿಯತ್ತು ಛಾಯಾಗ್ರಾಹಕರೇ ಬಿಚ್ಚಿಟ್ಟಿದ್ದು ಹೀಗೆ…

ನ್ಯೂಸ್ ಆ್ಯರೋ : ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಲು ಸಿದ್ಧಳಾಗುತ್ತಾಳೆ. ಇದೇ ಸಂದೇಶವನ್ನು ಹೊತ್ತ ಎರಡು ಚಿರತೆಗಳು ಜಿಂಕೆಯ ಮೇಲೆ ದಾಳಿ ಮಾಡುವ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಿಂಕೆಯು ತನ್ನ ಮರಿಗಳನ್ನು ಉಳಿಸಲು ಪ್ರಯತ್ನಿಸಿದೆ ಎನ್ನುವ ಶೀರ್ಷಿಕೆಯ ಈ ಚಿತ್ರವನ್ನು ಸೆರೆಹಿಡಿದ ಛಾಯಾಗ್ರಾಹಕ ಶೀಘ್ರದಲ್ಲೇ ಖಿನ್ನತೆಗೆ ಒಳಗಾದರು ಎಂದು ಹೇಳಲಾಗಿದೆ.

ಈ ಚಿತ್ರ ಸುಮಾರು ಹತ್ತು ವರ್ಷಗಳಲ್ಲಿ ಹಿಂದಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಎರಡು ಚಿರತೆಗಳು ದಾಳಿ ಮಾಡಿದಾಗ ಜಿಂಕೆ ತನ್ನ ಮರಿಗಳೊಂದಿಗೆ ಆಟವಾಡುತ್ತಿತ್ತು. ಅದಕ್ಕೆ ತಪ್ಪಿಸಿಕೊಳ್ಳಲು ಅವಕಾಶವಿತ್ತು. ಆದರೆ ಜಿಂಕೆಯು ಚಿರತೆಗಳಿಗೆ ಶರಣಾಗಲು ನಿರ್ಧರಿಸಿತ್ತು. ಯಾಕೆಂದರೆ ಅದು ಓಡಿ ಹೋದರೆ ಮರಿಗಳಿಗೆ ತಪ್ಪಿಸಿಕೊಳ್ಳಲು ಹೆಚ್ಚು ಸಮಯವಿರುವುದಿಲ್ಲ.

https://m.facebook.com/story.php?story_fbid=pfbid02j8AniCRS9XLQtrdtFE1L6TKNjrMf5AmzHRv6gshdKmg8p3RWr3jJVZBXHibbuSAPl&id=1210637252&mibextid=K8Wfd2

ಈ ಚಿತ್ರವು ಚಿರತೆಯ ಬಾಯಿಯಲ್ಲಿ ತನ್ನ ಗಂಟಲನ್ನು ಹಿಡಿದಿರುವ ತಾಯಿಯ ಕೊನೆಯ ಕ್ಷಣವಾಗಿದೆ. ಚಿರತೆಯ ದಾಳಿಯ ವೇಳೆ ಅದು ತನ್ನ ಮರಿಗಳು ಸುರಕ್ಷಿತವಾಗಿ ಪಾರಾಗಿವೆ ಎಂದು ಖಚಿತಪಡಿಸಿಕೊಳ್ಳಲು ದೃಢವಾಗಿ ನೋಡುತ್ತಿದೆ. ನಿನಗಾಗಿ ತನ್ನ ಪ್ರಾಣವನ್ನೇ ಕೊಡುವ ಜಗತ್ತಿನ ಏಕೈಕ ವ್ಯಕ್ತಿ ತಾಯಿ ಎಂದು ಹೇಳಿಕೊಂಡು ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದ ಕುರಿತು ತನಿಖೆ ಪ್ರಾರಂಭಿಸಿದ ತಂಡಕ್ಕೆ ಇದು ಛಾಯಾಗ್ರಾಹಕ ಅಲಿಸನ್ ಬುಟ್ಟಿಗೀಗ್ ಸೆರೆಹಿಡಿದ ಚಿತ್ರ ಎಂದು ತಿಳಿಯಿತು. ಜೊತೆಗೆ ಅವರು ಚಿತ್ರದ ಕಥೆ ಮತ್ತು ಅದನ್ನು ತೆಗೆದ ಬಳಿಕ ತಾನು ಖಿನ್ನತೆಗೆ ಜಾರಿರುವ ವಿಚಾರ ಸಂಪೂರ್ಣ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಲ್ಪನಿಕ ಕಥೆ ಅತ್ಯುತ್ತಮವಾಗಿದೆ. ಆದರೆ ನಾವು ಎಂತಹ ನೀಚ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದರೆ ಇದು ಮೂರ್ಖ ಮೋಸಗಾರರಿಂದ ತುಂಬಿದೆ. ಹುಚ್ಚರಂತೆ ನಕಲಿ ಸುದ್ದಿಗಳನ್ನು ಓದುತ್ತೇವೆ, ಹರಡುತ್ತೇವೆ ಎಂದು ಹೇಳಿ ಚಿತ್ರದ ಹಿಂದಿನ ಕಥೆಯನ್ನು ವಿವರಿಸುವ ಬ್ಲಾಗ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

ಈ ಬ್ಲಾಗ್‌ನಲ್ಲಿ ಈ ಚಿತ್ರ 2013 ರಲ್ಲಿ ಕೀನ್ಯಾದ ಮಸಾಯಿ ಮಾರಾದಲ್ಲಿ ಸೆರೆಹಿಡಿಯಲಾಗಿದೆ. ಚಿರತೆಯ ತಾಯಿ ತನ್ನ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸುತ್ತಿದ್ದಾಗ ಜಿಂಕೆಯೊಂದನ್ನು ಕೊಂದು ಹಾಕಿತ್ತು ಎನ್ನುವುದು ನೈಜ್ಯ ಸಂಗತಿ ಎಂದು ಅವರು ತಿಳಿಸಿದ್ದಾರೆ.

Related post

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಮಾನ ಇಲಾಖೆ…

ನ್ಯೂಸ್ ಆರೋ: ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…

Leave a Reply

Your email address will not be published. Required fields are marked *