
ನಿಮ್ಮ ಬ್ಯಾಂಕ್ ಖಾತೆಯಿಂದಲೂ ಏಕಾಏಕಿ ₹.436 ಗುಳುಂ ಆಗಿದ್ಯಾ? – ಈ ಹಣ ಎಲ್ಲಿ ಸೇರುತ್ತೆ ಗೊತ್ತಾ?
- ಹಣಕಾಸು
- March 2, 2023
- No Comment
- 123
ನ್ಯೂಸ್ ಆ್ಯರೋ : ಕೆಲವೊಮ್ಮೆ ಏಕಾಏಕಿ ನಿಮ್ಮ ಬ್ಯಾಂಕ್ ಖಾತೆಯಿಂದ ₹436 ಖಡಿತಗೊಂಡಿದೆ ಎಂದು ಮೊಬೈಲ್ಗೆ ಸಂದೇಶ ಬರುತ್ತದೆ. ಈ ಸಂಬಂಧ ವಿಚಾರಿಸಲು ಬ್ಯಾಂಕ್ ಹೋದಾಗ , ನೀವು ವಿಮಾ ಪಾಲಿಸಿ ಹೊಂದಿದ್ದೀರಿ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ರಕ್ಷಾ ಎಂದು ಹೇಳಲಾಗುತ್ತದೆ.
ವಿಮಾ ರಕ್ಷಣೆ ಹೀಗಿದೆ.!
ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ಮತ್ತು ಸ್ವಯಂ-ಡೆಬಿಟ್’ನ್ನ ನೋಂದಾಯಿಸಲು ಅಥವಾ ಸಕ್ರಿಯಗೊಳಿಸಲು ಒಪ್ಪಿಕೊಂಡವರು ಮತ್ತು 18 ರಿಂದ 50 ವರ್ಷ ವಯಸ್ಸಿನವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಯೋಜನೆಗೆ ಅರ್ಹತೆಯನ್ನು ಪಡೆಯುತ್ತಾರೆ.
ಬ್ಯಾಂಕ್ ಖಾತೆಗಳಿಗೆ KYC ಅಡಿಯಲ್ಲಿ ಆಧಾರ್’ನ್ನ ಪ್ರಾಥಮಿಕ ರೂಪವಾಗಿ ಬಳಸಲಾಗುತ್ತದೆ. 2 ಲಕ್ಷ ರೂಪಾಯಿ ಜೀವ ವಿಮಾ ಪಾಲಿಸಿಯು ಜೂನ್ 1 ರಿಂದ ಮೇ 31 ರವರೆಗೆ ಮಾನ್ಯವಾಗಿರುತ್ತದೆ. ಇದರ ವಾರ್ಷಿಕ ಪ್ರೀಮಿಯಂ ₹436 ಮತ್ತು ಪ್ರತಿ ವಾರ್ಷಿಕ ಕವರೇಜ್ ಅವಧಿಯ ಮೇ 31 ರಂದು ಅಥವಾ ಮೊದಲು ಚಂದಾದಾರರ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮಾಡಬೇಕು.
ಆದ್ರೆ, ನೀವು ಯಾವುದೇ ಕಾರಣಕ್ಕಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನ ಮುಂದುವರಿಸಲು ಸಾಧ್ಯವಾಗದಿದ್ರೆ, ನಿಮ್ಮ ಬ್ಯಾಂಕ್ ಖಾತೆಯಿಂದ ವಾರ್ಷಿಕ ಸ್ವಯಂ-ಡೆಬಿಟಿಂಗ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.
ಆದ್ರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವ ಹಣವನ್ನ ನೀವು ಹೊಂದಿಲ್ಲದಿದ್ದರೆ ಪ್ರೀಮಿಯಂ ಸ್ವಯಂ-ಡೆಬಿಟ್ ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ರದ್ದಾಗುತ್ತದೆ.