ಅಂಬಾನಿ ದಂಪತಿ ತುಂಬಾ ಇಷ್ಟಪಡೋ ತಿಂಡಿಗಳ ಪಟ್ಟಿ ಗೊತ್ತೇ? – ದೇಸೀ ತಿನಿಸುಗಳನ್ನೇ ಇಷ್ಟಪಡ್ತಾರೆ ಈ ಅಗರ್ಭ ಶ್ರೀಮಂತ..!

ಅಂಬಾನಿ ದಂಪತಿ ತುಂಬಾ ಇಷ್ಟಪಡೋ ತಿಂಡಿಗಳ ಪಟ್ಟಿ ಗೊತ್ತೇ? – ದೇಸೀ ತಿನಿಸುಗಳನ್ನೇ ಇಷ್ಟಪಡ್ತಾರೆ ಈ ಅಗರ್ಭ ಶ್ರೀಮಂತ..!

ನ್ಯೂಸ್ ಆ್ಯರೋ : ಸಾಮಾನ್ಯ ಜನರ ಜೀವನ ತುಂಬಾ ಸರಳವಾಗಿರುತ್ತದೆ‌. ಅವರು ದುಡಿಯುವ ವೇತನದ ಆಧಾರದಲ್ಲಿ ತಮ್ಮ ಬದುಕನ್ನು ಸರಿದೂಗಿಸಿಕೊಂಡು ಹೋಗುತ್ತಿರುತ್ತಾರೆ. ಆದರೆ ಜಗತ್ತಿನ ಅತ್ಯಂತ ಶ್ರೀಮಂತರ ಬದುಕು ಹೇಗಿರುತ್ತೆ…? ಯಾವ ರೀತಿಯಲ್ಲಿ ಅವರು ಜೀವನ ಸಾಗಿಸುತ್ತಾರೆ ಎನ್ನುವ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಅವರ ವೈಯಕ್ತಿಕ ಬದುಕಿನಲ್ಲಿ ಇಷ್ಟಪಡುವ ಕೆಲವು ಸಂಗತಿಗಳ ಬಗ್ಗೆ ಕ್ಯೂರಾಸಿಟಿ ಅಂತೂ ಇದ್ದೇ ಇರುತ್ತದೆ. ಇದೀಗ ದೇಶದ ಅಗರ್ಭ ಶ್ರೀಮಂತರಾದ ಮುಖೇಶ್ ಅಂಬಾನಿ ದಂಪತಿಯ ಫೇವರೆಟ್ ಡಿಶ್ ಏನು ಅನ್ನೋದನ್ನು ಅವರೇ ಬಹಿರಂಗಗೊಳಿಸಿದ್ದಾರೆ ನೋಡಿ.

ಆಗರ್ಭ ಶ್ರೀಮಂತರಾಗಿರೋ ಮುಖೇಶ್ ಅಂಬಾನಿ ಒಬ್ಬ ಕಠಿಣ ಪರಿಶ್ರಮಿ ಅನ್ನೋದು ಮತ್ತೆ ಹೇಳಬೇಕಾಗಿಲ್ಲ. ಆದರೆ ಇವರ ಜೀವನಶೈಲಿ ಮತ್ತು ಆಹಾರ ಕ್ರಮ ತುಂಬಾನೆ ಸಿಂಪಲ್ ಆಗಿದೆ. ಲಕ್ಸುರಿಯಾದ ಬದುಕು ಇದ್ದರೂ ಅವರಿಗೆ ಸಿಂಪಲ್ ಆಗಿರುವ ಜೀವನಶೈಲಿ ಮತ್ತು ಆಹಾರ ಸೇವಿಸೋದು ತುಂಬಾ ಇಷ್ಟ.

ಇವರು ಆಹಾರ ಸೇವಿಸುವ ಕ್ರಮ ಹೇಗಿರುತ್ತೆ..?

ಮುಕೇಶ್ ಅವರು ಹೆಚ್ಚಾಗಿ ತಮ್ಮ ಡಯಟ್ ನಲ್ಲಿ ಪೌಷ್ಟಿಕಾಂಶ ತುಂಬಿದ ಆಹಾರವನ್ನು ಸೇವಿಸುತ್ತಾರೆ. ಅದರಲ್ಲಿ ದಾಲ್ ಅನ್ನ, ರೋಟಿ ಮೊದಲಾದ ಆಹಾರಗಳನ್ನು ಸೇವಿಸುತ್ತಾರೆ. ಅದಲ್ಲದೇ ಪಪ್ಪಾಯ ಜ್ಯೂಸ್ ಪ್ರತಿದಿನ ಕುಡಿಯೋದನ್ನು ಸಹ ಇವರು ಇಷ್ಟಪಡ್ತಾರೆ.

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅತೀ ಹೆಚ್ಚು ಇಷ್ಟಪಡುವ ಆಹಾರ ಯಾವುವು..?

ಸ್ಟ್ರೀಟ್ ಫುಡ್ ಗಳಲ್ಲಿ ಭೇಲ್ ಪುರಿ ತಿನ್ನುವ ಮೋಜು ಬೇರೆಲ್ಲಿಯೂ ಕಂಡುಬರುವುದಿಲ್ಲ. ಅಂಬಾನಿ ಬಗ್ಗೆ ಮಾತನಾಡುವುದಾದರೆ, ಇದು ಅವರ ನೆಚ್ಚಿನ ಆಹಾರ. ಸ್ವಾತಿ ಸ್ನ್ಯಾಕ್ಸ್ ನಿಂದ ಅವರು ಹೆಚ್ಚಾಗಿ ಬೇಲ್ ಪುರಿ ತಿಂತಾರಂತೆ. ಮುಂಬೈ ಮೂಲದ ಈ ಸರಳ ಫಾಸ್ಟ್ ಫುಡ್ ಜಾಯಿಂಟ್ 1960 ರ ದಶಕದಿಂದ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳಿಗೆ ನೆಚ್ಚಿನ ಸ್ನ್ಯಾಕ್ ಪಾಯಿಂಟ್ಗಳಲ್ಲಿ ಒಂದು. ಇದು ಮುಖ್ಯವಾಗಿ ಗುಜರಾತ್ ನಿಂದ ಹುಟ್ಟಿಕೊಂಡ ಸಾಂಪ್ರದಾಯಿಕ ಚಾಟ್ಸ್‌ನಲ್ಲೊಂದು. ಅಂಬಾನಿ ಮೈಸೂರಿನ ರೆಸ್ಟೋರೆಂಟ್ ಕೆಫೆಯಲ್ಲಿನ ಭೇಲ್ಪುರಿಯನ್ನು ಇಷ್ಟಪಡ್ತಾರಂತೆ.

ಗುಜರಾತಿ ದಾಲ್

ಈ ಬಿಲಿಯನೇರ್ ಕುಟುಂಬವು ಸಸ್ಯಾಹಾರಿ ಆಹಾರವನ್ನು ಇಷ್ಟಪಡುತ್ತದೆ ಮತ್ತು ಯಾವಾಗಲೂ ಸಾಂಪ್ರದಾಯಿಕ ಆಹಾರವನ್ನು ಆಯ್ಕೆ ಮಾಡ್ತಾರೆ. ವರದಿಯ ಪ್ರಕಾರ, ಮುಖೇಶ್ ಅಂಬಾನಿ ರಾತ್ರಿ ಊಟಕ್ಕೆ ಗುಜರಾತಿ ಆಹಾರವನ್ನು ಸವಿಯುತ್ತಾರೆ, ಇದು ಪೌಷ್ಟಿಕ ಮತ್ತು ಸಾಂಪ್ರದಾಯಿಕವಾಗಿದೆ. ಅಂದಹಾಗೆ, ದಾಲ್ ಗುಜರಾತ್ ಮತ್ತು ಮುಂಬೈ ಮತ್ತು ದೆಹಲಿಯಲ್ಲಿ ಬಹಳ ಪ್ರಸಿದ್ಧ.

ರಾಜ್ಮಾ ರೋಟಿ

ರಾಜ್ಮಾ ಚಾವಲ್ ಎಲ್ಲರಿಗೂ ಇಷ್ಟ. ದೆಹಲಿಯಲ್ಲಿ ರಾಜ್ಮಾ ಚಾವಲ್ ಇಷ್ಟಪಡದವರು ಯಾರೂ ಇರುವುದಿಲ್ಲ. ಆದರೆ ಅಂಬಾನಿ ದಂಪತಿ ರಾಜ್ಮಾ ರೊಟ್ಟಿಯನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ವೃತ್ತಿಪರ ಬಾಣಸಿಗರು ತಯಾರಿಸಿದ ಪೌಷ್ಟಿಕ ಮತ್ತು ಕಡಿಮೆ ಕ್ಯಾಲೊರಿ ರಾಜ್ಮಾವನ್ನು ತಿನ್ನುತ್ತಾರಂತೆ.

ದಹೀ ಆಲೂ

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ದಹೀ ಆಲೂ ತುಂಬಾ ಇಷ್ಟಪಡುತ್ತಾರೆ. ಅವರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಆಯ್ಕೆಯ ಈ ಸ್ಟ್ರೀಟ್ ಫುಡ್ ತಿನ್ನುತ್ತಾರೆ. ದಹಿ ಆಲೂಗಡ್ಡೆ ಕೂಡ ದೆಹಲಿಯಲ್ಲಿ ಬಹಳ ಪ್ರಸಿದ್ಧವಾಗಿದೆ.

ಇಡ್ಲಿ ಸಾಂಬಾರ್

ಮುಖೇಶ್ ಅಂಬಾನಿ ದಕ್ಷಿಣ ಭಾರತದ ಆಹಾರವನ್ನು ಸಹ
ಮುಖೇಶ್ ಅಂಬಾನಿ ದಕ್ಷಿಣ ಭಾರತದ ಆಹಾರವನ್ನು ಸಹ ಇಷ್ಟಪಡ್ತಾರೆ, ವಿಶೇಷವಾಗಿ ಇಡ್ಲಿ ಸಾಂಬಾರ್ ತಿನ್ನಲು ಇಷ್ಟ ಪಡ್ತಾರಂತೆ. ಮುಂಬೈನ ಮಾಟುಂಗಾದಲ್ಲಿ, ವಿಶೇಷವಾಗಿ ಕಿಂಗ್ಸ್ ಸರ್ಕಲ್‌ನಲ್ಲಿರುವ ಪ್ರಸಿದ್ಧ ದಕ್ಷಿಣ ಭಾರತದ ರೆಸ್ಟೋರೆಂಟ್ ಕೆಫೆ ಮೈಸೂರು ಅವರ ನೆಚ್ಚಿನ ಊಟದ ಸ್ಥಳಗಳಲ್ಲಿ ಒಂದಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ರೆಸ್ಟೋರೆಂಟ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT) ಗೆ ಹತ್ತಿರದಲ್ಲಿದೆ, ಅಲ್ಲಿ ಮುಖೇಶ್ ಅಂಬಾನಿ ಹಿಂದೆ ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿದ್ದರು. ವಿಶೇಷವಾಗಿ ಇಡ್ಲಿ ಸಾಂಬಾರ್ ತಿನ್ನಲು ಇಷ್ಟ ಪಡ್ತಾರಂತೆ. ಮುಂಬೈನ ಮಾಟುಂಗಾದಲ್ಲಿ, ವಿಶೇಷವಾಗಿ ಕಿಂಗ್ಸ್ ಸರ್ಕಲ್‌ನಲ್ಲಿರುವ ಪ್ರಸಿದ್ಧ ದಕ್ಷಿಣ ಭಾರತದ ರೆಸ್ಟೋರೆಂಟ್ ಕೆಫೆ ಮೈಸೂರು ಅವರ ನೆಚ್ಚಿನ ಊಟದ ಸ್ಥಳಗಳಲ್ಲಿ ಒಂದಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ರೆಸ್ಟೋರೆಂಟ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಗೆ ಹತ್ತಿರದಲ್ಲಿದೆ. ಅಲ್ಲಿ ಮುಖೇಶ್ ಅಂಬಾನಿ ಹಿಂದೆ ರಾಸಾಯನಿಕ ಎಂಜಿನಿಯರಿಂಗ್ ನಲ್ಲಿ ಬಿಇ ಪದವಿ ಪಡೆದಿದ್ದರು.

ಒಟ್ಟಾರೆಯಾಗಿ ದೇಶದ ಅಗರ್ಭ ಶ್ರೀಮಂತ ಅಂಬಾನಿ ದಂಪತಿ ಕೂಡಾ ದೇಸೀ ಆಹಾರವನ್ನು ಹೆಚ್ಚಾಗಿ ಇಷ್ಟಪಡ್ತಾರೆ ಅನ್ನೋದು ಇದರಿಂದ ತಿಳಿದುಬರುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *