‘ಟೆಂಟಲ್ಲಿ ಬ್ಲೂಫಿಲಂ ತೋರಿಸ್ಕೊಂಡು ಲೈಫಲ್ಲಿ ಸಾಗಿ ಬಂದೋರು ಅವರು ‘- ಕುಮಾರಣ್ಣ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?

‘ಟೆಂಟಲ್ಲಿ ಬ್ಲೂಫಿಲಂ ತೋರಿಸ್ಕೊಂಡು ಲೈಫಲ್ಲಿ ಸಾಗಿ ಬಂದೋರು ಅವರು ‘- ಕುಮಾರಣ್ಣ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?

ನ್ಯೂಸ್ ಆ್ಯರೋ : ರಾಜಕೀಯ ಜೀವನದಲ್ಲಿ ಕೇಳುವಷ್ಟು ಟೀಕೆ, ವ್ಯಂಗ್ಯ ಮಾತು ಬಹುಶಃ ನಾವೆಲ್ಲೂ ಕೇಳಲು ಸಾಧ್ಯವಿಲ್ಲವೇನೋ..ಪಕ್ಷ ಪಕ್ಷಗಳ ನಡುವೆ ರಾಜಕಾರಣಿಗಳು ಕಚ್ಚಾಡುವುದು ಮಾಮೂಲಿ. ಇನ್ನು ಅದು ಮಾಧ್ಯಮಕ್ಕೆ ಆಹಾರವಾಗದೆ ಇರುತ್ತಾ ಹೇಳಿ… ಇದೀಗ ಮತ್ತೊಮ್ಮೆ ಮಾಧ್ಯಮದ ಎದುರು ಹೆಚ್.ಡಿ ಕುಮಾರಸ್ವಾಮಿ ಮತ್ತೊಬ್ಬ ರಾಜಕೀಯ ಮುಖಂಡನನ್ನು ಗುಮ್ಮಿದ್ದಾರೆ.

‘ಘನತೆಗೆ ತಕ್ಕಂತೆ ಮಾತನಾಡಿ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್.ಡಿ ಕುಮಾರಸ್ವಾಮಿಗೆ ಹೇಳಿದ್ದರು. ಇದನ್ನು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಕುಮಾರಣ್ಣ ‘ ಘನತೆ ಗೌರವದ ಬಗ್ಗೆ ಮಾತನಾಡುವ ಅವರಿಗೆ ಯಾವ ರೀತಿಯ ಘನತೆ ಇದೆ’ ಎಂದು ಪ್ರಶ್ನಿಸಿದರು. ಅಲ್ಲದೆ ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲಂ ಪ್ರಸಾರ ಮಾಡುತ್ತಿದ್ದ ಹಿಂದಿನ ವಿಚಾರವನ್ನು ಕೆದಕಿ ಮಾತನಾಡಿದರು.

ಮಾಧ್ಯಮದವರ ಪ್ರಶ್ನೆಗೆ ಹೆಚ್ಡಿಕೆ ಏನೆಂದು ಉತ್ತರಿಸಿದ್ರು..?

ಹಾಸನದಲ್ಲಿ ಮಾಧ್ಯಮದವರ ಪ್ರಶ್ನೆಗೆ ಕೆಂಡಾಮಂಡಲರಾದ ಎಚ್.ಡಿ ಕುಮಾರಸ್ವಾಮಿ ಅವರು ‘ ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟರ್ ಅಂಟಿಸೋದಾ ನಿಮ್ಮ ಘನತೆ..? ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನ ಘನತೆ ಇದಲ್ಲವೇ…? ಎಂದು ಖಾರವಾಗಿ ಕೇಳಿದರು.

ಇನ್ನು ಹಳೆಯ ವಿಚಾರವನ್ನು ಮತ್ತೆ ಕೆದಕಿ ಮಾತನಾಡಿದ ಅವರು ‘ ಕನಕಪುರದ ದೊಡ್ಡ ಆಲಹಳ್ಳಿಯ ಸಾತನೂರು ಬಳಿ ಎರಡು ಟೆಂಟ್ ಇಟ್ಟುಕೊಂಡು ಕನೆಕ್ಷನ್ ತಗೊಂಡು ಜನರಿಗೆ ಬ್ಲೂಫಿಲಂ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಲ್ಲಿ ಬಂದಿರುವುದರಿಂದ ಈ ರೀತಿಯಾಗಿ ಕಳ್ಳ ಅಂತ ಪೋಸ್ಟರ್ ಅಂಟಿಸಿಕೊಂಡು ಕುಳಿತ್ತಿದ್ದೀರಿ. ಎಲ್ಲೆಲ್ಲಿ ಏನೇನು ಮಾಡಿದ್ದೀರಿ ಅಂತ ಗೊತ್ತಿಲ್ವಾ..? ಕದ್ದು ಗ್ರಾನೈಟ್ ಹೊಡ್ಕೊಂಡು ಕುಳಿತ್ತಿದ್ದೀರಿ.

ದರೋಡೆ ಮಾಡಿದ್ದೀರಿ. ಎಲ್ಲಿಲ್ಲಿ ಏನೇನು ಮಾಡಿದ್ದೀರಿ…ಎಲ್ಲಾನೂ ಗೊತ್ತಿದೆ. ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅರ್ಧ ರಾತ್ರಿಯಲ್ಲಿ ಗ್ರಾನೈಟ್ ಬರುತ್ತಿದೆ. ನಾನು ಕಾಣದ್ದಲ್ಲ. ಹೇಗೆ ಬದುಕಬೇಕು ಅನ್ನೋದನ್ನು ನಾನು ನಿಮ್ಮಿಂದ ಕಲಿಯಬೇಕಿಲ್ಲ’ ಎಂದು ಸಿಡುಕಿನಿಂದ ನುಡಿದರು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *