ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಚಿರತೆಗೆ ಅರ್ಪಿಸಿತಾ ಜಿಂಕೆ? – ವೈರಲ್ ಫೋಟೋದ ಅಸಲಿಯತ್ತು ಛಾಯಾಗ್ರಾಹಕರೇ ಬಿಚ್ಚಿಟ್ಟಿದ್ದು ಹೀಗೆ…

ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಚಿರತೆಗೆ ಅರ್ಪಿಸಿತಾ ಜಿಂಕೆ? – ವೈರಲ್ ಫೋಟೋದ ಅಸಲಿಯತ್ತು ಛಾಯಾಗ್ರಾಹಕರೇ ಬಿಚ್ಚಿಟ್ಟಿದ್ದು ಹೀಗೆ…

ನ್ಯೂಸ್ ಆ್ಯರೋ : ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಲು ಸಿದ್ಧಳಾಗುತ್ತಾಳೆ. ಇದೇ ಸಂದೇಶವನ್ನು ಹೊತ್ತ ಎರಡು ಚಿರತೆಗಳು ಜಿಂಕೆಯ ಮೇಲೆ ದಾಳಿ ಮಾಡುವ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಿಂಕೆಯು ತನ್ನ ಮರಿಗಳನ್ನು ಉಳಿಸಲು ಪ್ರಯತ್ನಿಸಿದೆ ಎನ್ನುವ ಶೀರ್ಷಿಕೆಯ ಈ ಚಿತ್ರವನ್ನು ಸೆರೆಹಿಡಿದ ಛಾಯಾಗ್ರಾಹಕ ಶೀಘ್ರದಲ್ಲೇ ಖಿನ್ನತೆಗೆ ಒಳಗಾದರು ಎಂದು ಹೇಳಲಾಗಿದೆ.

ಈ ಚಿತ್ರ ಸುಮಾರು ಹತ್ತು ವರ್ಷಗಳಲ್ಲಿ ಹಿಂದಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಎರಡು ಚಿರತೆಗಳು ದಾಳಿ ಮಾಡಿದಾಗ ಜಿಂಕೆ ತನ್ನ ಮರಿಗಳೊಂದಿಗೆ ಆಟವಾಡುತ್ತಿತ್ತು. ಅದಕ್ಕೆ ತಪ್ಪಿಸಿಕೊಳ್ಳಲು ಅವಕಾಶವಿತ್ತು. ಆದರೆ ಜಿಂಕೆಯು ಚಿರತೆಗಳಿಗೆ ಶರಣಾಗಲು ನಿರ್ಧರಿಸಿತ್ತು. ಯಾಕೆಂದರೆ ಅದು ಓಡಿ ಹೋದರೆ ಮರಿಗಳಿಗೆ ತಪ್ಪಿಸಿಕೊಳ್ಳಲು ಹೆಚ್ಚು ಸಮಯವಿರುವುದಿಲ್ಲ.

https://m.facebook.com/story.php?story_fbid=pfbid02j8AniCRS9XLQtrdtFE1L6TKNjrMf5AmzHRv6gshdKmg8p3RWr3jJVZBXHibbuSAPl&id=1210637252&mibextid=K8Wfd2

ಈ ಚಿತ್ರವು ಚಿರತೆಯ ಬಾಯಿಯಲ್ಲಿ ತನ್ನ ಗಂಟಲನ್ನು ಹಿಡಿದಿರುವ ತಾಯಿಯ ಕೊನೆಯ ಕ್ಷಣವಾಗಿದೆ. ಚಿರತೆಯ ದಾಳಿಯ ವೇಳೆ ಅದು ತನ್ನ ಮರಿಗಳು ಸುರಕ್ಷಿತವಾಗಿ ಪಾರಾಗಿವೆ ಎಂದು ಖಚಿತಪಡಿಸಿಕೊಳ್ಳಲು ದೃಢವಾಗಿ ನೋಡುತ್ತಿದೆ. ನಿನಗಾಗಿ ತನ್ನ ಪ್ರಾಣವನ್ನೇ ಕೊಡುವ ಜಗತ್ತಿನ ಏಕೈಕ ವ್ಯಕ್ತಿ ತಾಯಿ ಎಂದು ಹೇಳಿಕೊಂಡು ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದ ಕುರಿತು ತನಿಖೆ ಪ್ರಾರಂಭಿಸಿದ ತಂಡಕ್ಕೆ ಇದು ಛಾಯಾಗ್ರಾಹಕ ಅಲಿಸನ್ ಬುಟ್ಟಿಗೀಗ್ ಸೆರೆಹಿಡಿದ ಚಿತ್ರ ಎಂದು ತಿಳಿಯಿತು. ಜೊತೆಗೆ ಅವರು ಚಿತ್ರದ ಕಥೆ ಮತ್ತು ಅದನ್ನು ತೆಗೆದ ಬಳಿಕ ತಾನು ಖಿನ್ನತೆಗೆ ಜಾರಿರುವ ವಿಚಾರ ಸಂಪೂರ್ಣ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಲ್ಪನಿಕ ಕಥೆ ಅತ್ಯುತ್ತಮವಾಗಿದೆ. ಆದರೆ ನಾವು ಎಂತಹ ನೀಚ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದರೆ ಇದು ಮೂರ್ಖ ಮೋಸಗಾರರಿಂದ ತುಂಬಿದೆ. ಹುಚ್ಚರಂತೆ ನಕಲಿ ಸುದ್ದಿಗಳನ್ನು ಓದುತ್ತೇವೆ, ಹರಡುತ್ತೇವೆ ಎಂದು ಹೇಳಿ ಚಿತ್ರದ ಹಿಂದಿನ ಕಥೆಯನ್ನು ವಿವರಿಸುವ ಬ್ಲಾಗ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

ಈ ಬ್ಲಾಗ್‌ನಲ್ಲಿ ಈ ಚಿತ್ರ 2013 ರಲ್ಲಿ ಕೀನ್ಯಾದ ಮಸಾಯಿ ಮಾರಾದಲ್ಲಿ ಸೆರೆಹಿಡಿಯಲಾಗಿದೆ. ಚಿರತೆಯ ತಾಯಿ ತನ್ನ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸುತ್ತಿದ್ದಾಗ ಜಿಂಕೆಯೊಂದನ್ನು ಕೊಂದು ಹಾಕಿತ್ತು ಎನ್ನುವುದು ನೈಜ್ಯ ಸಂಗತಿ ಎಂದು ಅವರು ತಿಳಿಸಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *