ವೈದ್ಯಕೀಯ ಇತಿಹಾಸದಲ್ಲೇ ಮೊದಲು -ಮಹಿಳೆ ಮೆದುಳಿನಲ್ಲಿ ಸೇರಿಕೊಂಡಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ, ಮುಂದೇನಾಯ್ತು?

ವೈದ್ಯಕೀಯ ಇತಿಹಾಸದಲ್ಲೇ ಮೊದಲು -ಮಹಿಳೆ ಮೆದುಳಿನಲ್ಲಿ ಸೇರಿಕೊಂಡಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ, ಮುಂದೇನಾಯ್ತು?

ನ್ಯೂಸ್ ಆ್ಯರೋ‌ : ಮಾನಸಿಕ ಖಿನ್ನತೆ ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದ 64ರ ಹರೆಯದ ಮಹಿಳೆಯನ್ನು ಪರೀಕ್ಷಿಸಿದ ಆಸ್ಟ್ರೇಲಿಯಾದ ವೈದ್ಯರಿಗೆ ಶಾಕ್ ಕಾದಿತ್ತು. ಯಾಕೆಂದರೆ ಮಹಿಳೆಯ ಮೆದುಳಿನಲ್ಲಿ 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳವೊಂದು ಪತ್ತೆಯಾಗಿದೆ..!

ಇದೇ ಮೊದಲು

ಇಂತಹ ಪ್ರಕರಣ ವೈದ್ಯಕೀಯ ಇತಿಹಾಸದಲ್ಲೇ ಮೊದಲು ಎನ್ನಲಾಗುತ್ತಿದೆ. ಕ್ಯಾನ್ ಬೆರಾದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯ ಮೆದುಳಿನಲ್ಲಿ ಸೇರಿಕೊಂಡು ಜೀವಂತವಾಗಿದ್ದ ಪರಾಬಲಂಬಿ ಹುಳವನ್ನು ವೈದ್ಯರು ಹೊರ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೀವ್ರ ಸಮಸ್ಯೆ

ಒಣ ಕಫ, ಜ್ವರ, ರಾತ್ರಿ ಬೆವರುವುದು, ಹೊಟ್ಟೆ ನೋವು, ಅತಿಸಾರ ಸಮಸ್ಯೆಗಳಿಂದ ಬಳಲುತ್ತಿದ್ದ ಅಗ್ನೇಯ ಸೌತ್ ವೇಲ್ಸ್ ನ ಮಹಿಳೆ 2021ರ ಜನವರಿ ಕೊನೆ ವಾರದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. 2022ರ ವೇಳೆಗೆ ಅವರ ರೋಗ ಲಕ್ಷಣ ಬದಲಾಗಿ ಮರೆವು, ಖಿನ್ನತೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಕ್ಯಾನ್ ಬೆರಾದಲ್ಲಿರುವ ಆಸ್ಪತ್ರೆಗೆ ಕರೆತರಲಾಗಿತ್ತು.

ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ವೇಳೆ ಕೆಲವು ಅಸಹಜ ಬೆಳವಣಿಗೆ ಕಂಡು ಬಂದಿತ್ತು. ಭಾರತೀಯ ಮೂಲದ ಡಾ.ಹರಿಪ್ರಿಯಾ ಮತ್ತು ಡಾ.ಸಂಜಯ್ ಸೇನಾ ನಾಯಕ್ ಇನ್ನಷ್ಟು ಅಧ್ಯಯನ ನಡೆಸಿ ಹುಳವನ್ನು ಪತ್ತೆ ಹಚ್ಚಿದರು. ಮೆದುಳಿನಲ್ಲಿ ಈ ರೀತಿಯ ಹುಳಗಳು ಇರುತ್ತವೆ ಎನ್ನುವ ಬಗ್ಗೆ ಯಾವುದೇ ಮೆಡಿಕಲ್ ಪಠ್ಯ ಪುಸ್ತಕದಲ್ಲಾಗಲಿ ಅಥವಾ ಕೇಸ್ ಸ್ಟಡಿಯಲ್ಲಾಗಲೀ ಉಲ್ಲೇಖವಿಲ್ಲದ ಕಾರಣ ಈ ಕೇಸ್ ಗಮನ ಸೆಳೆದಿತ್ತು.

”ಒಫಿಡಾಸ್ಕರ್ ರಾಬಟ್ರ್ಸಿ ನೆಮಟೋಡ್ ಜಾತಿಗೆ ಸೇರಿದ ಮೂರನೇ ಹಂತದ ಲಾರ್ವಾ ಇದಾಗಿದೆ. ವೈದ್ಯಕೀಯ ಇತಿಹಾಸದಲ್ಲಿ ದಾಖಲಾದ ಮೊದಲ ಕೇಸ್ ಇದಾಗಿದೆ. ಸಾಮಾನ್ಯವಾಗಿ ಈ ಪರಾವಲಂಬಿ ಹುಳ ನ್ಯೂ ಸೌತ್ ವೇಲ್ಸ್ ನಲ್ಲಿ ಕಾಣ ಸಿಗುವುದು ಹೆಬ್ಬಾವುಗಳ ಜಠರ ಕರುಳಿನಲ್ಲಿ. ಆದರೆ ಮನುಷ್ಯರಲ್ಲಿ ಕಂಡು ಬಂದಿದ್ದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಲಿದೆ” ಎಂದು ಡಾ. ಸೇನಾ ನಾಯಕ್ ಹೇಳಿದ್ದಾರೆ.

Related post

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…

Leave a Reply

Your email address will not be published. Required fields are marked *