ಕೊರೊನಾ ಬೆನ್ನಲ್ಲೇ ಪೊವಾಸನ್ ವೈರಸ್ ಕಾಟ – ಪ್ರಾಣಿಗಳ ಮೇಲಿನ ಉಣ್ಣೆ ಹುಳುಗಳಿಂದ ಹರಡುತ್ತೆ ಈ ರೋಗ, ಇದಕ್ಕೆ ಚಿಕಿತ್ಸೆಯೇ ಇಲ್ಲ..!!

ಕೊರೊನಾ ಬೆನ್ನಲ್ಲೇ ಪೊವಾಸನ್ ವೈರಸ್ ಕಾಟ – ಪ್ರಾಣಿಗಳ ಮೇಲಿನ ಉಣ್ಣೆ ಹುಳುಗಳಿಂದ ಹರಡುತ್ತೆ ಈ ರೋಗ, ಇದಕ್ಕೆ ಚಿಕಿತ್ಸೆಯೇ ಇಲ್ಲ..!!

ನ್ಯೂಸ್ ಆ್ಯರೋ‌ : ಕೊರೊನಾ – 2020ರಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ವೈರಸ್ ಹೆಸರು ಕೇಳಿದರೆ ಈಗಲೂ ಹಲವರು ಬೆಚ್ಚಿ ಬೀಳುತ್ತಾರೆ. ವಿಶ್ವನ್ನೇ ನಡುಗಿಸಿದ್ದ ಈ ವೈರಸ್ ನ ಹಾವಳಿಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಂತೆಯೇ ಆರೋಗ್ಯ ತಜ್ಞರು ಹೊಸದೊಂದು ಎಚ್ಚರಿಕೆ ನೀಡಿದ್ದಾರೆ. ಪೊವಾಸನ್ ಎಂಬ ವೈರಸ್ ಹರಡುತ್ತಿದ್ದು, ಇದರಿಂದ ಅಮೆರಿಕದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಪೊವಾಸನ್ ವೈರಸ್ ದಾಳಿ ಮಾಡಿದರೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇದು ಮೆದುಳಿನಲ್ಲಿ ಉರಿಯೂತ ಉಂಟು ಮಾಡುತ್ತದೆ. ಇತ್ತೀಚೆಗೆ ಯುಎಸ್, ಕೆನಡ, ರಷ್ಯಾಗಳಲ್ಲಿ ಈ ವೈರಸ್ ಪತ್ತೆಯಾಗಿರುವುದಾಗಿ ವರದಿಯಾಗಿದ್ದು, ಉಣ್ಣಿಗಳಿಂದ ಹರಡುತ್ತದೆ ಎನ್ನಲಾಗಿದೆ.

ಯುಎಸ್‍ಎಯಲ್ಲಿ ಪ್ರತೀ ವರ್ಷ ಸುಮಾರು 25 ಮಂದಿಗೆ ಈ ಸೋಂಕು ತಗುಲುತ್ತಿದ್ದು, ಇತ್ತೀಚೆಗೆ ವರದಿಯಾದ ಸಾವು ಮೂರನೆಯದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. ಜಿಂಕೆ, ಅಳಿಲು ಮುಂತಾದ ಪ್ರಾಣಿಗಳ ಮೇಲಿರುವ ಸೋಂಕು ಪೀಡಿತ ಉಣ್ಣಿಗಳು ಮಾನವನಿಗೆ ಕಚ್ಚುವ ಮೂಲಕ ರೋಗ ಹರಡುತ್ತದೆ. ಸೋಂಕು ಪೀಡಿತ 10 ಮಂದಿಯ ಪೈಕಿ ಒಬ್ಬರು ಮೃತಪಡುತ್ತಾರೆ.

ಲಕ್ಷಣಗಳೇನು?

  • ಆರಂಭದಲ್ಲಿ ಬಹುತೇಕರಿಗೆ ಯಾವುದೇ ಲಕ್ಷಣ ಕಂಡುಬರುವುದಿಲ್ಲ.
  • ಲಕ್ಷಣ ಕಂಡು ಬರಲು ಸೋಂಕು ತಗುಲಿದ 1 ವಾರದಿಂದ 1 ತಿಂಗಳಿನವರೆಗೆ ಸಮಯ ಹಿಡಿಯುತ್ತದೆ.
  • ಜ್ವರ, ತಲೆನೋವು, ಸುಸ್ತು, ಆಗಾಗ ವಾಂತಿ ಮಾಡುವುದು ಸಾಮಾನ್ಯ ಲಕ್ಷಣಗಳು
  • ಕೆಲವೊಮ್ಮೆ ಮೆದುಳಿನ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ
  • ಗೊಂದಲ, ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು, ಮಾತನಾಡಲು ತೊಂದರೆ ಕಂಡು ಬರುತ್ತದೆ.
  • ಈ ಕಾಯಿಲೆ ಗುಣವಾದವರ ಪೈಕಿ ಬಹುತೇಕರು ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಾರೆ. ಸ್ಮರಣೆ ಶಕ್ತಿ ಕುಂಠಿತ, ಆಗಾಗ ಕಾಣಿಸಿಕೊಳ್ಳುವ ತಲೆನೋವು, ಸ್ನಾಯು ಸೆಳೆತ ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು.

ಚಿಕಿತ್ಸೆ

ಮೊದಲೇ ಹೇಳಿದಂತೆ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ವಿಶ್ರಾಂತಿ, ದ್ರವ ರೂಪದ ಆಹಾರ ಸೇವನೆ, ನೋವು ನಿವಾರಕ ಔಷಧಗಳ ಬಳಕೆಯಿಂದ ಸ್ವಲ್ಪ ಮಟ್ಟಿನ ಪ್ರಯೋಜನ ಪಡೆಯಬಹುದು. ಉಸಿರಾಟ, ಮೆದುಳಿನ ಊತದ ತೊಂದರೆ ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *