ಪ್ರಧಾನಿ ಮೋದಿಯ ಆ ಒಂದು ಭರವಸೆಯಿಂದ 12 ವರ್ಷಗಳ ಬಳಿಕ ಚಪ್ಪಲಿ ಧರಿಸಿದ 71ರ ರೈತ – ಏನಿದು ಸುದ್ದಿ? ಮೋದಿ ಮಾಡಿದ್ದೇನು?
- ರಾಷ್ಟ್ರೀಯ ಸುದ್ದಿ
- October 3, 2023
- No Comment
- 126
ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರಿಂದ 12 ವರ್ಷದ ಬಳಿಕ 71 ವರ್ಷದ ರೈತನೊಬ್ಬ ಕಾಲಿಗೆ ಚಪ್ಪಲಿ ಧರಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಉತ್ತಮ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಅರಿಶಿನ ರೈತರು ಬೆಂಬಲ ಬೆಲೆ ಪಡೆಯಲು ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು.
ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ತೆರಳಿ ಇದಕ್ಕಾಗಿ ಬೇಡಿಕೆ ಇಟ್ಟರು. ಆದರೆ ಪ್ರಯೋಜನವಾಗಲಿಲ್ಲ. ಹೀಗಾಗಿ 2011ರ ನವೆಂಬರ್ 4ರಿಂದ ಚಪ್ಪಲಿ ಧರಿಸದೇ ಇರಲು ಮನೋಹರ ರೆಡ್ಡಿ ಅವರು ನಿರ್ಧರಿಸಿದ್ದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆ ಮಾಡುವುದನ್ನು ಘೋಷಿಸಿದಾಗ ಮನೋಹರ್ ರೆಡ್ಡಿ ಅವರು ನಿಜಾಮಾಬಾದ್ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಇದ್ದರು. ಕೂಡಲೇ ಅವರು ಸಂತೋಷಗೊಂಡ ಕಚೇರಿಯಲ್ಲಿ ಚಪ್ಪಲಿ ಧರಿಸಿದರು. ತಮ್ಮ ಕನಸು ನನಸಾಗಿದ್ದನ್ನು ಕಂಡು ಅವರ ಕಣ್ಣಾಲಿಗಳು ತುಂಬಿ ಬಂತು.
ಮೋದಿಯವರು ತೆಲಂಗಾಣಕ್ಕೆ ಭೇಟಿ ನೀಡಿ 13,545 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದು, ಈ ವೇಳೆ ಅನೇಕ ಭರವಸೆಗಳನ್ನು ನೀಡಿದರು. ಇದರಲ್ಲಿ ತೆಲಂಗಾಣದಲ್ಲಿ ರಾಷ್ಟ್ರೀಯ ಅರಶಿನ ಮಂಡಳಿ ಸ್ಥಾಪನೆ, ಮುಲುಗು ಜಿಲ್ಲೆಯಲ್ಲಿ ಸಮ್ಮಕ್ಕ – ಸಾರಕ್ಯ ಹೆಸರಲ್ಲಿ ಕೇಂದ್ರೀಯ ಗಿರಿಜನರ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದರು.