ಎಟಿಎಂ ನಿಂದ ಹರಿದ ನೋಟು ಸಿಕ್ಕರೆ ಏನು ಮಾಡೋದು? – ಚಿಂತೆ ಮಾಡ್ಬೇಡಿ, ಹೀಗೆ ಮಾಡಿ ಸಾಕು..

ಎಟಿಎಂ ನಿಂದ ಹರಿದ ನೋಟು ಸಿಕ್ಕರೆ ಏನು ಮಾಡೋದು? – ಚಿಂತೆ ಮಾಡ್ಬೇಡಿ, ಹೀಗೆ ಮಾಡಿ ಸಾಕು..

ನ್ಯೂಸ್ ಆ್ಯರೋ : ಕೆಲವೊಮ್ಮೆ ಎಟಿಎಂ ಯಂತ್ರವೇ ಹರಿದ ನೋಟ್ ಕೊಟ್ಟರೆ ಏನು ಮಾಡುವುದು ಎನ್ನುವ ಗೊಂದಲ ಉಂಟಾಗುತ್ತದೆ. ಯಾಕೆಂದರೆ ಇದನ್ನು ಯಾರೂ ತೆಗೆದುಕೊಳ್ಳುವುದಿಲ್ಲ.

ಸಾಕಷ್ಟು ಮಂದಿಗೆ ಇದರ ಅನುಭವವಾಗಿರಬಹುದು. ಹರಿದ ನೋಟು ಗಳನ್ನು ಯಾರೂ ಪಡೆಯುವುದಿಲ್ಲ. ಎಷ್ಟೋ ಬಾರಿ ಇದರಿಂದ ಸಂಕಟ ಪಟ್ಟವರೂ ಇದ್ದಾರೆ. ಹೀಗಾಗಿ ಹರಿದ ನೋಟು ಏನು ಮಾಡಬೇಕು ಎಂದು ತಿಳಿಯದೆ ಕೆಲವರು ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.

ಹರಿದ ನೋಟು ಸಿಕ್ಕರೆ ಏನು ಮಾಡಬಹುದು ಎನ್ನುವುದಕ್ಕೆ ಆರ್ ಬಿಐ ಏನು ಹೇಳುತ್ತದೆ ಗೊತ್ತೇ?

ಎಟಿಎಂ ನಲ್ಲಿ ಹರಿದ ನೋಟು ಸಿಕ್ಕರೆ ಕೂಡಲೇ ಹತ್ತಿರದ ಬ್ಯಾಂಕ್ ಗೆ ಹೋಗಿ ಅದನ್ನು ವಿನಿಮಯ ಮಾಡಿಕೊಳ್ಳಬಹುದು.

ಈ ಬಗ್ಗೆ 2016ರಲ್ಲೇ ಆರ್ ಬಿಐ ಬ್ಯಾಂಕ್ ಗಳಿಗೆ ನೋಟು ವಿನಿಮಯ ಅಧಿಕಾರವನ್ನು ನೀಡಿದೆ. ಎಟಿಎಂ ಗಳಲ್ಲಿ ಹರಿದ ನೋಟು ಸಿಕ್ಕರೆ ಅದನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಈ ನೋಟುಗಳನ್ನು ಪಡೆಯಲು ಬ್ಯಾಂಕ್ ನಿರಾಕರಿಸಿದರೆ ಆರ್ ಬಿ ಐಗೆ ದೂರು ನೀಡುವ ಅಧಿಕಾರ ಗ್ರಾಹಕರಿಗೆ ಇದೆ. ಇದರಿಂದ ಬ್ಯಾಂಕ್ ಗಳು 10 ಸಾವಿರ ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ.

ಯಾವತ್ತೂ ಎಟಿಎಂ ನಿಂದ ಹಣ ಪಡೆಯುವ ವೇಳೆ ನೋಟಿನ ಕ್ರಮಸಂಖ್ಯೆ, ಮಹಾತ್ಮಾ ಗಾಂಧಿ ಅವರ ಚಿತ್ರ, ರಾಜ್ಯಪಾಲರ ಪ್ರಮಾಣವಚನ ಕಾಣಿಸದೇ ಇದ್ದಾಗ ಅದನ್ನು ಬ್ಯಾಂಕ್ ಗೆ ಹಿಂದಿರುಗಿಸಬೇಕಾಗುತ್ತದೆ.

ದಿನದಲ್ಲಿ ಗರಿಷ್ಠ 20 ನೋಟುಗಳನ್ನು ಅಂದರೆ ಗರಿಷ್ಠ 5 ಸಾವಿರ ರೂ. ಮೀರದ ನೋಟುಗಳ ವಿನಿಮಯಕ್ಕೆ ಅವಕಾಶವಿದೆ.

ನೋಟು ವಿನಿಮಯ ಪ್ರಕ್ರಿಯೆ ಸುಧೀರ್ಘ ವಾಗಿರುತ್ತದೆ. ಇದಕ್ಕೆ ಹೆಚ್ಚು ಕಾಲಾವಕಾಶ ಕೂಡ ಬೇಕಾಗುತ್ತದೆ. ಹೀಗಾಗಿ ಹೆಚ್ಚು ಸಮಯವನ್ನು ಬ್ಯಾಂಕ್ ಸಿಬ್ಬಂದಿ ತೆಗೆದುಕೊಳ್ಳಬಹುದು.

ಎಟಿಎಂ ನಿಂದ ಹರಿದ ನೋಟು ಸಿಕ್ಕಿದ್ದರೆ ಈ ಕುರಿತು ಬ್ಯಾಂಕ್ ಗೆ ದಾಖಲೆ ನೀಡಬೇಕು. ಬಳಿಕ ಅರ್ಜಿಯೊಂದನ್ನು ಭರ್ತಿ ಮಾಡಬೇಕು. ಅದರಲ್ಲಿ ಕೇಳಿರುವ ಮಾಹಿತಿ ನೀಡಿ ದಾಖಲೆಯನ್ನು ಸಲ್ಲಿಸಬೇಕು. ಬಳಿಕವಷ್ಟೇ ಹರಿದ ನೋಟಿಗೆ ಬೇರೆ ನೋಟು ಕೊಡಲು ಬ್ಯಾಂಕ್ ಗೆ ಅನುಮತಿ ಇದೆ.

ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕ್ ಗೆ ಹೋದರೆ ಶೀಘ್ರದಲ್ಲೇ ಹರಿದ ನೋಟಿನ ಬದಲು ಹೊಸ ನೋಟು ಪಡೆಯಬಹುದು.

ಹೀಗಾಗಿ ಇನ್ನು ಮುಂದೆ ಎಟಿಎಂ ನಲ್ಲಿ ಹರಿದ ನೋಟು ಸಿಕ್ಕಿತು ಎಂದು ಚಿಂತೆ ಬೇಡ. ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *