ಹಿರಿಯ ನಾಗರಿಕರ ಎಫ್‌ಡಿಗೆ ಶೇ 9ರಷ್ಟು ಬಡ್ಡಿ ಕೊಡುಗೆ – ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಘೋಷಣೆ

ಹಿರಿಯ ನಾಗರಿಕರ ಎಫ್‌ಡಿಗೆ ಶೇ 9ರಷ್ಟು ಬಡ್ಡಿ ಕೊಡುಗೆ – ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಘೋಷಣೆ

ನ್ಯೂಸ್‌ ಆ್ಯರೋ : ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಯಲ್ಲಿ (ಎಫ್‌ಡಿ) ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಬಹುತೇಕ ಬ್ಯಾಂಕಿಂಗ್‌ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಗರಿಷ್ಠ ಶೇಕಡ 8.5ರ ವರೆಗೂ ಬಡ್ಡಿ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದು ಹೆಜ್ಜೆ ಮುಂದೆ ಬಂದು ಹಿರಿಯ ನಾಗರಿಕರ ಠೇವಣಿಗೆ ಎಲ್ಲರಿಗಿಂತ ಹೆಚ್ಚಿನ ಬಡ್ಡಿದರವನ್ನು ಘೋಷಣೆ ಮಾಡಿದೆ. ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರವನ್ನು ಶೇಕಡಾ 9ರ ವರೆಗೆ ಏರಿಸುವ ಮೂಲಕ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ತೀಚೆಗೆ ಆರಂಭಿಸಿದ್ದ ‘ಶಕುನ್’ ಸ್ಥಿರ ಠೇವಣಿ ಹೂಡಿಕೆ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ಬಡ್ಡಿ ದರ ಹೆಚ್ಚಳ ಮಾಡಿದೆ ಎಂದು ಬ್ಯಾಂಕ್​ನ ಮೂಲಗಳು ತಿಳಿಸಿವೆ.

ಒಂದು ವರ್ಷದವರೆಗೆ ಅಥವಾ 181 ಮತ್ತು 501 ದಿನಗಳ ಅವಧಿಯ ಹಿರಿಯ ನಾಗರಿಕರ ಎಫ್‌ಡಿಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡಾ 9ರ ಬಡ್ಡಿ ನೀಡುತ್ತಿದೆ. ಇತರ ಗ್ರಾಹಕರು 181 ಮತ್ತು 501 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 8.50ರ ಬಡ್ಡಿ ದರದ ಕೊಡುಗೆ ಪಡೆಯಬಹುದು. ಈ ಪ್ರಕಟಣೆಯೊಂದಿಗೆ ಬ್ಯಾಂಕ್ ನವೆಂಬರ್​ನಲ್ಲಿ ಎರಡನೇ ಬಾರಿ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಿದೆ.

₹2 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಬಡ್ಡಿ ದರವನ್ನೂ ಯುನಿಟಿ ಬ್ಯಾಂಕ್ ಹೆಚ್ಚಿಸಿದೆ. ಕಾಲೇಬಲ್ ಬಲ್ಕ್ ಡೆಪಾಸಿಟ್​ಗಳಿಗೆ ವರ್ಷದ ಅವಧಿಗೆ ಶೇಕಡಾ 8ರ ಬಡ್ಡಿ ನೀಡುತ್ತಿದೆ. ನಾನ್ ಕಾಲೇಬಲ್ ಬಲ್ಕ ಡೆಪಾಸಿಟ್​​ಗಳಿಗೆ ಶೇಕಡಾ 8.10ರ ಬಡ್ಡಿ ಘೋಷಿಸಲಾಗಿದೆ.

ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಯುನಿಟಿ ಬ್ಯಾಂಕ್ ವಾರ್ಷಿಕ ಶೇಕಡಾ 7ರ ಬಡ್ಡಿ ನೀಡುತ್ತಿದೆ. ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯಕ್ಕೆ ವಾರ್ಷಿಕ ಶೇಕಡಾ 6ರಷ್ಟು ಬಡ್ಡಿ ಕೊಡುಗೆ ನೀಡುತ್ತಿದೆ.

ಅವಧಿಗೂ ಮುನ್ನ ಸ್ಥಿರಠೇವಣಿ ಹಿಂಪಡೆಯುವುದಾದರೆ ಬಡ್ಡಿ ದರದಲ್ಲಿ ಶೇಕಡಾ 1ರಷ್ಟು ಕಡಿತ ಮಾಡಲಾಗುವುದು. ಎಲ್ಲಿಯವರೆಗೆ ಠೇವಣಿ ಇಟ್ಟಿರುತ್ತೇವೆಯೋ ಆ ಅವಧಿಯ ವರೆಗೆ ಲೆಕ್ಕಾಚಾರ ಹಾಕಿ ಬಡ್ಡಿಯಲ್ಲಿ ಶೇಕಡಾ 1ರ ಕಡಿತ ಮಾಡಲಾಗುತ್ತದೆ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *