ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ

ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ

ನಿತ್ಯ ಬೆಳಗಿನ ತಿಂಡಿಗೆ ಏನ್ ಮಾಡೋದು ಅಂತ ಯೋಚನೆ ಮಾಡ್ತಿದ್ದಿರಾ? ಮನೆಯವರಿಗೆಲ್ಲಾ ಅದೇ ಇಡ್ಲಿ, ದೋಸೆ, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಈ ಎಲೆಕೋಸಿನ ಪಲಾವ್ ಒಮ್ಮೆ ಟ್ರೈ ಮಾಡಿ, ಎಲೆಕೋಸು ಬ್ರಸ್ಸಿಕಾ ಕುಟುಂಬ ವರ್ಗಕ್ಕೆ ಸೇರಿರುವ ತರಕಾರಿಯಾಗಿದ್ದು ತಂಪಿನ ಹವಾಮಾನ ಇದರ ಕೃಷಿಗೆ ತಕ್ಕುದಾದುದು. ಎಲೆಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು ಇದು ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಕೊಬ್ಬನ್ನು ಕರಗಿಸುವ ಅಂಶಗಳನ್ನು ಒಳಗೊಂಡಿದೆ. ಇದು ವೈದ್ಯಕೀಯ ಅಂಶಗಳನ್ನು ಹೇರಳವಾಗಿ ಒಳಗೊಂಡಿದ್ದು ನ್ಯೂಟ್ರಿಶಿಯಸ್ ಅಂಶಗಳಿಂದ ಸಮೃದ್ಧ ತರಕಾರಿ ಎಂದೆನಿಸಿದೆ.

ಪಲಾವ್‌ಗೆ ಬೇಕಾಗುವ ಪದಾರ್ಥಗಳು:

  • ಅಕ್ಕಿ – 1 ಕಪ್
  • ಎಲೆ ಕೋಸು- 250 ಗ್ರಾಂ
  • ಈರುಳ್ಳಿ – 4 (ಸಣ್ಣಗೆ ಕತ್ತರಿಸಿದಂತಹುದು)
  • ಎಣ್ಣೆ – 1/2 ಕಪ್
  • ಉಪ್ಪು- ರುಚಿಗೆ ತಕ್ಕಷ್ಟು
  • ಕಪ್ ತೆಂಗಿನ ತುರಿ – 1/2 ಕಪ್
  • ಹುರಿಗಡಲೆ – 4 ಚಮಚ
  • ಮೆಣಸಿನಕಾಯಿ – 5 – 6
  • ಸ್ವಲ್ಪ ಶುಂಠಿ
  • ಕೊತ್ತಂಬರಿ – 1 ಚಮಚ
  • ಕರಿಬೇವು- 1 ಚಮಚ
  • ಸಾಸಿವೆ – 1 ಚಮಚ
  • ಕಡಲೆ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಜೀರಿಗೆ – 1/2 ಚಮಚ
  • ಗೋಡಂಬಿ – 7-8

ಮಾಡುವ ವಿಧಾನ

  • ಮೊದಲಿಗೆ ಅನ್ನವನ್ನು ಉದುರುದುರಾಗಿ ಮಾಡಿಟ್ಟುಕೊಂಡು ಪೂರ್ಣ ತಣ್ಣಗಾಗಲು ಬಿಡಬೇಕು
  • ಇನ್ನು ಹಸಿರು ಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ, ಹುರಿಗಡಲೆಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು.
  • ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆಯನ್ನು ಹಾಕಿ ಹುರಿಯಿರಿ
  • ಕತ್ತರಿಸಿದ ಈರುಳ್ಳಿಯನ್ನು ಬೆರೆಸಿ ಗರಿ ಗರಿಯಾಗುವಂತೆ ಹುರಿಯಬೇಕು.
  • ನಂತರ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡಿದ್ದ ಎಲೆ ಕೋಸನ್ನು ಹಾಕಿ ಬೇಯುವವರೆಗು ಹುರಿಯಿರಿ.
  • ತದನಂತರ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಬೆರೆಸಿ 10 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿಯಿರಿ
  • ಈಗ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 5 ನಿಮಿಷ ಹುರಿಯಬೇಕು
  • ಕೊನೆಯಲ್ಲಿ ಕೊತ್ತಂಬರಿ, ಕರಿಬೇವು ಮತ್ತು ಹುರಿದ ಗೋಡಂಬಿಯನ್ನು ಅನ್ನದ ಮೇಲೆ ಉದುರಿಸಿದರೆ ಎಲೆಕೋಸಿನ ಪಲಾವ್ ಬ್ರೇಕ್ ಫಾಸ್ಟ್ ಗೆ ರೆಡಿಯಾಗಿರುತ್ತೆ

ಎಲೆಕೋಸಿನ ಪಲಾವ್ಗೆ ಮೊಸರು ಬಜ್ಜಿ

ಪಲಾವ್ ರಾಯ್ತ ಇಲ್ಲ ಎಂದ್ರೆ ಹೇಗೆ ಹೇಳಿ, ಮೊಸರು ಅರ್ಧ ಲೀಟರ್ ತೆಗೆದುಕೊಳ್ಳಿ , 2 ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಬಳಿಕ ಸ್ವಲ್ಪ ಕೊತ್ತಬರಿ ಸೊಪ್ಪನ್ನು ತೆಗೆದುಕೊಳ್ಳಿ ಒಂದು ಬಟ್ಟಲಿ ಮೊಸರು, ಈರುಳ್ಳಿ, ಕೊತ್ತಂಬರಿ, ಹಾಗೂ ಉಪ್ಪು ಹಾಕಿದ್ರೆ ಸಿಂಪಲ್ ರಾಯ್ತಾ ರೆಡಿಯಾಗುತ್ತೆ

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *