ಆಂಧ್ರ ಮುಖ್ಯಮಂತ್ರಿಗೆ ಶಾಕ್ ಕೊಟ್ಟ ಊರ್ವಶಿ ರೌಟೇಲಾ – ‘ಐರಾವತ’ ಬೆಡಗಿಯ ಅವಾಂತರ ಕಂಡು ‘ಕುಡಿದ್ದೀರಾ’ ಎಂದು ಕೇಳಿದ ನೆಟ್ಟಿಗರು!
- ಮನರಂಜನೆ
- July 28, 2023
- No Comment
- 158
ನ್ಯೂಸ್ ಆ್ಯರೋ : ‘ಐರಾವತ’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿದ್ದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ವರ್ಷದ ಹಿಂದೆ ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಈಕೆ ಡೇಟಿಂಗ್ ನಲ್ಲಿದ್ದಾರೆ ಎಂದು ಬಾರಿ ಸುದ್ದಿಯಾಗಿತ್ತು. ಇಬ್ಬರೂ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಬಳಿಕ ಈ ಸಂಬಂಧ ಬ್ರೇಕಪ್ ಆಗಿದೆ ಎನ್ನಲಾಗಿತ್ತು. ಊರ್ವಶಿ ರಿಷಬ್ ಅವರನ್ನು ಬಿಡದೆ ಕಾಡುತ್ತಿದ್ದರಂತೆ. ರಿಷಬ್ ಪಂತ್ ಅವರಿಗೆ ಅಪಘಾತವಾದಾಗಲೂ ಸೋಶಿಯಲ್ ಮೀಡಿಯಾದಲ್ಲಿ ‘ಪ್ರಾರ್ಥನೆ’ ಎಂದು ಬರೆದುಕೊಂಡಿದ್ದರಂತೆ. ಇದೀಗ ಅದೇ ಊರ್ವಶಿ ಮತ್ತೊಂದು ಎಡವಟ್ಟು ಮಾಡಿಕೊಂಡು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಮುಖ್ಯಮಂತ್ರಿಗೆ ಶಾಕ್ ಕೊಟ್ಟ ಊರ್ವಶಿ!
ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ಊರ್ವಶಿ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಶಾಕ್ ನೀಡಿದ್ದಾರೆ. ಟಾಲಿವುಡ್ ನಟ, ರಾಜಕಾರಣಿಯಾಗಿರುವ ಪವನ್ ಕಲ್ಯಾಣದ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂದು ಕರೆದು ಪೋಸ್ಟ್ ಹಾಕಿರುವುದೇ ಈ ಶಾಕ್ ಗೆ ಕಾರಣ…!
ಇಂದು ಈ ನಟಿ ನಟಿಸಿರುವ ‘ಬ್ರೋ’ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವರುಣ್ ತೇಜ್ ಹಾಗೂ ಪವನ್ ಕಲ್ಯಾಣ್ ನಟಿಸಿದ್ದಾರೆ. ಈ ಚಿತ್ರದ ಕುರಿತು ವಿಷಯ ಹಂಚಿಕೊಂಡಿರೋ ನಟಿ, ‘ಗೌರವಾನ್ವಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ಬ್ರೋ ಅವತಾರದಲ್ಲಿ. ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.
ಊರ್ವಶಿಯನ್ನು ರುಬ್ಬಿದ ನೆಟ್ಟಿಗರು!
ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನಟಿ ಊರ್ವಶಿ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಕೆಲವರು, ‘ಊರ್ವಶಿ ಈ ರೀತಿ ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೆ ಎಂದರೆ, ಮತ್ತೆ ಕೆಲವರು ಸಿನಿಮಾದಲ್ಲಿ ನಟಿಸಿದರೆ ಸಾಲದು ಕಡೆಯ ಪಕ್ಷ ನಿಮ್ಮ ರಾಜ್ಯದ ಬಗ್ಗೆಯಾದ್ರೂ ತಿಳಿದುಕೊಳ್ಳಿ. ನಿಮ್ಮ ಹೇಳಿಕೆ ಕೇಳಿ ಆಂಧ್ರ ಸಿಎಂ ಜಗನ್ ಮೋಹನ್ ಅವರಿಗೆ ಶಾಕ್ ಆಗಿದೆ ಎಂದಿದ್ದಾರೆ.
ಇನ್ನೂ ಕೆಲವರು ಪವನ್ ಕಲ್ಯಾಣ್ ಅವರನ್ನು ಗುರಿಯಾಗಿಸಿ ‘ಪವನ್ ಕಲ್ಯಾಣ್ ಮುಖ್ಯಮಂತ್ರಿಯಲ್ಲ ಅವರಿಂದ ಎಂಎಲ್ಎ ಆಗುವುದಕ್ಕೂ ಆಗಲ್ಲ. ಅವರನ್ನು ಸಿಎಂ ಅಂತೀರಲ್ಲ ಮೊದಲು ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ’ ಎಂದಿದ್ದಾರೆ.
ಈ ಹಿಂದೆಯೂ ಟ್ರೋಲ್ ಆಗಿದ್ದ ನಟಿ!
ನಟಿ ಊರ್ವಶಿ ರೌಟೇಲಾ ಹೀಗೆ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕಾನ್ ಪೆಸ್ಟಿವಲ್ ನಲ್ಲಿ ಭಾಗವಹಿಸಿದ್ದಾಗ ಅವರು ಧರಿಸಿದ್ದ ನೆಕ್ಪೀಸ್ ಎಲ್ಲರ ಗಮನ ಸೆಳೆದಿತ್ತು. ಮೊಸಳೆ ಮರಿಯ ನೆಕ್ಪೀಸ್ ಅದಾಗಿತ್ತು. 3 ಮೊಸಳೆ ಮರಿಗಳು ಆಕೆಯ ಕುತ್ತಿಗೆಯನ್ನು ಸುತ್ತುವರೆದಂತೆ ಇದ್ದ ಆಭರಣ ಎಲ್ಲರ ಗಮನ ಸೆಳೆದಿತ್ತು. ಜೊತೆಗೆ ಕಿವಿಯಲ್ಲಿ ಅದೇ ತರಹದ ಮೊಸಳೆ ಡಿಸೈನಿನ ಓಲೆ ನೇತಾಡುತ್ತಿತ್ತು. ಈ ವಿಚಾರಕ್ಕೂ ಊರ್ವಶಿ ಟ್ರೋಲ್ ಆಗಿದ್ದರು.