ಸಂಗ್ರಹಿಸಿಟ್ಟ ಮದ್ಯ ಸೇವಿಸಿ ಜೈಲು‌ ಸೇರಿದ ಇಲಿ – ಕದ್ದ ತಪ್ಪಿಗೆ ಪೋಲಿಸರ ಅತಿಥಿಯಾದ ಈ ಇಲಿ ಕಥೆ ಏನು?

ಸಂಗ್ರಹಿಸಿಟ್ಟ ಮದ್ಯ ಸೇವಿಸಿ ಜೈಲು‌ ಸೇರಿದ ಇಲಿ – ಕದ್ದ ತಪ್ಪಿಗೆ ಪೋಲಿಸರ ಅತಿಥಿಯಾದ ಈ ಇಲಿ ಕಥೆ ಏನು?

ನ್ಯೂಸ್ ಆ್ಯರೋ : ತಪ್ಪು ಮಾಡಿದರೆ ಶಿಕ್ಷೆ ಖಂಡಿತ ಇದೆ. ಆದರೆ ಇದು ಮಾನವರಿಗೆ ಮಾತ್ರ ಅನ್ವಯವಲ್ಲ. ಇಲಿಗಳಿಗೂ ಅನ್ವಯವಾಗುತ್ತದೆ.

ಇಲಿಯೊಂದು ಕಳ್ಳತನ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಛಿಂದ್ವಾರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಗ್ರಹ ಮಾಡಿಟ್ಟಿರುವ ಮದ್ಯದ ಬಾಟಲಿ ಮೇಲೆ ಕಣ್ಣು ಹಾಕಿ ಕದ್ದು ಈಗ ಪೋಲೀಸರ ಅತಿಥಿಯಾಗಿದೆ. ಮುಂದೆ ಇದಕ್ಕೆ ಯಾವ ಶಿಕ್ಷೆ ಕಾದಿದಿಯೋ ಕಾದು ನೋಡಬೇಕು.

ಪೊಲೀಸರು ಸೀಜ್ ಮಾಡಿದ್ದ ಮದ್ಯದ ಬಾಟಲಿಗಳನ್ನು ತಂದು ಗೋದಾಮಿನಲ್ಲಿ ಇರಿಸಿದ್ದರು. ಈ ಬಗ್ಗೆ ಪ್ರಕರಣ ನ್ಯಾಯಾಲಕ್ಕೂ ಹೋಗಿದೆ. ಆದರೆ ಸಂಗ್ರಹಿಸಿ ಇಟ್ಟಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆದು ಇಲಿಗಳು ಸಾಕಷ್ಟು ಮದ್ಯವನ್ನು ಖಾಲಿ ಮಾಡಿವೆ.

ಇದನ್ನು ಇಲಿಗಳು ಕುಡಿದಿವೆಯೋ ಅಥವಾ ಬಾಟಲಿ ಕೊರೆದ ಕಾರಣ ಸೋರಿಕೆಯಾಗಿ ಹೋಗಿದೆಯೋ ಎನ್ನುವುದು ಮಾತ್ರ ಪೊಲೀಸರಿಗೂ ಗೊತ್ತಿಲ್ಲ. ಆದರೆ ಇಲಿಗಳ ಕಾಟದಿಂದ ಬೇಸತ್ತ ಪೊಲೀಸರು ಇಲಿ ಹಿಡಿಯಲು ಬೋನು ಇಟ್ಟಿದ್ದು ಒಂದು ಇಲಿ ಇದರಲ್ಲಿ ಸಿಕ್ಕಿ ಬಿದ್ದಿದೆ.

ಇಲಿಗಳು ಒಂದೆರಡು ಬಾಟಲಿ ಮದ್ಯವಲ್ಲ ಬರೋಬ್ಬರಿ ಸುಮಾರು 60- 65 ಬಾಟಲಿಗಳನ್ನು ಖಾಲಿ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ ಈ ಪ್ರಕರಣಕ್ಕೆ ಕೋರ್ಟ್‌ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಇಲಿಗಳು ಮಾಡಿರುವ ತೊಂದರೆಯಿಂದ ಈಗ ಪೊಲೀಸರು ಸಂಕಷ್ಟ ಎದುರಿಸುವಂತಾಗಿದೆ.

ಈ ಪೊಲೀಸ್‌ ಠಾಣೆಯಲ್ಲಿ ಹಿಂದೆಯೂ ಹಲವು ಸಮಸ್ಯೆಗಳನ್ನು ಇಲಿ ತಂದೊಡ್ಡಿತ್ತು. ಕಟ್ಟಡ ತುಂಬ ಹಳೆಯದಾಗಿದ್ದು, ಇಲ್ಲಿ ಇಲಿಗಳ ಕಾಟ ಸಾಕಷ್ಟಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *