ಪ್ರಶಸ್ತಿಗೆ ಚೂಪಾದ ರೆಕ್ಕೆ ಇದ್ದ ಕಾರಣಕ್ಕೆ ಸಂದೇಹ – ಕಲಾವಿದ ವೀರ್ ದಾಸ್ ‘ಎಮ್ಮಿ’ಪ್ರಶಸ್ತಿ ಏರ್ ಪೋರ್ಟ ನಲ್ಲಿ ತಪಾಸಣೆ..!
- ಅಂತಾರಾಷ್ಟ್ರೀಯ ಸುದ್ದಿ
- November 27, 2023
- No Comment
- 94
ನ್ಯೂಸ್ ಆ್ಯರೋ : ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದು ಬಂದಾಗ ತನಗೆ ಎಲ್ಲರಿಂದ ಗೌರವ ಸಿಗುತ್ತದೆ ಎಂದುಕೊಂಡಿದ್ದ ಕಲಾವಿದರೊಬ್ಬರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಶಾಕ್ ದೊರೆತಿದೆ.
ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎಮ್ಮಿ’ ಪ್ರಶಸ್ತಿ ಪಡೆದು ಬಂದ ನಟ ಹಾಗೂ ಹಾಸ್ಯ ಕಲಾವಿದ ವೀರ್ ದಾಸ್ ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣ ಸಿಬ್ಬಂದಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರಶಸ್ತಿಯ ಟ್ರೋಫಿ ಎಂದು ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಕಲಾವಿದ ವೀರ್ ದಾಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ಎಮ್ಮಿ’ ಪ್ರಶಸ್ತಿ ಪಡೆದು ಬೆಂಗಳೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಪ್ರಶಸ್ತಿಯ ಟ್ರೋಫಿಯನ್ನು ವಶಕ್ಕೆ ತೆಗೆದುಕೊಂಡು ತಪಾಸಣೆಗೆ ಒಳಪಡಿಸಿದರು ಎಂದು ಅವರು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಬ್ಯಾಗ್ನಲ್ಲಿ ಚೂಪಾದ ಮೂರ್ತಿ ಇದೆಯೇ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದು ಆಗ ನಾನು ಇಲ್ಲ ಸರ್ ಅದು ಪ್ರಶಸ್ತಿ. ಅದಕ್ಕೆ ಚೂಪಾದ ರೆಕ್ಕೆ ಇವೆ’ ಎಂದು ಹೇಳಿದ್ದೇನೆ. ಬಳಿಕ ಅದನ್ನು ತೆಗೆದು ಅಧಿಕಾರಿಗೆ ತೋರಿಸಿದೆ. ಅವರು ಅದನ್ನು ನೋಡಿ ಪರಿಶೀಲಿಸಿ ಚೆನ್ನಾಗಿದೆ. ನೀವೇನು ಮಾಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ನಾನು, ತಮಾಷೆ ಮಾಡುತ್ತೇನೆ ಎಂದೆ. ಆಗ ಅವರು ನಕ್ಕು ನನ್ನನ್ನು ಬೀಳ್ಕೊಟ್ಟರು ಎಂದು ವೀರ್ ತಿಳಿಸಿದ್ದಾರೆ.
ಮನುಷ್ಯನ ಆಕಾರದಲ್ಲಿರುವ ಎಮ್ಮಿ ಪ್ರಶಸ್ತಿಯು ಇದರ ಬಾಹುಗಳನ್ನು ಹೊಂದಿದ್ದ ಅದಕ್ಕೆ ಚೂಪಾದ ಎರಡು ರೆಕ್ಕೆಗಳಿರುತ್ತವೆ. ಇದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ಕೊಂಚ ಶಂಕೆ ಮೂಡಿಸಿತ್ತು. ಏನೇ ಆಗಲಿ ನಮ್ಮ ಭದ್ರತಾ ಸಿಬ್ಬಂದಿ ನಮ್ಮ ನಾಡು, ಜನರ ರಕ್ಷಣೆಗೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.