ಆರಂಭದಲ್ಲೇ ದಿಟ್ಟ ಹೆಜ್ಜೆ ಇಡಲು RCB ಸರ್ಕಸ್ – ಈ ಎಲ್ಲಾ ಆಟಗಾರರಿಗೆ ಗೇಟ್ ಪಾಸ್ ಪಕ್ಕಾ ಅಂತೆ…!!
- ಕ್ರೀಡಾ ಸುದ್ದಿ
- November 26, 2023
- No Comment
- 101
ನ್ಯೂಸ್ ಆ್ಯರೋ : ಈಗಾಗಲೇ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಕಾಂಗರೂ ಪಡೆಯ ಮುಂದೆ ಸೋಲುಂಡಿದೆ. ಇಂಡಿಯಾ ಟೀಮ್ ಕಪ್ ಹಿಡಿಯೋದನ್ನು ನೋಡಿ ಸಂಭ್ರಮಿಸಲು ಸಜ್ಜಾಗಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾಗಿತ್ತು.
ಇದೀಗ ಐಪಿಎಲ್ ಕ್ರಿಕೆಟ್ ಗೆ ಹೊಸ ಲುಕ್ ನೊಂದಿಗೆ ಕಣಕ್ಕಿಳಿಯಲು ಆರ್ ಸಿಬಿ ತಂಡ ಸಜ್ಜಾಗಿದೆ. ತಂಡವನ್ನ ಸೇರಿರುವ ಹೊಸ ಮಾಸ್ಟರ್ ಮೈಂಡ್ಗಳು, ಟೂರ್ನಿಗೂ ಮುನ್ನ ಸೂಪರ್ ಪ್ಲಾನ್ ರೂಪಿಸಿದ್ದಾರೆ. ಈ ಬಾಕಿ ಕಪ್ ನಮ್ದಾಗಲೇ ಬೇಕು ಅನ್ನೋದು ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.
ಕಳೆದ 16 ಸೀಸನ್ಗಳಲ್ಲಿ ಕಪ್ ನಮ್ದೇ ಅಂತಾ ಐಪಿಎಲ್ ಸೀಸನ್ ಆರಂಭಿಸೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಈವರೆಗೂ ಕಪ್ ಅನ್ನೋದು ಗಗನ ಕುಸುಮವಾಗಿದೆ. ಸೀಸನ್ನಿಂದ ಸೀಸನ್ಗೆ ಕ್ಯಾಪ್ಟನ್, ಕೋಚ್, ಸಾಲು ಸಾಲು ಆಟಗಾರರು ಬದಲಾದರು. ಆದ್ರೆ ಕಪ್ ಮಾತ್ರ ನಮ್ಮದಾಗಲಿಲ್ಲ.. ಇದೀಗ 17ನೇ ಸೀಸನ್ನಲ್ಲಾದ್ರೂ ಚಾಂಪಿಯನ್ ಆಗಲು ಪಣ ತೊಟ್ಟಿರೋ ರೆಡ್ ಆರ್ಮಿ ಆರಂಭದಲ್ಲೇ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.
17ನೇ ಸೀಸನ್ ಐಪಿಎಲ್ ಗೆ ಆರ್ ಸಿಬಿ ಭರ್ಜರಿ ಸಿದ್ಧತೆ:
ಸೀಸನ್ 17ರಲ್ಲಿ ಕಪ್ ಗೆಲುವನ್ನ ಟಾರ್ಗೆಟ್ ಮಾಡಿರುವ ಆರ್ಸಿಬಿ ಹೆಡ್ ಕೋಚ್ ಬದಲಾವಣೆ ಮಾಡಿರೋದು ಈಗ ಹಳೆ ವಿಚಾರ. ಇದೀಗ ರಿಟೈನ್, ರಿಲೀಸ್ ಲೆಕ್ಕಾಚಾರ ಮುನ್ನೆಲೆಗೆ ಬರ್ತಿದ್ದಂತೆ ನೂತನ ಹೆಡ್ ಕೋಚ್ ಆ್ಯಂಡಿಫ್ಲವರ್ ಚಾರ್ಚ್ ತೆಗೆದುಕೊಂಡಿದ್ದಾರೆ.
ಆ್ಯಂಡಿ ಫ್ಲವರ್ ಜೊತೆ ಆರ್ಸಿಬಿಯ ನೂತನ ಡೈರೆಕ್ಟರ್ ಮೊ ಬೊಟ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಹೊಸ ಸೀಸನ್ ಅನ್ನು, ಹೊಸ ಪ್ಲಾನ್ನೊಂದಿಗೆ, ಹೊಸ ಆಟಗಾರರೊಂದಿಗೆ ಫ್ರೆಶ್ ಆಗಿ ಆರಂಭಿಸೋದು ರಾಯಲ್ ಚಾಲೆಂಜರ್ಸ್ ಪಡೆಯ ನಯಾ ಥಿಂಕ್ಟ್ಯಾಂಕ್ಗಳ ಲೆಕ್ಕಾಚಾರ..
ಯಾರಿಗೆಲ್ಲಾ ಗೇಟ್ಪಾಸ್.?
ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಕೇದಾರ್ ಜಾದವ್
ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ವೇಯ್ನ್ ಪಾರ್ನೆಲ್
ಫಿನ್ ಅಲೆನ್, ಅನುಜ್ ರಾವತ್, ಆಕಾಶ್ ದೀಪ್
ಬಹುತೇಕ ಆಟಗಾರರಿಗೆ ಕೊಕ್ ನೀಡಲು ಮಾಸ್ಟರ್ ಪ್ಲಾನ್
17ನೇ ಸೀಸನ್ಗೂ ಮುನ್ನ ಪ್ಲೇ ಬೋಲ್ಡ್ ಆರ್ಮಿ ಬೋಲ್ಡ್ ಡಿಸಿಷನ್ ತೆಗೆದುಕೊಳ್ಳಲು ಮುಂದಾಗಿದೆ. ಹಾಲಿ ತಂಡದಲ್ಲಿರುವ ಪ್ರಮುಖ ಆಟಗಾರರಿಗೆ ಕೊಕ್ ಕೊಡೋ ಕಠಿಣ ನಿರ್ಧಾರವನ್ನು ಆರ್ಸಿಬಿ ಪಾಳೆಯ ಮಾಡಿದೆ. ಯಾರೆಲ್ಲಾ ತಂಡಕ್ಕೆ ಫಿಟ್ ಅನ್ನಿಸಲ್ವೋ ಅವರೆಲ್ಲರಿಗೂ ಗೇಟ್ಪಾಸ್ ನೀಡಲು ಆರ್ಸಿಬಿ ತಂಡ ಮುಂದಾಗಿದೆ.
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮೊಹಮ್ಮದ್ ಸಿರಾಜ್ ಮೂವರ ಜೊತೆಗೆ ಕೆಲ ಯಂಗ್ಸ್ಟರ್ಗಳ ಸ್ಥಾನ ಸದ್ಯಕ್ಕೆ . ಹಲ ಸೀನಿಯರ್ಗಳ ಜೊತೆ ಕೆಲ ಯುವಕರಿಗೆ ಸ್ಥಾನ ಡೌಟ್..!
ಮಿಡಲ್ ಆರ್ಡರ್ಗೆ ಬಲ, ಭವಿಷ್ಯದ ನಾಯಕನ ಹುಡುಕಾಟ..!
ಮಿನಿ ಆಕ್ಷನ್ಗೆ ಆರ್ಸಿಬಿ ಸಿದ್ಧಪಡಿಸಿಕೊಂಡಿರೋ ಒನ್ ಲೈನ್ ಅಜೆಂಡಾ ಇದು. ಮಿಡಲ್ ಆರ್ಡರ್ ಬ್ಯಾಟಿಂಗ್ ತಂಡವನ್ನ ಬಿಡದೇ ಕಾಡ್ತಿದೆ. ಹೀಗಾಗಿ ಅದಕ್ಕೆ ಬಲ ತುಂಬಲು ಸೂಕ್ತ ಆಟಗಾರರ ಹುಡುಕಾಟ ಮಿನಿ ಆಕ್ಷನ್ನಲ್ಲಿ ನಡೆಯಲಿದೆ. ಇದ್ರ ಜೊತೆಗೆ ಭವಿಷ್ಯದಲ್ಲಿ ತಂಡವನ್ನ ಮುನ್ನಡೆಸಬಲ್ಲ ಸಾಮರ್ಥ್ಯ ಯುವ ಆಟಗಾರನನ್ನ ತೆಕ್ಕೆಗೆ ಹಾಕಿಕೊಳ್ಳೋದು ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.
ಒಟ್ಟಿನಲ್ಲಿ, 17ನೇ ಸೀಸನ್ನಲ್ಲಿ ಟ್ರೋಫಿ ಗೆಲ್ಲಲು ಪಣ ತೊಟ್ಟಿರುವ ರಾಯಲ್ ಚಾಲೆಂಜರ್ಸ್ ಆರ್ಮಿ, ಇಷ್ಟು ದಿನ ಮಾಡಿದ ಮಿಸ್ಟೇಕ್ಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಬಲಿಷ್ಟ ಸೈನ್ಯದೊಂದಿಗೆ ರಣಾಂಗಣಕ್ಕೆ ಇಳಿಯಲು ಮೆಗಾ ಪ್ಲಾನ್ ರೂಪಿಸಿಕೊಂಡಿದೆ. ಈ ಪ್ಲಾನ್ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿಯ ಸಾರಥಿ
ಕಳೆದ 2 ಸೀಸನ್ ಹಿಂದೆ ಐಪಿಎಲ್ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿಗೆ ಮತ್ತೆ ಪಟ್ಟ ಕಟ್ಟುವ ಬಗ್ಗೆ ಫ್ರಾಂಚೈಸಿ ವಲಯದಲ್ಲಿ ಚರ್ಚೆ ನಡೆದಿರೋದು ಸತ್ಯ. ಹಾಲಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ನಾಯಕನಾಗಿ ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದಾರೆ. ಸಾಲಿಡ್ ಫಾರ್ಮ್ನಲ್ಲಿ ಬ್ಯಾಟ್ ಬೀಸಿರುವ ಫಾಫ್, ಫಿಟ್ನೆಸ್ ಕೂಡ ಟಾಪ್ ಲೆವೆಲ್ನಲ್ಲಿದೆ. 39 ವರ್ಷದ ಡುಪ್ಲೆಸಿಸ್ ಎಷ್ಟು ವರ್ಷ ನಾಯಕನಾಗಿರ್ತಾರೆ ಅನ್ನೋದ್ರ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಕೊಹ್ಲಿಗೆ ನಾಯಕನ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೆ ಕೊಹ್ಲಿ ಜೈ ಅನ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.
ಒಟ್ಟಾರೆಯಾಗಿ ಈ ಬಾರಿಯಾದರೂ ಐಪಿಎಲ್ ಟ್ರೋಫಿ ಆರ್ ಸಿಬಿ ಪಾಲಾಗುತ್ತಾ ಎಂಬುವುದನ್ನು ನೋಡಬೇಕಷ್ಟೆ..!!