ಕೋಳಿ ಕೊಚ್ಚುವ ಕತ್ತಿಯಿಂದಲೇ ಮಗಳನ್ನು ಕೊಚ್ಚಿ ಕೊಂದ ಪಾಪಿ ತಂದೆ – ಬೇರೆ ಜಾತಿ ಹುಡುಗನನ್ನು ಪ್ರೀತಿಸಿದ್ದೇ ತಪ್ಪಾಯ್ತು..!!
- ಕರ್ನಾಟಕ
- October 12, 2023
- No Comment
- 163
ನ್ಯೂಸ್ ಆ್ಯರೋ : ಬೇರೆ ಜಾತಿ ಹುಡುಗನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕತ್ತು ಕೊಯ್ದು ಕೊಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರಿನಲ್ಲಿ ನಡೆದಿದೆ.
ಕವನ (20) ಮೃತ ಯುವತಿ. ಮಗಳನ್ನು ಕೊಂದ ಬಳಿಕ ಆಕೆಯ ತಂದೆ ಮಂಜುನಾಥ್ (47) ಪೊಲೀಸರಿಗೆ ಶರಣಾಗಿದ್ದಾರೆ.
ಬೇರೆ ಜಾತಿಯ ಹುಡುಗನನ್ನು ಮಗಳು ಪ್ರೀತಿ ಮಾಡುತ್ತಿದ್ದಾಳೆ. ಇದರಿಂದ ಕುಟುಂಬದ ಮರ್ಯಾದೆ ಬೀದಿಗೆ ಬಂದಿದೆ ಎಂದು ಆಕ್ರೋಶಗೊಂಡು ಮಂಜುನಾಥ್ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ವಿಶ್ವನಾಥಪುರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಕವನ ತನ್ನದೇ ಊರಿನ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ಆಕೆಯ ತಂದೆಗೆ ತಿಳಿದಿತ್ತು. ಸಾಕಷ್ಟು ಬಾರಿ ಅವರು ಮಗಳಿಗೆ ಬುದ್ದಿ ಹೇಳಿದ್ದರು. ಈ ವಿಚಾರದಲ್ಲಿ ಸಾಕಷ್ಟು ಬಾರಿ ತಂದೆ ಮಗಳ ಮಧ್ಯೆ ಜಗಳವಾಗಿತ್ತು.
ತಂದೆಯ ಮಾತು ಕೇಳದ ಮಗಳು ಬೇರೆ ಜಾತಿಯ ಹುಡುಗನೊಂದಿಗೆ ತಿರುಗಾಡುತ್ತಿದ್ದಳು. ಇದರಿಂದ ಸಿಟ್ಟುಗೊಂಡ ತಂದೆ ಊರಲ್ಲಿ ತನ್ನ ಮರ್ಯಾದೆ ಕಳೆಯುತ್ತಾಳೆ ಎಂದು ಹೆದರಿ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಮಂಜುನಾಥ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು ಮಂಗಳವಾರವಷ್ಟೇ ಬೇರೊಬ್ಬ ಯುವಕನನ್ನು ಮದುವೆಯಾಗುವುದಾಗಿ ಹೇಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಅವಳು ಅಪ್ರಾಪ್ತಯಾಗಿದ್ದರಿಂದ ಪೊಲೀಸರು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ನಡುವೆ ಕಿರಿಯ ಮಗಳು ಕೂಡ ಅನ್ಯ ಜಾತಿಯ ಯುವಕನನ್ನು ಪ್ರೀತಿಸುವ ವಿಚಾರ ಮಂಜುನಾಥ್ಗೆ ತಿಳಿದು ಆಘಾತವಾಗಿತ್ತು.
ಹೀಗಾಗಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ತಂದೆ ಮಂಜುನಾಥ್ ಕೋಳಿ ಕೊಯ್ಯುವ ಚಾಕುವಿನಿಂದ ಮಗಳ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಇದೊಂದು ಧಾರುಣ ಘಟನೆ. ಮಗಳು ಮಲಗಿದ್ದಾಗ ಮಂಜುನಾಥ್ ಮೊದಲು ಆಕೆಯ ತಲೆಗೆ ದೊಣ್ಣೆಯಿಂದ ಹೊಡೆದು ಬಳಿಕ ಚಾಕುವಿನಿಂದ ಕತ್ತು ಸೀಳಿದ್ದಾನೆ ಎಂದು ಹೇಳಿದ್ದಾರೆ.