ಅಮೆರಿಕದ ಒತ್ತಡಕ್ಕೆ ಮಣಿಯಿತಾ ಇಸ್ರೇಲ್? – ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ ನೀಡಿದ್ಯಾಕೆ ಇಸ್ರೇಲ್?

ಅಮೆರಿಕದ ಒತ್ತಡಕ್ಕೆ ಮಣಿಯಿತಾ ಇಸ್ರೇಲ್? – ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ ನೀಡಿದ್ಯಾಕೆ ಇಸ್ರೇಲ್?

ನ್ಯೂಸ್ ಆ್ಯರೋ : ಕಳೆದ ಹಲವು ದಿನಗಳಿಂದ ಇಸ್ರೇಲಿನಲ್ಲಿ ಎಲ್ಲಿ ನೋಡಿದರು ಮದ್ದು ಗುಂಡುಗಳ ಮೊರೆತ, ರಕ್ತ ಸಿಕ್ತ ದೇಹಗಳು, ನಾಮವಶೇಷಗೊಂಡ ಕಟ್ಟಡಗಳೇ ಕಾಣುತ್ತಿದ್ದವು. ಆದರೆ ಇದೀಗ ಅಮೆರಿಕಾದ ಆರ್ಭಟಕ್ಕೆ ಇಸ್ರೇಲ್ ಬಾಲ ಮುದುಡಿಕೊಂಡಿದೆ. ಹೌದು, ಅಮೆರಿಕಾರ ಒತ್ತಡಕ್ಕೆ ಮಣಿದು ಹಮಾಸ್ ಮೇಲಿನ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನತನ್ಯಾಹು ಅಲ್ಪ ವಿರಾಮ ಘೋಷಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಕದನ ವಿರಾಮ ಘೋಷಿಸುವಂತೆ ಇಸ್ರೇಲನ್ನು ಒತ್ತಾಯಿಸಿದ್ದರು. ಸತತ ಇತ್ತಡಕ್ಕೆ ಮಣಿದಿರುವ ಇಸ್ರೇಲ್ ಇದೀಗ ಯುದ್ಧಕ್ಕೆ ಅಲ್ಪ ವಿರಾಮ ಘೋಷಿಸಿದೆ.

ಮಸಣವಾಯ್ತು ಗಾಜಾ

ಸದ್ಯ, ಗಾಜಾ ಅಕ್ಷರಶಃ ಮಸಣವಾಗಿದೆ ಸಾವಿನ ಸಂಖ್ಯೆ ಬರೋಬ್ಬರಿ 10,000ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗಿದ್ದರೂ ಗಾಜಾದ ಮೇಲಿನ ಹಮಾಸ್ ನಿಯಂತ್ರಣವನ್ನು ಕೊನೆಗೊಳಿಸುವ ಇಸ್ರೇಲ್ ಹಾಗೂ ನೆತನ್ಯಾಹು ಅವರು ಗುರಿ ಮುಂದುವರೆಯುವುದು ಶತಸಿದ್ಧ ಎಂದು ಪ್ಯಾಲೆಸ್ತೀನ್ ಆರೋಪಿಸಿದೆ.ಈ ಬಗ್ಗೆ ಮಾತನಾಡಿರುವ ನೆತನ್ಯಾಹು, ‘ನಮ್ಮ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದೆ ಗಾಜಾದಲ್ಲಿ ಯಾವುದೇ ಕದನ ವಿರಾಮ, ಸಾಮಾನ್ಯ ಕದನ ವಿರಾಮಕ್ಕೆ ನಾವು ಒಪ್ಪುವುದಿಲ್ಲ’ ಎಂದಿದ್ದಾರೆ.

ಮಾತು ಮುಂದುವರೆಸಿದ ನೆತನ್ಯಾಹು, ‘ತಂತ್ರದ ಸಣ್ಣ ವಿರಾಮಗಳವರೆಗೆ ಇಲ್ಲಿ ಒಂದು ಗಂಟೆ, ಅಲ್ಲಿ ಒಂದು ಗಂಟೆ ಯುದ್ಧ ನಡೆಯುತ್ತಿದೆ‌. ಸರಕುಗಳು, ಮಾನವೀಯ ಸರಕುಗಳು ಬರಲು ಅಥವಾ ನಮ್ಮ ಒತ್ತೆಯಾಳುಗಳು, ವೈಯಕ್ತಿಕ ಒತ್ತೆಯಾಳುಗಳನ್ನು ಬಿಡಲು ಅನುವು ಮಾಡಿಕೊಡಲು ನಾವು ಸಂದರ್ಭವನ್ನು‌ ನೋಡುತ್ತೇವೆ‌‌. ಆದರೆ ಈ ಸಾಮಾನ್ಯ ಕದನ ವಿರಾಮ ಶಾಶ್ವತ ಎಂದು ಭಾವಿಸಬೇಡಿ’ ಎಂದು ಅವರು ಎಚ್ಚರಿಸಿದ್ದಾರೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *